ಆ್ಯಪ್ನಗರ

ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ: ಆನಂದ್‌ ಸಿಂಗ್‌ ಅಚ್ಚರಿಯ ಹೇಳಿಕೆ

“ಯಾರೂ ಕೂಡ ಸಚಿವ ಸ್ಥಾನದ ನಿರೀಕ್ಷೆ ಇಟ್ಟುಕೊಂಡು ರಾಜೀನಾಮೆ ಸಲ್ಲಿಸಿಲ್ಲ. ಬೇರೆ ಬೇರೆ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಎಲ್ಲರಿಗೂ ನ್ಯಾಯ ಒದಗಿಸುತ್ತಾರೆಂಬ ನಂಬಿಕೆ ನನಗಿದೆ,” ಎಂದು ಆನಂದ್‌ ಸಿಂಗ್‌ ತಿಳಿಸಿದ್ದಾರೆ.

Vijaya Karnataka 27 Jan 2020, 5:14 pm

ಹೊಸಪೇಟೆ: ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ವಿಜಯನಗರ ಜಿಲ್ಲೆ ನನ್ನ ಮೊದಲ ಆದ್ಯತೆ ಎಂದು ‘ಅರ್ಹ’ ಶಾಸಕ ಆನಂದ್‌ ಸಿಂಗ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಕಸರತ್ತು ನಡೆಯುತ್ತಿರುವಾಗಲೇ ಹೊಸಪೇಟೆ ಶಾಸಕರು ಈ ಮಾತುಗಳನ್ನಾಡಿದ್ದಾರೆ.
Vijaya Karnataka Web Anand Singh


ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ಹೊಸ ಜಿಲ್ಲೆ ರಚನೆಯಿಂದ ಹಿಂದೆ ಸರಿಯುವುದಿಲ್ಲ. ಹೊಸ ಜಿಲ್ಲೆ ರಚಿಸಿ, ಇತಿಹಾಸ ಸೃಷ್ಟಿಸಲಾಗುವುದು,” ಎಂದು ಹೇಳಿದರು.

“ಬಿಜೆಪಿ ಸರಕಾರದಿಂದಲೇ ಹೊಸ ಜಿಲ್ಲೆ ಘೋಷಣೆಯಾಗಲಿದೆ. ಇದರಲ್ಲಿ ಯಾವ ಸಂದೇಹವೂ ಇಲ್ಲ. ಜಿಲ್ಲೆಯಾಗುತ್ತದೆಂಬ ನಂಬಿಕೆ ನನ್ನಲ್ಲಿದೆ,” ಎಂದರು.

ಸಂಪುಟ ವಿಸ್ತರಣೆಗೆ 9 ಪ್ಲಸ್ 2 ಸೂತ್ರ ! ಸಿಎಂ ಪ್ಲಾನ್‌ಗೆ ಇದ್ಯಾ ವರಿಷ್ಠರ ಸಮ್ಮತಿ?

ಬಿಎಸ್‌ವೈರಿಂದ ನ್ಯಾಯ

“ಯಾರೂ ಕೂಡ ಸಚಿವ ಸ್ಥಾನದ ನಿರೀಕ್ಷೆ ಇಟ್ಟುಕೊಂಡು ರಾಜೀನಾಮೆ ಸಲ್ಲಿಸಿಲ್ಲ. ಬೇರೆ ಬೇರೆ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಎಲ್ಲರಿಗೂ ನ್ಯಾಯ ಒದಗಿಸುತ್ತಾರೆಂಬ ನಂಬಿಕೆ ನನಗಿದೆ,” ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ