ಕೃಷ್ಣ ಎನ್.ಲಮಾಣಿ, ಹೊಸಪೇಟೆ
ಹಂಪಿಗೆ ಭೇಟಿನೀಡುವ ದೇಶ-ವಿದೇಶಿ ಪ್ರವಾಸಿಗರು ಹಾಗೂ ಗಣ್ಯರು, ಕಮಲ ಮಹಲ್ ಬಳಿ ಇರುವ ಈ ವಿಕಲಚೇತನ ಯುವಕನ ಜತೆ ಫೋಟೊ ಕ್ಲಿಕ್ಕಿಸಿಕೊಂಡು ಹೋಗುತ್ತಾರೆ!
ಹಂಪಿಯಲ್ಲಿ ಪುಸ್ತಕ ಮಾರಾಟಮಾಡಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಹನುಮಂತ (26) ಪ್ರವಾಸಿಗರ ಕಣ್ಮಣಿಯಾಗಿದ್ದಾನೆ. ಈ ಯುವಕ ನರದೌರ್ಬಲ್ಯದಿಂದ ಬಳಲುತ್ತಿದ್ದರೂ ಅದ್ಯಾವುದೂ ಅವನನ್ನು ಬಾಧಿಸದು! ಪ್ರವಾಸಿಗರ ಜತೆ ಲವಲವಿಕೆಯಿಂದಲೇ ವ್ಯವಹರಿಸುತ್ತಾನೆ. ಭಾರತೀಯ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆಸೇರಿ ಪ್ರಸಿದ್ಧ ನಟ, ನಟಿಯರೂ ಆತನೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅವನಿಂದ ಹಂಪಿಯ ಸ್ಮಾರಕಗಳ ಕುರಿತ ಪುಸ್ತಕಗಳನ್ನು ಖರೀದಿಸಿ, ವ್ಯಾಪಾರಕ್ಕೆ ಪ್ರೋತ್ಸಾಹಿಸಿದ್ದಾರೆ.
ಆಟೋ ಚಾಲಕರ ನೆರವು: ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಾರಟಗಿಯ ಹನುಮಂತ, ಬದುಕು ಅರಸಿ ತಾಲೂಕಿನ ಕಮಲಾಪುರಕ್ಕೆ ಬಂದಿದ್ದಾನೆ. ತನ್ನ ತಂದೆ ತೀರಿಕೊಂಡ ಬಳಿಕ ಮನೆಯ ಜವಾಬ್ದಾರಿ ಹೊತ್ತುಕೊಂಡಿರುವ ಈ ವಿಕಲಚೇತನ, ಬದುಕಿನಲ್ಲಿ ಎಂದೂ ಎದೆಗುಂದಿಲ್ಲ. ಹಂಪಿಗೆ ಬಂದ ಆರಂಭದಲ್ಲಿ ಶೌಚಾಲಯ ಶುಚಿಗೊಳಿಸುವ ಮೂಲಕ ತನ್ನ ಬದುಕಿಗೆ ಮುನ್ನುಡಿ ಬರೆದ. ಈ ಯುವಕನ ಸ್ಥಿತಿಗೆ ಮರುಗಿದ ಹಂಪಿಯ ಆಟೋ ಚಾಲಕರು, ಆತನಿಗೆ ಧನಸಹಾಯ ಮಾಡಿದರು. ಆ ಹಣದಲ್ಲಿ ಪುಸ್ತಕ ಮಾರಾಟಕ್ಕೆ ಮುಂದಾಗಿದ್ದಾನೆ.
ತಂಗಿಯ ಮದುವೆಯದ್ದೇ ಚಿಂತೆ: ಪುಸ್ತಕ ಮಾರಾಟಮಾಡಿ ಗಳಿಸಿದ ಅಲ್ಪಸ್ವಲ್ಪ ಆದಾಯದಲ್ಲೇ ಹನುಮಂತ, ತನ್ನ ತಮ್ಮ ಹರೀಶ್ಗೆ ಮೊಬೈಲ್ ಅಂಗಡಿ ಇಟ್ಟುಕೊಟ್ಟಿದ್ದಾನೆ. ತಾಯಿ ಸರೋಜಮ್ಮ ಹಾಗೂ ತಂಗಿ ಅಂಬಿಕಾ ಜತೆ ಕಮಲಾಪುರದಲ್ಲಿ ನೆಲೆಸಿದ್ದಾನೆ. ಸದ್ಯ ಹನುಮಂತನಿಗೆ ತಂಗಿಯ ಮದುವೆಯದ್ದೇ ಚಿಂತೆ. ಮದುವೆಯ ಖರ್ಚು ಸರಿದೂಗಿಸಲು ಸದ್ಯ ಹಣ ಜೋಡಿಸುತ್ತಿದ್ದಾನೆ.
ಹಂಪಿಗೆ ಭೇಟಿನೀಡುವ ದೇಶ-ವಿದೇಶಿ ಪ್ರವಾಸಿಗರು ಹಾಗೂ ಗಣ್ಯರು, ಕಮಲ ಮಹಲ್ ಬಳಿ ಇರುವ ಈ ವಿಕಲಚೇತನ ಯುವಕನ ಜತೆ ಫೋಟೊ ಕ್ಲಿಕ್ಕಿಸಿಕೊಂಡು ಹೋಗುತ್ತಾರೆ!
ಹಂಪಿಯಲ್ಲಿ ಪುಸ್ತಕ ಮಾರಾಟಮಾಡಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಹನುಮಂತ (26) ಪ್ರವಾಸಿಗರ ಕಣ್ಮಣಿಯಾಗಿದ್ದಾನೆ. ಈ ಯುವಕ ನರದೌರ್ಬಲ್ಯದಿಂದ ಬಳಲುತ್ತಿದ್ದರೂ ಅದ್ಯಾವುದೂ ಅವನನ್ನು ಬಾಧಿಸದು! ಪ್ರವಾಸಿಗರ ಜತೆ ಲವಲವಿಕೆಯಿಂದಲೇ ವ್ಯವಹರಿಸುತ್ತಾನೆ. ಭಾರತೀಯ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆಸೇರಿ ಪ್ರಸಿದ್ಧ ನಟ, ನಟಿಯರೂ ಆತನೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅವನಿಂದ ಹಂಪಿಯ ಸ್ಮಾರಕಗಳ ಕುರಿತ ಪುಸ್ತಕಗಳನ್ನು ಖರೀದಿಸಿ, ವ್ಯಾಪಾರಕ್ಕೆ ಪ್ರೋತ್ಸಾಹಿಸಿದ್ದಾರೆ.
ಆಟೋ ಚಾಲಕರ ನೆರವು: ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಾರಟಗಿಯ ಹನುಮಂತ, ಬದುಕು ಅರಸಿ ತಾಲೂಕಿನ ಕಮಲಾಪುರಕ್ಕೆ ಬಂದಿದ್ದಾನೆ. ತನ್ನ ತಂದೆ ತೀರಿಕೊಂಡ ಬಳಿಕ ಮನೆಯ ಜವಾಬ್ದಾರಿ ಹೊತ್ತುಕೊಂಡಿರುವ ಈ ವಿಕಲಚೇತನ, ಬದುಕಿನಲ್ಲಿ ಎಂದೂ ಎದೆಗುಂದಿಲ್ಲ. ಹಂಪಿಗೆ ಬಂದ ಆರಂಭದಲ್ಲಿ ಶೌಚಾಲಯ ಶುಚಿಗೊಳಿಸುವ ಮೂಲಕ ತನ್ನ ಬದುಕಿಗೆ ಮುನ್ನುಡಿ ಬರೆದ. ಈ ಯುವಕನ ಸ್ಥಿತಿಗೆ ಮರುಗಿದ ಹಂಪಿಯ ಆಟೋ ಚಾಲಕರು, ಆತನಿಗೆ ಧನಸಹಾಯ ಮಾಡಿದರು. ಆ ಹಣದಲ್ಲಿ ಪುಸ್ತಕ ಮಾರಾಟಕ್ಕೆ ಮುಂದಾಗಿದ್ದಾನೆ.
ತಂಗಿಯ ಮದುವೆಯದ್ದೇ ಚಿಂತೆ: ಪುಸ್ತಕ ಮಾರಾಟಮಾಡಿ ಗಳಿಸಿದ ಅಲ್ಪಸ್ವಲ್ಪ ಆದಾಯದಲ್ಲೇ ಹನುಮಂತ, ತನ್ನ ತಮ್ಮ ಹರೀಶ್ಗೆ ಮೊಬೈಲ್ ಅಂಗಡಿ ಇಟ್ಟುಕೊಟ್ಟಿದ್ದಾನೆ. ತಾಯಿ ಸರೋಜಮ್ಮ ಹಾಗೂ ತಂಗಿ ಅಂಬಿಕಾ ಜತೆ ಕಮಲಾಪುರದಲ್ಲಿ ನೆಲೆಸಿದ್ದಾನೆ. ಸದ್ಯ ಹನುಮಂತನಿಗೆ ತಂಗಿಯ ಮದುವೆಯದ್ದೇ ಚಿಂತೆ. ಮದುವೆಯ ಖರ್ಚು ಸರಿದೂಗಿಸಲು ಸದ್ಯ ಹಣ ಜೋಡಿಸುತ್ತಿದ್ದಾನೆ.