ಆ್ಯಪ್ನಗರ

ನಾನೇ ಬಳ್ಳಾರಿ ಅಭ್ಯರ್ಥಿ: ಉಗ್ರಪ್ಪ

ಮುಂದಿನ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ. ಯಾರಿಗೂ ಗೊಂದಲ ಬೇಡ. ಯಾವ ವಿರೋಧವೂ ಇಲ್ಲ ಎಂದು ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

Vijaya Karnataka 6 Mar 2019, 12:00 am
ಬಳ್ಳಾರಿ: ಮುಂದಿನ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ. ಯಾರಿಗೂ ಗೊಂದಲ ಬೇಡ. ಯಾವ ವಿರೋಧವೂ ಇಲ್ಲ ಎಂದು ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
Vijaya Karnataka Web i am the bellary candidate ugrappa
ನಾನೇ ಬಳ್ಳಾರಿ ಅಭ್ಯರ್ಥಿ: ಉಗ್ರಪ್ಪ


ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಸಂಸದರ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ಉಪ ಚುನಾವಣೆಗೆ ಸ್ಪರ್ಧೆ ಮಾಡಿದಾಗ 5 ವರ್ಷ 5 ತಿಂಗಳಿಗೆ ಮತ ಕೇಳಿದ್ದೇನೆ. ಜನ ಬೆಂಬಲವೂ ಸಿಕ್ಕಿದೆ. ಈಗಿನ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುತ್ತದೆ ಎನ್ನುವುದು ಸುಳ್ಳು. ಯಾರಿಂದಲೂ ವಿರೋಧವಿಲ್ಲ. ಪಕ್ಷ ಈಗಾಗಲೇ ತೀರ್ಮಾನ ಮಾಡಿದೆ. ಶಾಸಕ ಬಿ.ನಾಗೇಂದ್ರ ಹಾಗೂ ನಾವು ಅಣ್ಣ ತಮ್ಮಂದಿರಂತೆ. ಅವರು ನಮ್ಮೊಟ್ಟಿಗೆ ಇದ್ದಾರೆ. ಬಿಜೆಪಿಯವರು ವಂದತಿ ಹಬ್ಬಿಸಿದ್ದಾರೆ ಎಂದರು. ಡಾ.ಉಮೇಶ್ ಜಾದವ್ ಅವರನ್ನು ಕಾಂಗ್ರೆಸ್ ಕರೆತಂದು ರಾಜಕೀಯ ಭವಿಷ್ಯ ನೀಡಿತ್ತು. ಅವರು ತಪ್ಪು ನಡೆ ತುಳಿದಿದ್ದಾರೆ ಎಂದರು.

ದಾಳಿಯ ಲೆಕ್ಕ ಕೊಡಲಿ: ದೇಶ ಕಾಯುವ ವೀರ ಯೋಧರ ತ್ಯಾಗ ಬಲಿದಾನಗಳ ಕುರಿತು ಮೋದಿ, ಅಮಿತ್ ಶಾ, ಯಡಿಯೂರಪ್ಪ ಅವರು ರಾಜಕೀಯ ಮಾತನಾಡುವುದು ಸರಿಯಲ್ಲ. ಪಾಕ್‌ನ ನವಾಜ್‌ಷರೀಫ್‌ಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿದ್ದು, ಅವರೇ. ಸರ್ಜಿಕಲ್ ಸ್ಟ್ರೈಕ್‌ಗಳೆಲ್ಲ ಇದೇ ಮೊದಲಲ್ಲ. ಯೋಧರು ದೇಶದ ಆಸ್ತಿ. ಯಾವ ಪಕ್ಷದವರೂ ಅಲ್ಲ. ಅವರನ್ನು ರಾಜಕಾರಣ ಮಾಡಲು ಬಳಸಿಕೊಳ್ಳಬೇಡಿ ಎಂದರು. ಮೋದಿ ಅಧಿಕಾರಾವಧಿಯಲ್ಲಿ ಎಷ್ಟು ಬಾರಿ ಉಗ್ರರ ಮೇಲೆ ದಾಳಿಯಾಗಿವೆ? ಎಷ್ಟು ನಾಗರಿಕರು, ಎಷ್ಟು ಉಗ್ರರು? ಎಷ್ಟು ಸೈನಿಕರು? ಮೃತಪಟ್ಟಿದ್ದಾರೆ ಎನ್ನುವುದಕ್ಕೆ ಲೆಕ್ಕ ಕೊಡಲಿ. ಈ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಷ್ಟು ಘಟನೆ ಆಗಿವೆ ಎನ್ನುವುದನ್ನು ಹೊಲಿಕೆ ಮಾಡಿಯಾದರೂ ಅಂಕಿ-ಸಂಖ್ಯೆ ನೀಡಲಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ