ಆ್ಯಪ್ನಗರ

ಅಕ್ರಮವಾಗಿ ಭೂ ಪಡೆದಿಲ್ಲ: ಸಜ್ಜನ್‌ ಜಿಂದಾಲ್‌ ಸ್ಪಷ್ಟನೆ

ನಾವು ಯಾವುದೇ ಅಕ್ರಮ ಎಸಗಿ ಲ್ಯಾಂಡ್ ಪಡೆದಿಲ್ಲ. ಪಡೆಯೋ ಕೆಲಸವನ್ನು ‌ಮಾಡ್ತಿಲ್ಲ. ರಾಜಕೀಯ ನಮ್ಮ ಸಂಸ್ಥೆಗೆ ಅಗತ್ಯವಿಲ್ಲ

Vijaya Karnataka Web 8 Jun 2019, 5:37 pm
ಬಳ್ಳಾರಿ: ಕೈಗಾರಿಕೆ ಮತ್ತು ರಾಜಕೀಯ ಎರಡು ಬೇರೆ. ಜಿಂದಾಲ್ ಸಂಸ್ಥೆ ಕಾನೂನು ಪ್ರಕಾರವಿದೆ. ಎಲ್ಲವೂ ಲೀಗಲ್ ಫ್ರೇಮ್ ವರ್ಕ್‌ನಲ್ಲಿ ಮಾಡಿದ್ದೇವೆ. ಈ ಬಗ್ಗೆ ಚರ್ಚೆ ಮಾಡಲು ಇಷ್ಟವಿಲ್ಲ ಜಿಂದಾಲ್ ಸಮೂಹ ಸಂಸ್ಥೆ ಮುಖ್ಯಸ್ಥ ಸಜ್ಜನ್‌ ಜಿಂದಾಲ್‌ ತಿಳಿಸಿದ್ದಾರೆ.
Vijaya Karnataka Web ಜಿಂದಾಲ್‌
ಜಿಂದಾಲ್‌


ತೋರಣಗಲ್ಲನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗಳು ಸಂಸ್ಥೆಯ ರಾಜ್ಯ ಮಟ್ಟದ ಸಮ್ಮೇಳನದ ಬಳಿಕ ಜಿಂದಾಲ್ ಸಮೂಹ ಸಂಸ್ಥೆ ಮುಖ್ಯಸ್ಥ ಸಜ್ಜನ್ ಜಿಂದಾಲ್ ಮಾತನಾಡಿದರು.

ಜಿಂದಾಲ್‌ಗೆ ಭೂಮಿ ನೀಡಿರುವ ವಿವಾದ ಕುರಿತು ಸ್ಪಷ್ಟನೆ ನೀಡಿದರು.

ನಾವು ಯಾವುದೇ ಅಕ್ರಮ ಎಸಗಿ ಲ್ಯಾಂಡ್ ಪಡೆದಿಲ್ಲ. ಪಡೆಯೋ ಕೆಲಸವನ್ನು ‌ಮಾಡ್ತಿಲ್ಲ. ರಾಜಕೀಯ ನಮ್ಮ ಸಂಸ್ಥೆಗೆ ಅಗತ್ಯವಿಲ್ಲ ಎಂದರು.

ಕೆಲವರು ಮಾತ್ರ ಈ ವಿಷಯದ ಬಗ್ಗೆ ಮಾತನಾಡ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ರೂ ಮಾತನಾಡೋ ಹಕ್ಕು ಇದೆ. ವ್ಯವಸ್ಥೆ ಸಿಸ್ಟಮ್ ಇದೆ ಅದು ಎಲ್ಲ ನಿರ್ಣಯ ಮಾಡ್ತದೆ ಎಂದು ತಿಳಿಸಿದರು.

ಎನ್ಎಂಎಲ್ ಗಣಿ ತೆರಿಗೆ ಕೊಡೋ ವಿಚಾರ ಕೋರ್ಟ್ ನಲ್ಲಿದೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಉದ್ಯಮಿ ಸಜ್ಜನ್‌ ಜಿಂದಾಲ್‌ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ