ಮಲ್ಲಿಕಾರ್ಜುನ ಚಿಲ್ಕರಾಗಿ, ಬಳ್ಳಾರಿ
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಯಡಿ 2013-14 ರಿಂದ 2017-18ರವರೆಗೂ ಬಿಡುಗಡೆಯಾದ ಸಾವಿರಾರು ಕೋಟಿ ರೂ.ಬಳಸಿಕೊಳ್ಳಲು ಹಿಂದೆ ಬಿದ್ದಿರುವ ಹೈ-ಕ ಜಿಲ್ಲೆಯ ಅಧಿಕಾರಿಗಳು, 2018-19ನೇ ಸಾಲಿಗೆ ಹಂಚಿಕೆಯಾದ ಸಾವಿರ ಕೋಟಿ ರೂ.ಗೆ ಸಂಬಂಧಿಸಿ ಕ್ರಿಯಾಯೋಜನೆ ಸಲ್ಲಿಸಲು ತಾತ್ಸಾರ ತೋರಿದ ಅಂಶ ಬೆಳಕಿಗೆ ಬಂದಿದೆ.
ಬಳ್ಳಾರಿ, ಕಲಬುರಗಿ, ಬೀದರ್, ಯಾದಗಿರ, ರಾಯಚೂರು ಹಾಗೂ ಕೊಪ್ಪಳ ಸೇರಿ ಆರು ಜಿಲ್ಲೆಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯಗಳ ಅನುಷ್ಠಾನಕ್ಕಾಗಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಎಚ್ಕೆಆರ್ಡಿಬಿ)ಗೆ ಹೆಚ್ಚಿನ ಅನುದಾನ ಒದಗಿದೆ. ಸರಕಾರ ಕಳೆದ ಏಪ್ರಿಲ್ನಲ್ಲಿ 2018-19ನೇ ಸಾಲಿಗೆ ಸಂಬಂಧಿಸಿ 1000 ಕೋಟಿ ರೂ.ಹಂಚಿಕೆ ಮಾಡಿದೆ. ಹೈ-ಕ ಮಂಡಳಿ ಆರು ಜಿಲ್ಲೆಗಳಿಗೆ ಅನುದಾನವನ್ನು ಹಂಚಿಕೆ ಮಾಡಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕ್ರಿಯಾ ಯೋಜನೆ ಸಲ್ಲಿಸಲು ಸೂಚಿಸಿದೆ. ಐದು ತಿಂಗಳು ಕಳೆದರೂ ಕ್ರಿಯಾಯೋಜನೆ ಮಂಡಳಿಗೆ ಸಲ್ಲಿಕೆಯಾಗಿಲ್ಲ. ಇದರಿಂದಾಗಿ, ಹೊಸ ಕಾಮಗಾರಿಗಳಿಗೆ ಅನುಮೋದನೆ ಪಡೆಯಲು ಅಡ್ಡಿಯಾಗಿದೆ.
ಹಲವು ಬಾರಿ ಸೂಚನೆ: ಪ್ರಸಕ್ತ ವರ್ಷ ಸಾವಿರ ಕೋಟಿ ರೂ.ಸೇರಿ ಕಳೆದ ವರ್ಷದ ಉಳಿಕೆ ಅನುದಾನ ಒಳಗೊಂಡಂತೆ ಬೀದರ್ ಜಿಲ್ಲೆಗೆ 231.17 ಕೋಟಿ ರೂ., ಕಲಬುರಗಿಗೆ 433.67 ಕೋಟಿ ರೂ., 180.99 ಕೋಟಿ ರೂ., ರಾಯಚೂರಿಗೆ 277.76 ಕೋಟಿ ರೂ., ಕೊಪ್ಪಳಕ್ಕೆ 177.41 ಕೋಟಿ ರೂ., ಬಳ್ಳಾರಿ ಜಿಲ್ಲೆಗೆ 256.26 ಕೋಟಿ ರೂ.ಹಂಚಿಕೆ ಮಾಡಲಾಗಿದೆ. ಎಚ್ಕೆಆರ್ಡಿಬಿ ಮಾರ್ಗಸೂಚಿ ಪ್ರಕಾರ ಆಯಾ ಜಿಲ್ಲೆಗಳು ಕ್ರಿಯಾಯೋಜನೆ ತಯಾರಿಸಿ ಮಂಡಳಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಆಗಸ್ಟ್ ಅಂತ್ಯದೊಳಗೆ ಕ್ರಿಯಾಯೋಜನೆ ಸಲ್ಲಿಸುವಂತೆ ಎಚ್ಕೆಆರ್ಡಿಬಿ ಕಾರ್ಯದರ್ಶಿ ಸುಬೋದ್ ಯಾದವ್ ಗಡುವು ನೀಡಿದ್ದರು. ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಮತ್ತೆ ಸೆ.15 ರ ಗಡುವು ನೀಡಲಾಗಿತ್ತು. ಆದರೂ, ಅಧಿಕಾರಿಗಳು ಕ್ಯಾರೆ ಎಂದಿಲ್ಲ.
ಸರಕಾರವೇ ಗರಂ: ಹೈ-ಕ ಮಂಡಳಿ ಅಧಿಕಾರಿಗಳು ಸೇರಿದಂತೆ ಆರು ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆ ಸೆ.15ರಂದು ವಿಡಿಯೊ ಕಾನ್ಫರೆನ್ಸ್ ನಡೆಸಿದ ಸರಕಾರದ ಮುಖ್ಯಕಾರ್ಯದರ್ಶಿಗಳು ಹಳೆ ಕಾಮಗಾರಿಗಳ ವಿಳಂಬದ ಜತೆಗೆ ಪ್ರಸಕ್ತ ವರ್ಷದ ಸಾವಿರ ಕೋಟಿ ರೂ.ಅನುದಾನಕ್ಕೆ ಕ್ರಿಯಾಯೋಜನೆ ಸಲ್ಲಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ, ಸರಕಾರ ಹೈ-ಕ ಜಿಲ್ಲೆಗಳಿಗೆ ನಿರಂತರ ಅನುದಾನ ಬಿಡುಗಡೆ ಮಾಡುತ್ತಿದೆ. ಸಕಾಲದಲ್ಲಿ ಅನುದಾನ ಬಳಕೆ ಮಾಡಲು ಏನು ಸಮಸ್ಯೆ? ಪ್ರಸಕ್ತ ವರ್ಷ ಅನುದಾನ ಬಿಡುಗಡೆಯದರೂ ಇದುವರೆಗೂ ಕಾಮಗಾರಿಗಳಿಗೆ ಅನುಮೋದನೆ ಪಡೆಯುದೇ ಇರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಸೆ.25 ರೊಳಗೆ ಕ್ರಿಯಾಯೋಜನೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ಕೊನೆಯ ಗಡುವು ನೀಡಿದ್ದಾರೆ.
.........
ಜಿಲ್ಲಾವಾರು ಅನುದಾನ ವಿವರ (ರೂ.ಲಕ್ಷಗಳಲ್ಲಿ)
ಬೀದರ್231.17
ಕಲಬುರಗಿ433.67
ಯಾದಗಿರಿ180.99
ರಾಯಚೂರು277.76
ಕೊಪ್ಪಳ177.41
ಬಳ್ಳಾರಿ 256.26
.....
ಪ್ರಸಕ್ತ 2018-19ನೇ ಸಾಲಿಗೆ ಎಚ್ಕೆಆರ್ಡಿಬಿಗೆ ಸಾವಿರ ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಜಿಲ್ಲಾವಾರು ಅನುದಾನ ಹಂಚಿಕೆ ಮಾಡಲಾಗಿದ್ದು, ಕ್ರಿಯಾಯೋಜನೆ ಸಲ್ಲಿಸಲು ತಿಳಿಸಲಾಗಿದೆ. ಆದರೆ, ಆರು ಜಿಲ್ಲೆಗಳಿಂದ ಕ್ರಿಯಾ ಯೋಜನೆ ಸಲ್ಲಿಕೆಗೆ ವಿಳಂಬವಾಗಿದ್ದು, ಸೆ.25ರ ಗಡುವು ನೀಡಲಾಗಿದೆ.
-ಸುಬೋದ್ ಯಾದವ್, ಕಾರ್ಯದರ್ಶಿಗಳು ಎಚ್ಕೆಆರ್ಡಿಬಿ, ಕಲಬುರಗಿ
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಯಡಿ 2013-14 ರಿಂದ 2017-18ರವರೆಗೂ ಬಿಡುಗಡೆಯಾದ ಸಾವಿರಾರು ಕೋಟಿ ರೂ.ಬಳಸಿಕೊಳ್ಳಲು ಹಿಂದೆ ಬಿದ್ದಿರುವ ಹೈ-ಕ ಜಿಲ್ಲೆಯ ಅಧಿಕಾರಿಗಳು, 2018-19ನೇ ಸಾಲಿಗೆ ಹಂಚಿಕೆಯಾದ ಸಾವಿರ ಕೋಟಿ ರೂ.ಗೆ ಸಂಬಂಧಿಸಿ ಕ್ರಿಯಾಯೋಜನೆ ಸಲ್ಲಿಸಲು ತಾತ್ಸಾರ ತೋರಿದ ಅಂಶ ಬೆಳಕಿಗೆ ಬಂದಿದೆ.
ಬಳ್ಳಾರಿ, ಕಲಬುರಗಿ, ಬೀದರ್, ಯಾದಗಿರ, ರಾಯಚೂರು ಹಾಗೂ ಕೊಪ್ಪಳ ಸೇರಿ ಆರು ಜಿಲ್ಲೆಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯಗಳ ಅನುಷ್ಠಾನಕ್ಕಾಗಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಎಚ್ಕೆಆರ್ಡಿಬಿ)ಗೆ ಹೆಚ್ಚಿನ ಅನುದಾನ ಒದಗಿದೆ. ಸರಕಾರ ಕಳೆದ ಏಪ್ರಿಲ್ನಲ್ಲಿ 2018-19ನೇ ಸಾಲಿಗೆ ಸಂಬಂಧಿಸಿ 1000 ಕೋಟಿ ರೂ.ಹಂಚಿಕೆ ಮಾಡಿದೆ. ಹೈ-ಕ ಮಂಡಳಿ ಆರು ಜಿಲ್ಲೆಗಳಿಗೆ ಅನುದಾನವನ್ನು ಹಂಚಿಕೆ ಮಾಡಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕ್ರಿಯಾ ಯೋಜನೆ ಸಲ್ಲಿಸಲು ಸೂಚಿಸಿದೆ. ಐದು ತಿಂಗಳು ಕಳೆದರೂ ಕ್ರಿಯಾಯೋಜನೆ ಮಂಡಳಿಗೆ ಸಲ್ಲಿಕೆಯಾಗಿಲ್ಲ. ಇದರಿಂದಾಗಿ, ಹೊಸ ಕಾಮಗಾರಿಗಳಿಗೆ ಅನುಮೋದನೆ ಪಡೆಯಲು ಅಡ್ಡಿಯಾಗಿದೆ.
ಹಲವು ಬಾರಿ ಸೂಚನೆ: ಪ್ರಸಕ್ತ ವರ್ಷ ಸಾವಿರ ಕೋಟಿ ರೂ.ಸೇರಿ ಕಳೆದ ವರ್ಷದ ಉಳಿಕೆ ಅನುದಾನ ಒಳಗೊಂಡಂತೆ ಬೀದರ್ ಜಿಲ್ಲೆಗೆ 231.17 ಕೋಟಿ ರೂ., ಕಲಬುರಗಿಗೆ 433.67 ಕೋಟಿ ರೂ., 180.99 ಕೋಟಿ ರೂ., ರಾಯಚೂರಿಗೆ 277.76 ಕೋಟಿ ರೂ., ಕೊಪ್ಪಳಕ್ಕೆ 177.41 ಕೋಟಿ ರೂ., ಬಳ್ಳಾರಿ ಜಿಲ್ಲೆಗೆ 256.26 ಕೋಟಿ ರೂ.ಹಂಚಿಕೆ ಮಾಡಲಾಗಿದೆ. ಎಚ್ಕೆಆರ್ಡಿಬಿ ಮಾರ್ಗಸೂಚಿ ಪ್ರಕಾರ ಆಯಾ ಜಿಲ್ಲೆಗಳು ಕ್ರಿಯಾಯೋಜನೆ ತಯಾರಿಸಿ ಮಂಡಳಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಆಗಸ್ಟ್ ಅಂತ್ಯದೊಳಗೆ ಕ್ರಿಯಾಯೋಜನೆ ಸಲ್ಲಿಸುವಂತೆ ಎಚ್ಕೆಆರ್ಡಿಬಿ ಕಾರ್ಯದರ್ಶಿ ಸುಬೋದ್ ಯಾದವ್ ಗಡುವು ನೀಡಿದ್ದರು. ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಮತ್ತೆ ಸೆ.15 ರ ಗಡುವು ನೀಡಲಾಗಿತ್ತು. ಆದರೂ, ಅಧಿಕಾರಿಗಳು ಕ್ಯಾರೆ ಎಂದಿಲ್ಲ.
ಸರಕಾರವೇ ಗರಂ: ಹೈ-ಕ ಮಂಡಳಿ ಅಧಿಕಾರಿಗಳು ಸೇರಿದಂತೆ ಆರು ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆ ಸೆ.15ರಂದು ವಿಡಿಯೊ ಕಾನ್ಫರೆನ್ಸ್ ನಡೆಸಿದ ಸರಕಾರದ ಮುಖ್ಯಕಾರ್ಯದರ್ಶಿಗಳು ಹಳೆ ಕಾಮಗಾರಿಗಳ ವಿಳಂಬದ ಜತೆಗೆ ಪ್ರಸಕ್ತ ವರ್ಷದ ಸಾವಿರ ಕೋಟಿ ರೂ.ಅನುದಾನಕ್ಕೆ ಕ್ರಿಯಾಯೋಜನೆ ಸಲ್ಲಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ, ಸರಕಾರ ಹೈ-ಕ ಜಿಲ್ಲೆಗಳಿಗೆ ನಿರಂತರ ಅನುದಾನ ಬಿಡುಗಡೆ ಮಾಡುತ್ತಿದೆ. ಸಕಾಲದಲ್ಲಿ ಅನುದಾನ ಬಳಕೆ ಮಾಡಲು ಏನು ಸಮಸ್ಯೆ? ಪ್ರಸಕ್ತ ವರ್ಷ ಅನುದಾನ ಬಿಡುಗಡೆಯದರೂ ಇದುವರೆಗೂ ಕಾಮಗಾರಿಗಳಿಗೆ ಅನುಮೋದನೆ ಪಡೆಯುದೇ ಇರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಸೆ.25 ರೊಳಗೆ ಕ್ರಿಯಾಯೋಜನೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ಕೊನೆಯ ಗಡುವು ನೀಡಿದ್ದಾರೆ.
.........
ಜಿಲ್ಲಾವಾರು ಅನುದಾನ ವಿವರ (ರೂ.ಲಕ್ಷಗಳಲ್ಲಿ)
ಬೀದರ್231.17
ಕಲಬುರಗಿ433.67
ಯಾದಗಿರಿ180.99
ರಾಯಚೂರು277.76
ಕೊಪ್ಪಳ177.41
ಬಳ್ಳಾರಿ 256.26
.....
ಪ್ರಸಕ್ತ 2018-19ನೇ ಸಾಲಿಗೆ ಎಚ್ಕೆಆರ್ಡಿಬಿಗೆ ಸಾವಿರ ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಜಿಲ್ಲಾವಾರು ಅನುದಾನ ಹಂಚಿಕೆ ಮಾಡಲಾಗಿದ್ದು, ಕ್ರಿಯಾಯೋಜನೆ ಸಲ್ಲಿಸಲು ತಿಳಿಸಲಾಗಿದೆ. ಆದರೆ, ಆರು ಜಿಲ್ಲೆಗಳಿಂದ ಕ್ರಿಯಾ ಯೋಜನೆ ಸಲ್ಲಿಕೆಗೆ ವಿಳಂಬವಾಗಿದ್ದು, ಸೆ.25ರ ಗಡುವು ನೀಡಲಾಗಿದೆ.
-ಸುಬೋದ್ ಯಾದವ್, ಕಾರ್ಯದರ್ಶಿಗಳು ಎಚ್ಕೆಆರ್ಡಿಬಿ, ಕಲಬುರಗಿ