ಆ್ಯಪ್ನಗರ

ಟಿಪ್ಪು ಬದಲು ಹನುಮ ಜಯಂತಿ: ಯೋಗಿ ಆದಿತ್ಯನಾಥ್‌

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಟಿಪ್ಪು ಸುಲ್ತಾನ್‌ ಜಯಂತಿ ಬದಲು ಹನುಮ ಜಯಂತಿ ಆಚರಿಸಲಾಗುವುದು ಎಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹೇಳಿದರು.

Vijaya Karnataka 10 May 2018, 10:22 am
ಹೊಸಪೇಟೆ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಟಿಪ್ಪು ಸುಲ್ತಾನ್‌ ಜಯಂತಿ ಬದಲು ಹನುಮ ಜಯಂತಿ ಆಚರಿಸಲಾಗುವುದು ಎಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹೇಳಿದರು.
Vijaya Karnataka Web Tippu Hanuma jayanthi


ಇಲ್ಲಿನ ಮುನ್ಸಿಪಲ್‌ ಮೈದಾನದಲ್ಲಿ ಬುಧವಾರ ನಡೆದ ಬಿಜೆಪಿಯ ಪ್ರಚಾರ ಸಭೆಗೆ ಚಾಲನೆ ನೀಡಿದ ಅವರು 'ಕರ್ನಾಟಕದ ಮಹಾ ಜನತೆಗೆ ಹೃದಯಪೂರ್ವಕ ನಮಸ್ಕಾರಗಳು' ಎಂದೇ ಕನ್ನಡದಲ್ಲಿ ಭಾಷಣ ಆರಂಭಿಸಿದರು. ''ಕಾಂಗ್ರೆಸ್‌ ಸರಕಾರಕ್ಕೆ ರೈತಪರ ಕಾಳಜಿ ಇಲ್ಲ. ಮರಳು ಮಾಫಿಯಾದವರಿಗೆ ಮಣೆ ಹಾಕಿದೆ. ಕೇಂದ್ರ ಸರಕಾರದ ರೈತಪರ ಯೋಜನೆ ಬಳಸಿಕೊಂಡು ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆರವುಗೊಳಿಸಿ ರೈತರ ಹೊಲ-ಗದ್ದೆಗಳಿಗೆ ಸಮರ್ಪಕವಾಗಿ ನೀರು ಒದಗಿಸಬಹುದಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಈ ಕೆಲಸ ಮಾಡಿಲ್ಲ'' ಎಂದು ಟೀಕಿಸಿದರು.

''ದೇಶದಲ್ಲಿ ಬಿಜೆಪಿ ಎಲ್ಲ ವರ್ಗದವರನ್ನು ಒಗ್ಗೂಡಿಸಿದೆ. ಆದರೆ, ಕಾಂಗ್ರೆಸ್‌ ಸಮಾಜ ಒಡೆಯುತ್ತಿದೆ. ರಾಜ್ಯದಲ್ಲಿ 3,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ಗೂ ಭ್ರಷ್ಟಾಚಾರಕ್ಕೂ ಅವಿನಾಭಾವ ಸಂಬಂಧವಿದೆ. ಕೇಂದ್ರ ಸರಕಾರದ ಮುದ್ರಾ, ಫಸಲ್‌ ಬಿಮಾ ಸೇರಿ ನಾನಾ ಯೋಜನೆಗಳನ್ನು ರಾಜ್ಯ ಸರಕಾರ ಅರ್ಹರಿಗೆ ತಲುಪಿಸಿಲ್ಲ'' ಎಂದು ದೂರಿದರು.

ಬಿಜೆಪಿ ಅಭ್ಯರ್ಥಿ ಎಚ್‌.ಆರ್‌.ಗವಿಯಪ್ಪ, ಮುಖಂಡರಾದ ವಿವೇಕ್‌ ಸೋನ್ಕರ್‌, ಮೃತ್ಯುಂಜಯ ಜಿನಗಾ, ಕವಿರಾಜ್‌ ಅರಸ್‌, ರಾಣಿ ಸಂಯುಕ್ತಾ ಸೇರಿ ಇತರರಿದ್ದರು. ಯೋಗಿ ಆದಿತ್ಯನಾಥ್‌ ಅವರಿಗೆ ಈ ಸಂದರ್ಭದಲ್ಲಿ ಮೈಸೂರು ಪೇಟ ತೊಡಿಸಿ, ಬೆಳ್ಳಿಗದೆ ನೀಡಿ ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ