ಶಶಿಧರ ಮೇಟಿ, ಬಳ್ಳಾರಿ
ಅಕ್ರಮ ಗಣಿಗಾರಿಕೆಯ ಕೆಲವು ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಂಡರೂ ದೋಷಾರೋಪ ಪಟ್ಟಿ ಸಲ್ಲಿಸಲು ವಿಶೇಷ ತನಿಖಾ ತಂಡ (ಎಸ್ಐಟಿ), ತಾಂತ್ರಿಕ ಹಾಗೂ ಕಾನೂನು ತೊಡಕು ಎದುರಿಸುತ್ತಿದೆ.
ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ರಾಜ್ಯ ಸರಕಾರ, ಎಸ್ಐಟಿ ಕೈಕಟ್ಟಿದೆಯೇ ಎಂಬ ಅನುಮಾನ ಮೂಡಿಸಿದೆ. ಮತ್ತೊಂದೆಡೆ ಕೆಲವು ಪ್ರಕರಣಗಳಲ್ಲಿ ಐಎಎಸ್ ಅಧಿಕಾರಿಗಳ ಹೆಸರಿದ್ದು, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವ ನಿರೀಕ್ಷೆಯಲ್ಲಿ ಸರಕಾರದ ಅನುಮತಿಗೆ ಎಸ್ಐಟಿ ಪತ್ರ ಬರೆದರೂ ಈವರೆಗೆ ಉತ್ತರ ಬಂದಿಲ್ಲ. ಇನ್ನೂ ಕೆಲವು ಪ್ರಕರಣಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದು ಎರಡು ವರ್ಷಗಳಾದರೂ ತಾಂತ್ರಿಕ ವರದಿ ಕೈಸೇರಿಲ್ಲ.
ಅವಧಿ ವಿಸ್ತರಣೆಗೆ ಹಾದಿ: ತಾಂತ್ರಿಕ ಹಾಗೂ ಕಾನೂನು ತೊಡಕು ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ, ನಿಗದಿ ಅವಧಿಯಲ್ಲಿ ಪೂರ್ಣಗೊಳ್ಳದಾಗಿದೆ. ತನಿಖೆಯ ಅವಧಿಯನ್ನು ಈ ಹಿಂದೆ ಎರಡ್ಮೂರು ಬಾರಿ ವಿಸ್ತರಿಸಲಾಗಿದೆ. 3 ಪ್ರಕರಣಗಳ ತನಿಖೆಯನ್ನು 9 ತಿಂಗಳ ಹಿಂದೆಯೇ ಪೂರ್ಣಗೊಂಡಿದೆ. ಆದರೆ, ಈ ಪ್ರಕರಣಗಳಲ್ಲಿ ಐಎಎಸ್ ಅಧಿಕಾರಿಗಳ ಹೆಸರಿದ್ದು, ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸರಕಾರದ ಅನುಮತಿ ಪಡೆಯಬೇಕಿದೆ. ಆದರೆ, ಅನುಮತಿ ಪತ್ರ ಕೈಸೇರದೇ ಮುಂದಿನ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.
ಏನಿದು ತೊಡಕು?: ಅನುಮತಿ ಕೋರಿ ಎಸ್ಐಟಿ ಬರೆದ ಪತ್ರ ಕುರಿತು ರಾಜ್ಯ ಸರಕಾರ ಕಾನೂನು ತಜ್ಞರೊಂದಿಗೆ ಚರ್ಚಿಸಿ, ಕೇಂದ್ರಕ್ಕೆ ಶಿಫಾರಸು ಮಾಡಬೇಕಿದೆ. ಸಂಬಂಧಿಸಿದ ಕೇಂದ್ರ ಇಲಾಖೆ ಅನುಮತಿ ನೀಡಿದರೆ ಮಾತ್ರ ಐಎಎಸ್ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಎಸ್ಐಟಿಗೆ ಸಾಧ್ಯವಾಗಲಿದೆ. ಪತ್ರದ ವಿಲೇವಾರಿಯ ಹಾದಿ ಮಾತ್ರ ನಿಗೂಢವಾಗಿದೆ.
ತಾಂತ್ರಿಕ ವರದಿಯ ಕಥೆ:ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಗಣಿ ಗುತ್ತಿಗೆ ಪ್ರದೇಶದಲ್ಲಿ ಯಾವ ಪ್ರಮಾಣದಲ್ಲಿ ಅದಿರು ಹೊರ ತೆಗೆಯಲಾಗಿದೆ ಎಂಬುದರ ಮಾಹಿತಿಗಾಗಿ ಕಳೆದ ಎರಡು ವರ್ಷಗಳ ಹಿಂದೆ ತಾಂತ್ರಿಕ ವರದಿ ಸಲ್ಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಎಸ್ಐಟಿ ಪತ್ರ ಬರೆದರೂ ಈವರೆಗೆ ಇಲಾಖೆಯು ವರದಿ ಸಲ್ಲಿಸಿಲ್ಲ, ಇದರಿಂದಾಗಿ ತನಿಖೆ ಪೂರ್ಣ ಗೊಂಡರೂ, ತಾಂತ್ರಿಕ ವರದಿ ಬಂದ ಮೇಲೆಯೇ ಪರಿಶೀಲನೆ ನಡೆಸಿ, ದೋಷಾರೋಪಣ ಪಟ್ಟಿ ಸಲ್ಲಿಸಬೇಕಾಗಿದೆ, ವರದಿಗಾಗಿ ಎಸ್ಐಟಿ ಕಾಯುತ್ತಿರುವುದರಿಂದ ಸುಮಾರು 10 ಪ್ರಕರಣಗಳು ದೋಷಾರೋಪಣ ಪಟ್ಟಿ ಸಲ್ಲಿಕೆಗೆ ವಿಳಂಬವಾಗಿದೆ.
ವ್ಯರ್ಥವಾಗುತ್ತಿರುವ ಎಸ್ಐಟಿ ಅವಧಿ; ಎಸ್ಐಟಿ ಅಧಿಕಾರಿಗಳು ಇಂತಹ ತ್ರಿಶಂಕು ಪರಿಸ್ಥಿತಿಯ ಬಗ್ಗೆ ಹೊರಗಡೆ ಹೇಳಲಾರದೆ ಅನಿವಾರ್ಯವಾಗಿ ಮೌನಕ್ಕೆ ಶರಣಾಗುವಂತೆ ಮಾಡಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮಯ ಸಾರಿರುವ ಕಾಂಗ್ರೆಸ್ ಸರಕಾರವು ಎಸ್ಐಟಿಗೆ ದೋಷಾರೋಪಣ ಪಟ್ಟಿ ಸಲ್ಲಿಕೆಗೆ ಎದುರಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಿದರೆ, ಕೆಲವೇ ದಿನಗಳಲ್ಲಿಯೇ ಕೆಲವೊಂದು ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಸರಕಾರ ಏಕೆ ಸಹಕರಿಸುತ್ತಿಲ್ಲವೆಂಬುದೇ ಆಶ್ಚರ್ಯಕ್ಕೆ ಕಾರಣವಾಗಿದೆ.
ಗಣಿ ಅಕ್ರಮ ವಿರುದ್ಧ ಹೋರಾಟದ ಮೂಲಕವೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವು, ಗಣಿ ಪ್ರಕರಣಗಳ ತನಿಖೆಯ ತಾರ್ಕಿಕ ಅಂತ್ಯಕ್ಕೆ ಹೆಚ್ಚಿನ ಒತ್ತು ನೀಡದಿರುವುದು ಅನುಮಾನ ಮೂಡುತ್ತದೆ. ಇಲ್ಲಿಯವರೆಗೆ ಎಸ್ಐಟಿ ದಾಖಲಿಸಿರುವ 76 ಪ್ರಕರಣಗಳ ಪೈಕಿ 28 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದ್ದು, ಸುಮಾರು 19 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದು, ಕೆಲವೊಂದು ಪ್ರಕರಣಗಳ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ತಂದಿದ್ದು, ಇನ್ನುಳಿದ ಪ್ರಕರಣಗಳು ಕೆಲವೊಂದು ಕಾರಣಗಳಿಂದಾಗಿ ತನಿಖೆಯ ಹಂತದಲ್ಲಿಯೇ ಸಾಗುವಂತಾಗಿದೆ.
ಅಕ್ರಮ ಗಣಿಗಾರಿಕೆಯ ಕೆಲವು ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಂಡರೂ ದೋಷಾರೋಪ ಪಟ್ಟಿ ಸಲ್ಲಿಸಲು ವಿಶೇಷ ತನಿಖಾ ತಂಡ (ಎಸ್ಐಟಿ), ತಾಂತ್ರಿಕ ಹಾಗೂ ಕಾನೂನು ತೊಡಕು ಎದುರಿಸುತ್ತಿದೆ.
ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ರಾಜ್ಯ ಸರಕಾರ, ಎಸ್ಐಟಿ ಕೈಕಟ್ಟಿದೆಯೇ ಎಂಬ ಅನುಮಾನ ಮೂಡಿಸಿದೆ. ಮತ್ತೊಂದೆಡೆ ಕೆಲವು ಪ್ರಕರಣಗಳಲ್ಲಿ ಐಎಎಸ್ ಅಧಿಕಾರಿಗಳ ಹೆಸರಿದ್ದು, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವ ನಿರೀಕ್ಷೆಯಲ್ಲಿ ಸರಕಾರದ ಅನುಮತಿಗೆ ಎಸ್ಐಟಿ ಪತ್ರ ಬರೆದರೂ ಈವರೆಗೆ ಉತ್ತರ ಬಂದಿಲ್ಲ. ಇನ್ನೂ ಕೆಲವು ಪ್ರಕರಣಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದು ಎರಡು ವರ್ಷಗಳಾದರೂ ತಾಂತ್ರಿಕ ವರದಿ ಕೈಸೇರಿಲ್ಲ.
ಅವಧಿ ವಿಸ್ತರಣೆಗೆ ಹಾದಿ: ತಾಂತ್ರಿಕ ಹಾಗೂ ಕಾನೂನು ತೊಡಕು ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ, ನಿಗದಿ ಅವಧಿಯಲ್ಲಿ ಪೂರ್ಣಗೊಳ್ಳದಾಗಿದೆ. ತನಿಖೆಯ ಅವಧಿಯನ್ನು ಈ ಹಿಂದೆ ಎರಡ್ಮೂರು ಬಾರಿ ವಿಸ್ತರಿಸಲಾಗಿದೆ. 3 ಪ್ರಕರಣಗಳ ತನಿಖೆಯನ್ನು 9 ತಿಂಗಳ ಹಿಂದೆಯೇ ಪೂರ್ಣಗೊಂಡಿದೆ. ಆದರೆ, ಈ ಪ್ರಕರಣಗಳಲ್ಲಿ ಐಎಎಸ್ ಅಧಿಕಾರಿಗಳ ಹೆಸರಿದ್ದು, ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸರಕಾರದ ಅನುಮತಿ ಪಡೆಯಬೇಕಿದೆ. ಆದರೆ, ಅನುಮತಿ ಪತ್ರ ಕೈಸೇರದೇ ಮುಂದಿನ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.
ಏನಿದು ತೊಡಕು?: ಅನುಮತಿ ಕೋರಿ ಎಸ್ಐಟಿ ಬರೆದ ಪತ್ರ ಕುರಿತು ರಾಜ್ಯ ಸರಕಾರ ಕಾನೂನು ತಜ್ಞರೊಂದಿಗೆ ಚರ್ಚಿಸಿ, ಕೇಂದ್ರಕ್ಕೆ ಶಿಫಾರಸು ಮಾಡಬೇಕಿದೆ. ಸಂಬಂಧಿಸಿದ ಕೇಂದ್ರ ಇಲಾಖೆ ಅನುಮತಿ ನೀಡಿದರೆ ಮಾತ್ರ ಐಎಎಸ್ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಎಸ್ಐಟಿಗೆ ಸಾಧ್ಯವಾಗಲಿದೆ. ಪತ್ರದ ವಿಲೇವಾರಿಯ ಹಾದಿ ಮಾತ್ರ ನಿಗೂಢವಾಗಿದೆ.
ತಾಂತ್ರಿಕ ವರದಿಯ ಕಥೆ:ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಗಣಿ ಗುತ್ತಿಗೆ ಪ್ರದೇಶದಲ್ಲಿ ಯಾವ ಪ್ರಮಾಣದಲ್ಲಿ ಅದಿರು ಹೊರ ತೆಗೆಯಲಾಗಿದೆ ಎಂಬುದರ ಮಾಹಿತಿಗಾಗಿ ಕಳೆದ ಎರಡು ವರ್ಷಗಳ ಹಿಂದೆ ತಾಂತ್ರಿಕ ವರದಿ ಸಲ್ಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಎಸ್ಐಟಿ ಪತ್ರ ಬರೆದರೂ ಈವರೆಗೆ ಇಲಾಖೆಯು ವರದಿ ಸಲ್ಲಿಸಿಲ್ಲ, ಇದರಿಂದಾಗಿ ತನಿಖೆ ಪೂರ್ಣ ಗೊಂಡರೂ, ತಾಂತ್ರಿಕ ವರದಿ ಬಂದ ಮೇಲೆಯೇ ಪರಿಶೀಲನೆ ನಡೆಸಿ, ದೋಷಾರೋಪಣ ಪಟ್ಟಿ ಸಲ್ಲಿಸಬೇಕಾಗಿದೆ, ವರದಿಗಾಗಿ ಎಸ್ಐಟಿ ಕಾಯುತ್ತಿರುವುದರಿಂದ ಸುಮಾರು 10 ಪ್ರಕರಣಗಳು ದೋಷಾರೋಪಣ ಪಟ್ಟಿ ಸಲ್ಲಿಕೆಗೆ ವಿಳಂಬವಾಗಿದೆ.
ವ್ಯರ್ಥವಾಗುತ್ತಿರುವ ಎಸ್ಐಟಿ ಅವಧಿ; ಎಸ್ಐಟಿ ಅಧಿಕಾರಿಗಳು ಇಂತಹ ತ್ರಿಶಂಕು ಪರಿಸ್ಥಿತಿಯ ಬಗ್ಗೆ ಹೊರಗಡೆ ಹೇಳಲಾರದೆ ಅನಿವಾರ್ಯವಾಗಿ ಮೌನಕ್ಕೆ ಶರಣಾಗುವಂತೆ ಮಾಡಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮಯ ಸಾರಿರುವ ಕಾಂಗ್ರೆಸ್ ಸರಕಾರವು ಎಸ್ಐಟಿಗೆ ದೋಷಾರೋಪಣ ಪಟ್ಟಿ ಸಲ್ಲಿಕೆಗೆ ಎದುರಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಿದರೆ, ಕೆಲವೇ ದಿನಗಳಲ್ಲಿಯೇ ಕೆಲವೊಂದು ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಸರಕಾರ ಏಕೆ ಸಹಕರಿಸುತ್ತಿಲ್ಲವೆಂಬುದೇ ಆಶ್ಚರ್ಯಕ್ಕೆ ಕಾರಣವಾಗಿದೆ.
ಗಣಿ ಅಕ್ರಮ ವಿರುದ್ಧ ಹೋರಾಟದ ಮೂಲಕವೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವು, ಗಣಿ ಪ್ರಕರಣಗಳ ತನಿಖೆಯ ತಾರ್ಕಿಕ ಅಂತ್ಯಕ್ಕೆ ಹೆಚ್ಚಿನ ಒತ್ತು ನೀಡದಿರುವುದು ಅನುಮಾನ ಮೂಡುತ್ತದೆ. ಇಲ್ಲಿಯವರೆಗೆ ಎಸ್ಐಟಿ ದಾಖಲಿಸಿರುವ 76 ಪ್ರಕರಣಗಳ ಪೈಕಿ 28 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದ್ದು, ಸುಮಾರು 19 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದು, ಕೆಲವೊಂದು ಪ್ರಕರಣಗಳ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ತಂದಿದ್ದು, ಇನ್ನುಳಿದ ಪ್ರಕರಣಗಳು ಕೆಲವೊಂದು ಕಾರಣಗಳಿಂದಾಗಿ ತನಿಖೆಯ ಹಂತದಲ್ಲಿಯೇ ಸಾಗುವಂತಾಗಿದೆ.