ಆ್ಯಪ್ನಗರ

ಹಗರಿಬೊಮ್ಮನಹಳ್ಳಿವಿಶ್ವಹಾಲು ದಿನಾಚರಣೆ

ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಸಾಮರ್ಥ್ಯ‌ ಹೆಚ್ಚಿಸಲು ರೈತರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ರಾಬಕೊ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಭೀಮಾನಾಯ್ಕ ತಿಳಿಸಿದರು.

Vijaya Karnataka 11 Jun 2019, 5:00 am
ಹಗರಿಬೊಮ್ಮನಹಳ್ಳಿ : ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಸಾಮರ್ಥ್ಯ‌ ಹೆಚ್ಚಿಸಲು ರೈತರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ರಾಬಕೊ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಭೀಮಾನಾಯ್ಕ ತಿಳಿಸಿದರು.
Vijaya Karnataka Web hagaribommanhalli world milk day
ಹಗರಿಬೊಮ್ಮನಹಳ್ಳಿವಿಶ್ವಹಾಲು ದಿನಾಚರಣೆ


ಪಟ್ಟಣದಲ್ಲಿ ವಿಶ್ವ ಹಾಲು ದಿನಾಚರಣೆ ಸಮಾರಂಭದ ಅಧ್ಯಕ್ಷ ತೆವಹಿಸಿ ಸೋಮವಾರ ಮಾತನಾಡಿದರು.

ಒಕ್ಕೂಟದಲ್ಲಿ 1.90ಲಕ್ಷ ಲೀ.ಹಾಲು ಉತ್ಪಾದಿಸಲಾಗುತ್ತಿದೆ. ಈ ಪೈಕಿ 1.25 ಲಕ್ಷ ಲೀಟರ್‌ ಹಾಲು ಪ್ಯಾಕೆಟ್‌ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಒಟ್ಟು 40 ಸಾವಿರ ಲೀಟರ್‌ ಹಾಲನ್ನು ಕ್ಷೀರಭಾಗ್ಯ ಯೋಜನೆಗೆ ಮೀಸಲಿರಿಸಲಾಗಿದೆ. ಹೈನುಗಾರಿಕೆಯಿಂದ ವಲಸೆ ತಡೆ ಮತ್ತು ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಲು ಒತ್ತು ನೀಡಲಾಗುವುದು. ನೈಸರ್ಗಿಕವಾಗಿ ಸಮೃದ್ಧವಾಗಿರುವ ನಂದಿನಿ ಹಾಲಿನ ಗುಣಮಟ್ಟ ಹೆಚ್ಚಿಸಲು ಈಗಾಗಲೇ ಪ್ಲಕ್ಸ್‌ ಪ್ಯಾಕ್‌ಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಬಿಎಂಸಿಗಳ ಆಧುನೀಕರಣಕ್ಕೆ ಪೂರಕ ಕ್ರಮ ಕೈಗೆತ್ತಿಕೊಳ್ಳಲಾಗಿದೆ. ಕಳೆದ ಸಾಲಿನಲ್ಲಿ ಹಾಲು ಉತ್ಪಾದನೆಯಲ್ಲಿ ಏರಿಕೆಯಾಗದೇ ಒಕ್ಕೂಟ ಕೇವಲ 30ಲಕ್ಷ ರೂ.ಲಾಭಗಳಿಸಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿನ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ ಬಲಪಡಿಸಲಾಗುವುದು. ಬಳ್ಳಾರಿಯಲ್ಲಿ ಜಿಲ್ಲಾ ಖನಿಜ ಯೋಜನೆ ಅನುದಾನದಲ್ಲಿ ಮೆಗಾಭವನ ನಿರ್ಮಿಸಲಾಗುವುದು. ನಿರ್ದೇಶಕರ ಸಭೆ ನಡೆಸಿ ಒಕ್ಕೂಟದ ಬಲವರ್ಧನೆಗೆ ಪಕ್ಷಾತೀತ ಸಹಕಾರ ಪಡೆಯಲಾಗುವುದು. ಅಧ್ಯಕ್ಷ ಸ್ಥಾನ ಬಯಸದೇ ಬಂದ ಭಾಗ್ಯವಾಗಿದೆ ಎಂದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬುಕ್ಕಾ ಮಲ್ಲಿಕಾರ್ಜುನ ಪ್ರಾಸ್ತಾವಿಕ ಮಾತನಾಡಿ, ಲವಣ, ಕ್ಯಾಲ್ಸಿಯಂ ಮತ್ತು ಜೀವಸತ್ವಗಳ ಪೂರೈಕೆಗೆ ಹಾಲು ಪರಿಣಾಮಕಾರಿ. ಹಂಗಿಲ್ಲದ ಬದುಕು ಕಟ್ಟಿಕೊಳ್ಳಲು ಹೈನುಗಾರಿಕೆ ಸಹಕಾರಿಯಾಗಿದೆ ಎಂದರು.

ಒಕ್ಕೂಟದ ನಿರ್ದೇಶಕ ಜಿ.ಸತ್ಯನಾರಾಯಣ ಮಾತನಾಡಿ, ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. ಅಲ್ಲದೆ ಶೇ.10ರಷ್ಟು ಜನರು ಹೈನುಗಾರಿಕೆ ಮೂಲಕ ಜೀವನೋಪಾಯ ನಡೆಸುತ್ತಿದ್ದಾರೆ ಎಂದರು. ಅಭಿವನ ಹಾಲವೀರಪ್ಪಜ್ಜ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು. ಇದೇವೇಳೆ ಒಕ್ಕೂಟದ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಶಿವಪ್ಪವಾದಿ, ನಿರ್ದೇಶಕರಾದ ಎಂ.ಸತ್ಯನಾರಾಯಣ, ವೆಂಕನಗೌಡ ಹಿರೇಗೌಡ, ಶ್ರೀಕಾಂತಪ್ಪ, ಮರುಳಸಿದ್ದಪ್ಪ, ಭೀಮನಗೌಡ, ನಾಗಮಣಿ, ಎನ್‌.ಸೀತಾರಾಮಲಕ್ಷ್ಮಿ, ಜಿ.ಕವಿತಾ, ಒಕ್ಕೂಟದ ನಿವೃತ್ತ ಸಿಇಒ ಎಂ.ಜಿ.ಪಾಟೀಲ್‌, ಪಶುಸಂಗೋಪನಾ ಇಲಾಖೆ ಸಿವಿಒ ಡಾ.ಟಿ.ಶಶಿಧರ, ಜಿ.ಪಂ.ಮಾಜಿ ಸದಸ್ಯರಾದ ಅಕ್ಕಿತೋಟೇಶ್‌, ಹೆಗ್ಡಾಲ್‌ ರಾಮಣ್ಣ, ಪುರಸಭೆ ಸದಸ್ಯ ಹುಡೇದ್‌ ಗುರುಬಸವರಾಜ, ವಾಲ್ಮೀಕಿ ಮಹಾಸಭಾದ ಉಪಾಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ ಇದ್ದರು. ಒಕ್ಕೂಟದ ಉಪವ್ಯವಸ್ಥಾಪಕರಾದ ಈ.ಪ್ರಕಾಶ್‌, ಡಿ.ದಾಸನಗೌಡ, ವ್ಯವಸ್ಥಾಪಕ ಡಾ.ಗಂಗಾಧರ ದಿವಟರ್‌ ನಿರ್ವಹಿಸಿದರು.

ಇದಕ್ಕೂ ಮುನ್ನ ಅಗಲಿದ ಜ್ಞಾನಪೀಠ ಪ್ರಶಸ್ತಿಪುರಸ್ಕೃತ ಸಾಹಿತಿ, ರಂಗಕರ್ಮಿ ಡಾ.ಗಿರೀಶ್‌ ಕಾರ್ನಾಡ್‌ ನಿಧನಕ್ಕೆ ಸಂತಾಪಸೂಚಕ ಸಭೆ ನಡೆಸಲಾಯಿತು. ರಂಗಭೂಮಿ, ಚಲನಚಿತ್ರ ಮತ್ತು ಸಾಹಿತ್ಯಲೋಕಕ್ಕೆ ಕಾರ್ನಾಡ್‌ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ಶಾಸಕ ಅಭಿಪ್ರಾಯಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ