ಆ್ಯಪ್ನಗರ

ಬಳ್ಳಾರಿ: ತನ್ನ ಮನೆಗೆ ಬರಲು ಒಪ್ಪದ ಪತ್ನಿಯನ್ನು ಕೊಲೆಗೈದ ಪತಿ, 9 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು!

​​ಬಲ್ಲಾ ಹುಣ್ಸಿಯ ಶಫಿಯೊಂದಿಗೆ ಕಳೆದ 9 ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕೆಲಸ ತೊರೆದು ತನ್ನೊಂದಿಗೆ ಹಗರಿಬೊಮ್ಮನಹಳ್ಳಿಯಲ್ಲಿ ವಾಸಿಸುವಂತೆ ಪತ್ನಿಯನ್ನು ಪತಿ ಪೀಡಿಸುತ್ತಿದ್ದರು. ಕೆಲವು ತಿಂಗಳಿಂದ ಪರಸ್ಪರರ ನಡುವೆ ವಾಗ್ವಾದ, ಜಗಳ ತೀವ್ರ ವಿಕೋಪಕ್ಕೆ ತಿರುಗಿತ್ತು. ಹಲವು ಬಾರಿ ಹಿರಿಯರು ಪಂಚಾಯಿತಿ ನಡೆಸಿ, ಪರಸ್ಪರರಿಗೆ ಬಿಡುಗಡೆ ನೀಡಲು ಸಮ್ಮತಿಸಿದ್ದರು.

Vijaya Karnataka Web 12 Feb 2021, 8:16 am
ಹಗರಿಬೊಮ್ಮನಹಳ್ಳಿ: ಪರಸ್ಪರ ಹೊಂದಾಣಿಕೆ ಇಲ್ಲದನ್ನೇ ನೆಪವಾಗಿರಿಸಿ ಪತ್ನಿಯನ್ನು ಕೊಲೆ ಮಾಡಿದ ಪತಿ, ಪೊಲೀಸರಿಗೆ ಖುದ್ದು ಶರಣಾದ ಘಟನೆ ಗುರುವಾರ ನಡೆದಿದೆ. ಹೂವಿನಹಡಗಲಿಯ ಮನ್ಸೂರಾ ನೂರ್‌ಆಸ್ಮಾ(30) ಕೊಲೆಯಾದ ಗೃಹಿಣಿ. ಅವರು ಹೂವಿನಹಡಗಲಿಯ ಜಿ.ಪಂ. ಉಪ ವಿಭಾಗೀಯ ಕಚೇರಿಯಲ್ಲಿಯಲ್ಲಿ ಡಾಟಾ ಎಂಟ್ರಿ ಆಪರೇಟರ್‌ ಕೆಲಸ ಮಾಡುತ್ತಿದ್ದರು.
Vijaya Karnataka Web husband wife


ಬಲ್ಲಾ ಹುಣ್ಸಿಯ ಶಫಿಯೊಂದಿಗೆ ಕಳೆದ 9 ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕೆಲಸ ತೊರೆದು ತನ್ನೊಂದಿಗೆ ಹಗರಿಬೊಮ್ಮನಹಳ್ಳಿಯಲ್ಲಿ ವಾಸಿಸುವಂತೆ ಪತ್ನಿಯನ್ನು ಪತಿ ಪೀಡಿಸುತ್ತಿದ್ದರು. ಕೆಲವು ತಿಂಗಳಿಂದ ಪರಸ್ಪರರ ನಡುವೆ ವಾಗ್ವಾದ, ಜಗಳ ತೀವ್ರ ವಿಕೋಪಕ್ಕೆ ತಿರುಗಿತ್ತು. ಹಲವು ಬಾರಿ ಹಿರಿಯರು ಪಂಚಾಯಿತಿ ನಡೆಸಿ, ಪರಸ್ಪರರಿಗೆ ಬಿಡುಗಡೆ ನೀಡಲು ಸಮ್ಮತಿಸಿದ್ದರು.

ಬಳ್ಳಾರಿ: ಆಕಸ್ಮಿಕ ‌ಬೆಂಕಿ ಬಿದ್ದು 3 ಗುಡಿಸಲುಗಳು ಭಸ್ಮ; ಸ್ಥಳಕ್ಕೆ ಶಾಸಕ ಸೋಮಶೇಖರ್‌ ರೆಡ್ಡಿ ಭೇಟಿ

ಉಪಾಯವಾಗಿ ಮನವೊಲಿಸಿ ತನ್ನೊಂದಿಗೆ ಕರೆ ತಂದು ಬಾಡಿಗೆ ಮನೆಯಲ್ಲಿ ಚೂಡಿದಾರ್‌ನ ವೇಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಸಹಜ ಸಾವು ಎಂಬುದಾಗಿ ಪೊಲೀಸ್‌ ಠಾಣೆಗೆ ತೆರಳಿ ಹೇಳಿಕೆ ನೀಡಿದ್ದಾರೆ. ವಿಚಾರಣೆ ಬಳಿಕ ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಕೊಲೆಯಾದ ಸ್ಥಳಕ್ಕೆ ಸಿಪಿಐ ಎಂ.ಎಂ.ಡಪ್ಪಿನ್‌ ಭೇಟಿ ನೀಡಿದ್ದರು. ಘಟನೆ ನಡೆದ ಸ್ಥಳದಲ್ಲಿ 2 ತಾಸಿಗೂ ಹೆಚ್ಚು ಕಾಲ ನೂರಾರು ಜನರು ಜಮಾವಣೆಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ