ಹೊಸಪೇಟೆ : ಹಂಪಿಯ ರಾಣಿ ಸ್ನಾನಗೃಹದ ಮುಂಭಾಗದ ಸ್ಥಳದಲ್ಲಿ ಪ್ರವಾಸಿಗರು ವಿಶ್ರಾಂತಿ ಪಡೆಯಲು, ಸಹಭೋಜನಕ್ಕೆ ಆಸನ ವ್ಯವಸ್ಥೆ ಕಲ್ಪಿಸುವ ಕಾರ್ಯ ಕಳೆದ ಕೆಲವು ದಿನಗಳಿಂದ ಭರದಿಂದ ನಡೆದಿದೆ.
ಮರಗಳ ಸುತ್ತಲೂ ಕುಳಿತುಕೊಳ್ಳುವುದಕ್ಕೆ ಕಟ್ಟೆ ಕಟ್ಟಲಾಗುತ್ತಿದೆ.ಇದರಿಂದ ಪ್ರವಾಸಿಗರು ನೆಮ್ಮದಿಯಿಂದ ವಿಶ್ರಾಂತಿ ಪಡೆಯಬಹುದು ಇಲ್ಲವೇ ಊಟ ಮಾಡಬಹುದಾಗಿದೆ. ಅಂದಾಜು ಹತ್ತಕ್ಕೂ ಹೆಚ್ಚು ಆಸನಗಳನ್ನು ಅಳವಡಿಸಲಾಗುತ್ತಿದೆ. ಈ ಹಿಂದೆ ಪ್ರವಾಸಿಗರು ರಾಣಿ ಸ್ನಾನಗೃಹದಲ್ಲಿನ ಉದ್ಯಾನದಲ್ಲಿ ಊಟ ಮಾಡುವುದಕ್ಕೆ ಕುಳಿತುಕೊಳ್ಳುತ್ತಿದ್ದರು. ಇದರಿಂದ ಆವರಣದಲ್ಲಿ ಗಲೀಜು ಸೃಷ್ಟಿ ಆಗುತ್ತಿತ್ತು. ಇದನ್ನು ತಪ್ಪಿಸಲು ಆಸನ ವ್ಯವಸ್ಥೆ ಮಾಡಲಾಗುತ್ತಿದೆ.
15 ದಿನಗಳಲ್ಲಿ ಕೆಲಸ ಪೂರ್ಣ: ಕಳೆದ 25 ದಿನಗಳಿಂದ 40 ಹೆಚ್ಚು ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು 15 ದಿನದೊಳಗೆ ಕೆಲಸ ಪೂರ್ಣಗೊಳ್ಳಲಿದೆ. ಈಗಾಗಲೇ ಅರ್ಧ ಭಾಗದಲ್ಲಿ ಆಸನಗಳನ್ನು ಅಳವಡಿಸಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಪ್ರವಾಸಿಗರಿಗೆ ಕುಡಿಯುವ ನೀರು ಪೂರೈಸಲು ಟ್ಯಾಂಕ್ ಅಳವಡಿಸಲಾಗುತ್ತಿದೆ. ಈ ಕಾರ್ಯ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದೆ ಎಂದು ಹೇಳಿದರು.
........
ಪ್ರವಾಸಿಗರಿಗೆ ಅನುಕೂಲವಾಗಲೆಂದು ಕುಳಿತುಕೊಳ್ಳುವ ಆಸನಗಳನ್ನು ಅಳವಡಿಸಲಾಗುತ್ತಿದೆ. ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಸ್ಮಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪ್ರವಾಸಿಗರು ವಿಶಾಲ ಜಾಗದಲ್ಲಿ ನೆಮ್ಮದಿಯಿಂದ ಕುಳಿತುಕೊಂಡು ಊಟ ಮಾಡಬಹುದಾಗಿದೆ.ಅಲ್ಲದೇ ವಿಶ್ರಾಂತಿ ಪಡೆಯಬಹುದು.
- ಕಾಳಿಮುತ್ತು, ಉಪ ಅಧೀಕ್ಷ ಕರು, ಭಾರತೀಯ ಪುರಾತತ್ವ ಇಲಾಖೆ, ಹಂಪಿ ವೃತ್ತ
.........
ರಾಣಿಸ್ನಾನ ಗೃಹದ ಬಳಿ ಈ ಹಿಂದೆ ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಇರಲಿಲ್ಲ. ಇದರಿಂದ ತೊಂದರೆ ಆಗುತ್ತಿತ್ತು. ಆದರೆ, ಈಗ ಭಾರತೀಯ ಪುರಾತತ್ವ ಇಲಾಖೆಯವರು ಕುಳಿತುಕೊಳ್ಳುವುದಕ್ಕೆ ಆಸನಗಳನ್ನು ಅಳವಡಿಸಲು ಮುಂದಾಗಿದ್ದು, ವಿಶ್ರಾಂತಿಗೆ ಅನುಕೂಲವಾಗಿದೆ.
- ರಮೇಶ, ಪ್ರಭು, ಸ್ವರೂಪ್, ಪ್ರವಾಸಿಗರು
ಮರಗಳ ಸುತ್ತಲೂ ಕುಳಿತುಕೊಳ್ಳುವುದಕ್ಕೆ ಕಟ್ಟೆ ಕಟ್ಟಲಾಗುತ್ತಿದೆ.ಇದರಿಂದ ಪ್ರವಾಸಿಗರು ನೆಮ್ಮದಿಯಿಂದ ವಿಶ್ರಾಂತಿ ಪಡೆಯಬಹುದು ಇಲ್ಲವೇ ಊಟ ಮಾಡಬಹುದಾಗಿದೆ. ಅಂದಾಜು ಹತ್ತಕ್ಕೂ ಹೆಚ್ಚು ಆಸನಗಳನ್ನು ಅಳವಡಿಸಲಾಗುತ್ತಿದೆ. ಈ ಹಿಂದೆ ಪ್ರವಾಸಿಗರು ರಾಣಿ ಸ್ನಾನಗೃಹದಲ್ಲಿನ ಉದ್ಯಾನದಲ್ಲಿ ಊಟ ಮಾಡುವುದಕ್ಕೆ ಕುಳಿತುಕೊಳ್ಳುತ್ತಿದ್ದರು. ಇದರಿಂದ ಆವರಣದಲ್ಲಿ ಗಲೀಜು ಸೃಷ್ಟಿ ಆಗುತ್ತಿತ್ತು. ಇದನ್ನು ತಪ್ಪಿಸಲು ಆಸನ ವ್ಯವಸ್ಥೆ ಮಾಡಲಾಗುತ್ತಿದೆ.
15 ದಿನಗಳಲ್ಲಿ ಕೆಲಸ ಪೂರ್ಣ: ಕಳೆದ 25 ದಿನಗಳಿಂದ 40 ಹೆಚ್ಚು ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು 15 ದಿನದೊಳಗೆ ಕೆಲಸ ಪೂರ್ಣಗೊಳ್ಳಲಿದೆ. ಈಗಾಗಲೇ ಅರ್ಧ ಭಾಗದಲ್ಲಿ ಆಸನಗಳನ್ನು ಅಳವಡಿಸಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಪ್ರವಾಸಿಗರಿಗೆ ಕುಡಿಯುವ ನೀರು ಪೂರೈಸಲು ಟ್ಯಾಂಕ್ ಅಳವಡಿಸಲಾಗುತ್ತಿದೆ. ಈ ಕಾರ್ಯ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದೆ ಎಂದು ಹೇಳಿದರು.
........
ಪ್ರವಾಸಿಗರಿಗೆ ಅನುಕೂಲವಾಗಲೆಂದು ಕುಳಿತುಕೊಳ್ಳುವ ಆಸನಗಳನ್ನು ಅಳವಡಿಸಲಾಗುತ್ತಿದೆ. ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಸ್ಮಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪ್ರವಾಸಿಗರು ವಿಶಾಲ ಜಾಗದಲ್ಲಿ ನೆಮ್ಮದಿಯಿಂದ ಕುಳಿತುಕೊಂಡು ಊಟ ಮಾಡಬಹುದಾಗಿದೆ.ಅಲ್ಲದೇ ವಿಶ್ರಾಂತಿ ಪಡೆಯಬಹುದು.
- ಕಾಳಿಮುತ್ತು, ಉಪ ಅಧೀಕ್ಷ ಕರು, ಭಾರತೀಯ ಪುರಾತತ್ವ ಇಲಾಖೆ, ಹಂಪಿ ವೃತ್ತ
.........
ರಾಣಿಸ್ನಾನ ಗೃಹದ ಬಳಿ ಈ ಹಿಂದೆ ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಇರಲಿಲ್ಲ. ಇದರಿಂದ ತೊಂದರೆ ಆಗುತ್ತಿತ್ತು. ಆದರೆ, ಈಗ ಭಾರತೀಯ ಪುರಾತತ್ವ ಇಲಾಖೆಯವರು ಕುಳಿತುಕೊಳ್ಳುವುದಕ್ಕೆ ಆಸನಗಳನ್ನು ಅಳವಡಿಸಲು ಮುಂದಾಗಿದ್ದು, ವಿಶ್ರಾಂತಿಗೆ ಅನುಕೂಲವಾಗಿದೆ.
- ರಮೇಶ, ಪ್ರಭು, ಸ್ವರೂಪ್, ಪ್ರವಾಸಿಗರು