ಆ್ಯಪ್ನಗರ

ಕಂಪ್ಲಿಯಲ್ಲಿ ಸಾಮರಸ್ಯದ ಪಾದಯಾತ್ರೆ

ಸಮೀಪದ ಗೋನಾಳ ಗ್ರಾಮದಲ್ಲಿ ಕ್ಷ ುಲ್ಲಕ ಕಾರಣಕ್ಕೆ ಘರ್ಷಣೆಯಾಗಿದ್ದರಿಂದ ಗ್ರಾಮದಲ್ಲಿ ಶಾಂತಿ ಮೂಡಿಸಲು ಪೊಲೀಸ್‌ ಇಲಾಖೆ, ಜಿಲ್ಲಾಡಳಿತದಿಂದ ಸಾಮರಸ್ಯಕ್ಕಾಗಿ ಭಾನುವಾರ ಪಾದಯಾತ್ರೆ ನಡೆಯಿತು.

Vijaya Karnataka 11 Jun 2018, 5:00 am
ಕಂಪ್ಲಿ : ಸಮೀಪದ ಗೋನಾಳ ಗ್ರಾಮದಲ್ಲಿ ಕ್ಷ ುಲ್ಲಕ ಕಾರಣಕ್ಕೆ ಘರ್ಷಣೆಯಾಗಿದ್ದರಿಂದ ಗ್ರಾಮದಲ್ಲಿ ಶಾಂತಿ ಮೂಡಿಸಲು ಪೊಲೀಸ್‌ ಇಲಾಖೆ, ಜಿಲ್ಲಾಡಳಿತದಿಂದ ಸಾಮರಸ್ಯಕ್ಕಾಗಿ ಭಾನುವಾರ ಪಾದಯಾತ್ರೆ ನಡೆಯಿತು.
Vijaya Karnataka Web BLR-10KMP1


ಎಸ್ಪಿ ಅರುಣ್‌ ರಂಗರಾಜನ್‌ ಮಾತನಾಡಿ, ಗ್ರಾಮದಲ್ಲಿ ಕೆಲವರಿಗೆ ನೆಮ್ಮದಿ ಬೇಡವಾಗಿದೆ. ಹೀಗಾಗಿ ಗಲಾಟೆಗಳಾಗುತ್ತಿವೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಗ್ರಾಮ ತೊರೆದ ಅಮಾಯಕರು ಗ್ರಾಮಕ್ಕೆ ಬಂದು ಯಥಾ ರೀತಿ ಜೀವನ ನಡೆಸಬೇಕು. ಗ್ರಾಮದ ನಾಲ್ಕಾರು ಜನ ಮಾತ್ರ ಗಲಾಟೆ ಮಾಡುತ್ತಿದ್ದು, ಇದು ಜನರ ನೆಮ್ಮದಿ ಹಾಳು ಮಾಡಿದೆ ಎಂದರು. ಅಧ್ಯಕ್ಷ ತೆವಹಿಸಿದ್ದ ಶಾಸಕ ಜೆ.ಎನ್‌.ಗಣೇಶ ಮಾತನಾಡಿ, ದಿನವೂ ಒಬ್ಬರ ಮುಖ, ಒಬ್ಬರು ನೋಡಿಕೊಳ್ಳಬೇಕಿದ್ದ ನೀವು ಗಲಾಟೆ ಮಾಡಿಕೊಂಡು, ಗ್ರಾಮ ತೊರೆದು, ಕುಟುಂಬದವರಿಗೂ ಕಷ್ಟ ಕೊಡುವುದು ಸರಿಯೇ? ಗ್ರಾಮದ ಎಲ್ಲ ಜನತೆ ಪರಸ್ಪರ ಅಣ್ಣ, ತಮ್ಮಂದಿರಂತೆ ಬಾಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಹೇಳಿದರು.

ಜಿ.ಪಂ. ಸಿಇಒ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ನೆರೆ ಹೊರೆಯವರಲ್ಲ. ಯಾರೋ ಕಿಡಿಗೇಡಿಗಳು ಗೊಂದಲ ಸೃಷ್ಟಿಸುತ್ತಿದ್ದು, ಇದಕ್ಕೆ ಆಸ್ಪದ ಕೊಡಬಾರದು. ಎಲ್ಲರೂ ಪರಸ್ಪರ ಸಹೋದರಂತೆ ಒಂದಾಗಿ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕು ಎಂದರು.

ಮುಖಂಡ ಕಲ್ಲುಕಂಬ ಪಂಪಾಪತಿ ಮಾತನಾಡಿ, ಗ್ರಾಮದಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು ಎಂದರು. ಜಿ.ಪಂ.ಸದಸ್ಯ ಎ.ಮಾನಯ್ಯ, ಹಾಲುಮತ ಸಮಾಜದ ಮುಖಂಡ ಕೃಷ್ಣ, ಜಿ.ಪಂ.ಸದಸ್ಯ ಮುಂಡ್ರಿಗಿ ನಾಗರಾಜ, ಜೆಡಿಎಸ್‌ ಮುಖಂಡ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿದರು. ಸಭೆ ಆರಂಭಕ್ಕೂ ಮೊದಲು ಬಳ್ಳಾರಿ ಚಿಗುರು ಕಲಾ ತಂಡದಿಂದವರಿಂದ ಪರಸ್ಪರ ಸಹೋದರತೆ, ಸಾಮರಸ್ಯದಿಂದ ಜೀವಿಸುವ ಭಾವೈಕ್ಯತೆ ಗೀತೆಗಳನ್ನು ಹಾಡಿ ಗಮನ ಸೆಳೆದರು. ಬಳಿಕ ಅಧಿಕಾರಿಗಳು, ಶಾಸಕರು, ಚುನಾಯಿತ ಜನಪ್ರತಿನಿಧಿಗಳು ಸೇರಿ, ಗ್ರಾಮದ ಡಾ.ಬಾಬು ಜಗಜೀವನರಾಮ್‌ ಜನ ಜಾಗೃತಿ ವೇದಿಕೆ ನಾಮಫಲಕ ಬಳಿ ಕಟ್ಟೆಯಲ್ಲಿ ಡಾ.ಬಾಬು ಜಗಜೀವನರಾಮ್‌, ಕನಕದಾಸರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.

ನಂತರ ಎಲ್ಲರೂ ಸೇರಿ ಗ್ರಾಮದ ಓಣಿಗಳಲ್ಲಿ ಸಂಚರಿಸಿ ಸಾಮರಸ್ಯ ಪಾದಯಾತ್ರೆ ಮಾಡಿದರು.

ಈ ವೇಳೆ ಬಳ್ಳಾರಿ ವಿಜಯ ನಗರ ಶ್ರೀಕೃಷ್ಣದೇವರಾಯ ವಿವಿಯ ಎಂಎಸ್‌ಡಬ್ಲ್ಯು ವಿಭಾಗ ಮುಖ್ಯಸ್ಥ ಡಾ.ಎಂ.ಎಸ್‌.ಕುಮಾರ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾವೈಕ್ಯತೆ ಪದಗಳನ್ನು ಹಾಡಿ ಜನರ ಮನ ಸೆಳೆದರು. ಬೆಳಗ್ಗೆ ಎಸ್‌.ಕೆ.ವಿ.ವಿಯ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳು ಮನೆ, ಮನೆಗೆ ತೆರಳಿ ಆಪ್ತ ಸಮಾಲೋಚನೆ ನಡೆಸಿ, ಜನರನ್ನು ಸಭೆಗೆ ಕರೆತಂದರು.

ಹೆಚ್ಚುವರಿ ಎಸ್ಪಿ ಕೆ.ಎಚ್‌.ಜಗದೀಶ, ತಹಸೀಲ್ದಾರರಾದ ಶರಣವ್ವ, ಜಿ.ಪಂ.ಸದಸ್ಯರಾದ ಕೆ.ಶ್ರೀನಿವಾಸರಾವ್‌, ಎಂ.ವೆಂಕಟನಾರಮ್ಮ, ಗ್ರಾ.ಪಂ.ಅಧ್ಯಕ್ಷ ಶಿವನಗೌಡರೆಡ್ಡಿ ಇದ್ದರು.

ತಾ.ಪಂ.ಸದಸ್ಯರಾದ ಎಚ್‌.ಈರಣ್ಣ, ಕೆ.ಷಣ್ಮುಖಪ್ಪ, ಬಿ.ಎಸ್‌.ಶಿವಮೂರ್ತಿ, ಪುರಸಭೆ ಅಧ್ಯಕ್ಷ ಎಂ.ಸುಧೀರ್‌, ಮುಖಂಡರಾದ ಅಯೋದಿ ವೆಂಕಟೇಶ, ಸಿ.ಆರ್‌.ಹನುಮಂತ, ಆರ್‌.ಎಂ.ರಾಮಯ್ಯ, ಬಿ.ನಾರಾಯಣಪ್ಪ, ವೆಂಕಟರಾಮರಾಜು, ಟಿ.ಕೋಟಿರೆಡ್ಡಿ, ಎ.ಲಕ್ಷ್ಮಿಪತಿ, ಕರಿಯಪ್ಪ ಗುಡಿಮನಿ ಸೇರಿದಂತೆ ನಾನಾ ಸಮುದಾಯಗಳ ಮುಖಂಡರು, ಕಂದಾಯ, ಪೊಲೀಸ್‌, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಶಿಕ್ಷ ಕ ಎಸ್‌.ಜಿ.ಚಿತ್ರಗಾರ, ಡಿವೈಎಸ್ಪಿ ಸಲೀಮ್‌ ಪಾಷಾ ನಿರ್ವಹಿಸಿದರು.

-----
ಗ್ರಾಮದ ಜನ ಸೌಲಭ್ಯಕ್ಕಾಗಿ ಹೋರಾಟ ಮಾಡಬೇಕು. ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷ ಣ ಕೊಡಿಸಬೇಕು. ಯಾವುದೆ ತೊಂದರೆಗಳಾದರೆ ಪೊಲೀಸರಿಗೆ ಮಾಹಿತಿ ನೀಡಿ, ಸಹಕರಿಸಬೇಕು

-ಅರುಣ್‌ ರಂಗರಾಜನ್‌, ಎಸ್ಪಿ , ಬಳ್ಳಾರಿ

------


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ