ಆ್ಯಪ್ನಗರ

ಗುಡೇಕೋಟೆ : ಮೊಹರಂ ಕೊನೆ ದಿನ

ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಆಚರಿಸಲ್ಪಡುವ ಮೊಹರಂ ಹಬ್ಬದ ಕೊನೆ ದಿನವಾದ ಶುಕ್ರವಾರ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ವಿಜೃಂಭಣೆಯಿಂದ ಪಂಜಾಗಳ ಮೆರವಣಿಗೆ ನಡೆಸುವ ಮೂಲಕ ಹಬ್ಬಕ್ಕೆ ಕೊನೆ ಹಾಡಲಾಯಿತು.

Vijaya Karnataka 22 Sep 2018, 5:00 am
ಕೂಡ್ಲಿಗಿ : ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಆಚರಿಸಲ್ಪಡುವ ಮೊಹರಂ ಹಬ್ಬದ ಕೊನೆ ದಿನವಾದ ಶುಕ್ರವಾರ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ವಿಜೃಂಭಣೆಯಿಂದ ಪಂಜಾಗಳ ಮೆರವಣಿಗೆ ನಡೆಸುವ ಮೂಲಕ ಹಬ್ಬಕ್ಕೆ ಕೊನೆ ಹಾಡಲಾಯಿತು.
Vijaya Karnataka Web BLR-BLY21KDL-1


ಮೆರವಣೆಗೆಯಲ್ಲಿ ಹುಲಿವೇಷಗಾರರು ಹಾಗೂ ಇತರ ವೇಷಗಾರರು ಆಕರ್ಷಕವಾಗಿ ಕುಣಿಯುತ್ತ ಜನರ ಮನಸ್ಸನ್ನು ತಮ್ಮತ್ತ ಆಕರ್ಷಿಸುವಂತೆ ಮಾಡಿದರು. ಈ ಹಬ್ಬದಲ್ಲಿ ಕಂಡು ಬರುವ ಹುಲಿವೇಷ ಕರ್ಬಲಾ ಕಾಳಗದಲ್ಲಿ ಸತ್ತವರ ದೇಹಗಳನ್ನು ವೈರಿಗಳ ಕೈಗೆ ಸಿಗದಂತೆ ಕಾಪಾಡಿದ್ದು ಹುಲಿಗಳು ಎನ್ನಲಾಗುತ್ತದೆ. ಗುಡೇಕೋಟೆಯಲ್ಲಿ ಶುಕ್ರವಾರ ನಡೆದ ಈ ಹಬ್ಬದಲ್ಲಿ ಗುಡೇಕೋಟೆ ಸೇರಿದಂತೆ ಸುತ್ತಲಿನ ನಾನಾ ಗ್ರಾಮಗಳ ಜನರು ಪಂಜಾಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶುಕ್ರವಾರ ಮದ್ಯಾಹ್ನದಿಂದ ಆರಂಭವಾದ ಮೆರವಣಿಗೆ ಸಂಜೆ 5 ರವರೆಗೂ ವಿಜೃಂಭಣೆಯಿಂದ ಜರುಗಿತು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ