ಆ್ಯಪ್ನಗರ

ಈ ಬಾರಿ ಹಂಪಿ ಉತ್ಸವ ಅನುಮಾನ: ಚರ್ಚಿಸಿ ತೀರ್ಮಾನ ಎಂದ ಡಿಕೆಸಿ

ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಹಂಪಿ ಉತ್ಸವ ಬೇಕೇ? ಮತ್ತು ಬೇಡವೇ?

Vijaya Karnataka Web 20 Nov 2018, 8:21 am
ಬಳ್ಳಾರಿ: ರಾಜ್ಯದಲ್ಲಿ ಬರ ಇರುವುದರಿಂದ ಪ್ರಸಕ್ತ ವರ್ಷ ಹಂಪಿ ಉತ್ಸವ ನಡೆಸಬೇಕೆ? ಬೇಡವೇ? ಎಂಬುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಹಾಗೂ ಸರಕಾರದೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.
Vijaya Karnataka Web shivakumar


ತ್ರೈಮಾಸಿಕ ಕೆಡಿಪಿ ಸಭೆ ಮುಗಿದ ನಂತರ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಹಂಪಿ ಉತ್ಸವ ಬೇಕೇ? ಮತ್ತು ಬೇಡವೇ? ಎನ್ನುವ ಗೊಂದಲವಿದೆ. ಸರಕಾರದ ಹಂತದಲ್ಲಿಯೇ ತೀರ್ಮಾನ ಮಾಡಲಾಗುತ್ತದೆ ಎಂದರು.

ಸಚಿವ ಸ್ಥಾನ ಖಚಿತ:

ಬಳ್ಳಾರಿ ದೊಡ್ಡ ಜಿಲ್ಲೆ. ಕಾಂಗ್ರೆಸ್‌ನಿಂದ ಆರು ಜನ ಗೆದ್ದಿದ್ದಾರೆ. ಈಗ ಒಬ್ಬರು ಸಂಸದರನ್ನು ಜಿಲ್ಲೆ ಕೊಟ್ಟಿದೆ. ಹೀಗಾಗಿ, ಜಿಲ್ಲೆಗೆ ಸಚಿವ ಸ್ಥಾನ ಹಂಚಿಕೆ ಮಾಡುವುದು ಖಚಿತ. ಆದರೆ, ಯಾರಿಗೆ ಎನ್ನುವುದನ್ನು ನಿರ್ಧಾರ ಮಾಡಿಲ್ಲ. ಸಚಿವ ಸಂಪುಟ ವಿಸ್ತರಣೆಯ ಯಾವುದೇ ಬೆಳವಣಿಗೆ ಸದ್ಯಕ್ಕಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ