ಆ್ಯಪ್ನಗರ

3 ಎಕರೆ ಜಮೀನಿನಲ್ಲಿ 32 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆದ ಭೂಪರು ಅರೆಸ್ಟ್

ಮೆಣಸಿನಕಾಯಿ ಬೆಳೆಯಲು ವರ್ಷದ ಹಿಂದೆ ಗುತ್ತಿಗೆ ಪಡೆದು ಸುಮಾರು 3 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಗಾಂಜಾ ಬೆಳೆಯಲಾಗಿದ್ದು, ನೆಪಕ್ಕೆಂಬಂತೆ ಒಂದಷ್ಟು ಮೆಣಸಿನಕಾಯಿ ಗಿಡ ಅಲ್ಲಲ್ಲಿ ಬೆಳೆಯಲಾಗಿದೆ.

Vijaya Karnataka 10 Dec 2018, 8:00 am
ಸಂಡೂರು: ತಾಲೂಕಿನ ತಾರಾನಗರದ ಜಮೀನೊಂದರಲ್ಲಿ ಗಾಂಜಾ ಬೆಳೆ ಬೆಳೆದಿರುವ ಪ್ರಕರಣ ಪತ್ತೆಯಾಗಿದ್ದು, ಮೂವರನ್ನು ಸಂಡೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ganaja


ತಾರಾನಗರದ ಭೈರವ ತೀರ್ಥದ ದಾರಿಯಲ್ಲಿನ ಜಮೀನೊಂದರಲ್ಲಿ ಗಾಂಜಾ ಬೆಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಅಂತಾಪುರ ಕೊರಚರಹಟ್ಟಿಯ ಹಂಪಣ್ಣ (40), ಗಂಗಾಧರ (42), ರುದ್ರೇಶ (42) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ದಿ.ಮೇದಾರ ಮಲಿಯಮ್ಮ ಎಂಬುವವರ ಮಕ್ಕಳಿಗೆ ಸೇರಿದ ಸ.ನಂ. 391ರ 91 ಸೆಂಟ್ಸ್‌ ಮತ್ತು ಅದಕ್ಕೆ ಹೊಂದಿಕೊಂಡ ಸ.ನಂ.397ರ 4.51 ಎಕರೆ ಜಮೀನು ಮೆಣಸಿನಕಾಯಿ ಬೆಳೆಯಲು ವರ್ಷದ ಹಿಂದೆ ಗುತ್ತಿಗೆ ಪಡೆದು ಸುಮಾರು 3 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಗಾಂಜಾ ಬೆಳೆಯಲಾಗಿದ್ದು, ನೆಪಕ್ಕೆಂಬಂತೆ ಒಂದಷ್ಟು ಮೆಣಸಿನಕಾಯಿ ಗಿಡ ಅಲ್ಲಲ್ಲಿ ಬೆಳೆಯಲಾಗಿದೆ. ಜಪ್ತಿ ಮಾಡಿದ ಗಾಂಜಾ ಬೆಳೆಯನ್ನು ತೂಕ ಮಾಡಲಾಗಿದ್ದು ಒಟ್ಟು 3.20 ಮೆಟ್ರಿಕ್‌ ಟನ್‌ ಆಗಿದ್ದು ಇದರ ಅಂದಾಜು ಮೌಲ್ಯ 32 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮೂವರು ಆರೋಪಿಗಳಲ್ಲದೇ ಇನ್ನುಳಿದ ಇಬ್ಬರು ಸಹೋದರರು ಭಾಗಿಯಾಗಿರುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಅರುಣ್‌ ರಂಗರಾಜನ್‌, ಸಿಪಿಐ ಯಲ್ಲಪ್ಪ ಘೋರ್ಪಡೆ, ಡಿಸಿಐಬಿ ಇನ್ಸ್‌ಪೆಕ್ಟರ್‌ ಷಣ್ಮುಖಪ್ಪ, ಗೆಜಿಟೆಡ್‌ ಅಧಿಕಾರಿ ಎಂ.ಬಿ.ಕಂಪ್ಲಿ, ಪಿಎಸ್‌ಐ ಸತೀಶ ಭೇಟಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ