ಆ್ಯಪ್ನಗರ

ಮತದಾರರ ಋುಣ ತೀರಿಸುವೆ: ಜೆ.ಎನ್‌.ಗಣೇಶ

ಚುನಾವಣೆ ಪೂರ್ವದಲ್ಲಿ ಮತದಾರರಿಗೆ ನೀಡಿದಂತೆ ಕೆಲಸ ಮಾಡುವ ಮೂಲಕ ಅವರ ಋುಣ ತೀರಿಸುವೆ ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು.

Vijaya Karnataka 30 May 2019, 5:00 am
ಕಂಪ್ಲಿ: ಚುನಾವಣೆ ಪೂರ್ವದಲ್ಲಿ ಮತದಾರರಿಗೆ ನೀಡಿದಂತೆ ಕೆಲಸ ಮಾಡುವ ಮೂಲಕ ಅವರ ಋುಣ ತೀರಿಸುವೆ ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು.
Vijaya Karnataka Web i fulfill voters promise mla j n ganesh
ಮತದಾರರ ಋುಣ ತೀರಿಸುವೆ: ಜೆ.ಎನ್‌.ಗಣೇಶ


ಸಮೀಪದ ರಾಮಸಾಗರದ 4ನೇ ವಾರ್ಡ್‌ನಲ್ಲಿ, ನರೇಗಾ ಯೋಜನೆಯಡಿ 8ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ, ಅಂಗನವಾಡಿ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮದಲ್ಲಿ 1.10ಕೋಟಿ ರೂ ವೆಚ್ಚದಲ್ಲಿ ಚರಂಡಿ, ಸಿಸಿ ನಿರ್ಮಿಸಲಾಗುತ್ತಿದೆ. ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಯಂತೆ ಮತದಾರರ ಋುಣ ತೀರಿಸಲು ಮುಂದಾಗಿದ್ದೇನೆ. ಮುಂದಿನ 4 ವರ್ಷಗಳಲ್ಲಿ ಜನರ ನಡುವೆಯಿದ್ದು, ಸಮಗ್ರ ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು. ಮೆಟ್ರಿಯಲ್ಲಿ ಪ್ರಗತಿ ಕಾಲೊನಿ ಯೋಜನೆಯಡಿ 30ಲಕ್ಷ ರೂ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಅಲ್ಲದೇ ಗ್ರಾಮದಲ್ಲಿ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಕ್ಷೇತ್ರದಲ್ಲಿ 5.80 ಕೋಟಿ ರೂ. ವೆಚ್ಚದಲ್ಲಿ ಎಸ್ಸಿಪಿ, ಎಸ್ಟಿಪಿ ವಿಶೇಷ ಯೋಜನೆಯಡಿ ಎಸ್ಟಿ ಕಾಲೊನಿಯಲ್ಲಿ 5.85 ಕೋಟಿ ರೂ ವೆಚ್ಚದಲ್ಲಿ ಹಾಗೂ ಎಸ್ಸಿ ಕಾಲೊನಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಂದಿನ ರಸ್ತೆಯನ್ನು 1.20ಕೋಟಿ ರೂ ವೆಚ್ಚದಲ್ಲಿ ವರ್ತುಲ ರಸ್ತೆ ನಿರ್ಮಿಸಲಾಗುವುದು. 2.50ಕೋಟಿ ರೂ ಎಪಿಎಂಸಿಯಿಂದ ಸಣಾಪುರ ವಿತರಣಾ ನಾಲೆ ವರೆಗಿನ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ, ತಲಾ 40 ಲಕ್ಷ ರೂ ಚಿಕ್ಕಜಾಯಿಗನೂರಿನಿಂದ ಸಕ್ಕರೆ ಕಾರ್ಖಾನೆವರೆಗಿನ ರಸ್ತೆ, ದೇವಲಾಪುರದಿಂದ ಜವುಕು ಮಾಗಾಣಿ ರಸ್ತೆಯನ್ನು, ಕಂಪ್ಲಿ-ಕೋಟೆಯ ಬನವಾಸಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

79ಲಕ್ಷ ರೂನಲ್ಲಿ ಗೋನಾಳ್‌ನಿಂದ ಹಂಪಾದೇವನಹಳ್ಳಿ, 94 ಲಕ್ಷ ರೂನಲ್ಲಿ ಸೋಮಲಾಪುರದಿಂದ ಮಾವಿನಹಳ್ಳಿವರೆಗೆ, 3ಕೋಟಿ ರೂನಲ್ಲಿ ದೇವಸಮುದ್ರದಿಂದ ಕೃಷ್ಣಾನಗರ ಕ್ಯಾಂಪ್‌ವರೆಗೆ ರಸ್ತೆಗಳನ್ನು ಅಭಿವೃದ್ಧಿಪಡಿಸಲಿದ್ದು, ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಗ್ರಾ.ಪಂ.ಅಧ್ಯಕ್ಷೆ ಆನೆ ಪಾರ್ವತಮ್ಮ ಅಧ್ಯಕ್ಷ ತೆ ವಹಿಸಿದ್ದರು. ಜಿ.ಪಂ.ಸದಸ್ಯ ಕೆ.ಶ್ರೀನಿವಾಸರಾವ್‌, ಪ್ರಮುಖರಾದ ಎಚ್‌.ಲಿಂಗನಗೌಡ, ಎಚ್‌.ಶಿವಶಂಕರಗೌಡ, ಬಿ.ನಾರಾಯಣಪ್ಪ, ರಮೇಶಗೌಡ, ಪಿಡಿಒ ಹನುಮಂತಪ್ಪ, ಗ್ರಾ.ಪಂ.ಉಪಾಧ್ಯಕ್ಷ ಬೋವೇರು ಮಂಜುನಾಥ, ಸದಸ್ಯರಾದ ಆರ್‌.ಎಂ.ರಾಮಯ್ಯ, ಬೊಮ್ಮಗಂಡಿ ಶರಣಪ್ಪ, ರಾಮಲಿಂಗಪ್ಪ, ಅಕ್ಕಿ ಗಾಯತ್ರಿ, ರಾಘವೇಂದ್ರ ಸುಗುಂದಿ, ಹುಸೇನಪ್ಪ, ಉಜ್ಜಿನಿ ಯಂಕಮ್ಮ, ಗಂಗಾವತಿ ಎರ್ರೆಮ್ಮ, ಅಗಸರ ನೇತ್ರಾವತಿ, ಅಂಗಜಾಲರ ಶಿವಮ್ಮ, ಮುಖಂಡರಾದ ಇಟಗಿ ಬಸವರಾಜಗೌಡ, ಗಂಗಾಧರ, ತಾಂತ್ರಿಕ ಸಹಾಯಕಿ ಮಮತಾ, ಕಾರ್ಯದರ್ಶಿ ನಾಗರಾಜ ರಾವ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ