ಸಂಡೂರು: ಗ್ರಾಮೀಣ ಭಾಗದಲ್ಲಿ ಶಿಕ್ಷ ಣದ ಕೊರತೆಯಿಂದಾಗಿ ಅಲ್ಲಲ್ಲಿ ಅಸ್ಪೃಶ್ಯತೆ ಕಂಡು ಬರುತ್ತಿದ್ದು ಸೂಕ್ತ ತಿಳಿವಳಿಕೆ ಮೂಲಕ ಅಸ್ಪೃಶ್ಯತೆ ನಿವಾರಣೆ ಮಾಡಬಹುದು ಎಂದು ತಾ.ಪಂ.ಇಒ ಅನ್ನದಾನಯ್ಯಸ್ವಾಮಿ ಹೇಳಿದರು.
ಪಟ್ಟಣದ ತಾ.ಪಂ.ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ. ಮತ್ತು ಸಮಾಜ ಕಲ್ಯಾಣ ಇಲಾಖೆ ಫೆ.5 ರಿಂದ ಫೆ.9 ರವರೆಗೆ ಹಮ್ಮಿಕೊಂಡ ಅಸ್ಪೃಶ್ಯತೆ ನಿವಾರಣೆ ಸಪ್ತಾಹದ ನಿಮಿತ್ತ ಸೋಮವಾರ ಪ್ರಾರಂಭಿಸಿದ ಪ್ರಚಾರಾಂದೋಲದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದಲ್ಲಿ ಸಾಮರಸ್ಯದ ಬದುಕು ನೆಮ್ಮದಿ ತರುತ್ತದೆ. ಹೀಗಾಗಿ, ಪ್ರತಿಯೊಬ್ಬರನ್ನು ಗೌರವದಿಂದ ಕಾಣಬೇಕು ಎಂದರು. ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ ಮಾತನಾಡಿ, ತಾಲೂಕಿನಲ್ಲಿ ಆಗಾಗ್ಗೆ ಅಸ್ಪೃಶ್ಯತೆ ಆಚರಣೆ ಕಾಣಿಸಿಕೊಂಡ 15 ಗ್ರಾಮಗಳನ್ನು ಗುರುತಿಸಿ ಆ ಗ್ರಾಮಗಳಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಕಲಾ ತಂಡಗಳ ಮೂಲಕ ಬೀದಿ ನಾಟಕ ಪ್ರದರ್ಶನ, ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು. ಪಿಡಬ್ಲ್ಯುಡಿ ಸಂಸದೀಯ ಕಾರ್ಯದರ್ಶಿ ಈ.ತುಕಾರಾಮ್ ಪ್ರಚಾರಾಂದೋಲನವನ್ನು ಉದ್ಘಾಟಿಸಿದರು. ತಾ.ಪಂ.ಅಧ್ಯಕ್ಷೆ ಫರ್ಜಾನಾ ಗೌಸ್ ಆಜಂ, ಉಪಾಧ್ಯಕ್ಷೆ ಗಂಗಾಬಾಯಿ ಚಂದ್ರಾನಾಯ್ಕ, ಸದಸ್ಯರಾದ ಬಾಣ್ದಾರ್ ಸುಭಾನ್ ಸಾಬ್, ಜೆ.ಕುಮಾರಸ್ವಾಮಿ, ಬಿಇಒ ಉಮಾಪತಿ, ಬಿಸಿಯೂಟ ಯೋಜನೆ ಎಡಿ ತೇನ್ಸಿಂಗ್ ನಾಯ್ಕ, ಸಮಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಪ್ರಹ್ಲಾದ ಶೆಟ್ಟಿ, ನಿಲಯ ಮೇಲ್ವಿಚಾರಕ ಸಿದ್ದೇಶ, ಗೃಹರಕ್ಷ ಕ ದಳದ ಘಟಕಾಧಿಕಾರಿ ಎನ್.ಮಲ್ಲಿಕಾರ್ಜುನ, ಬಳ್ಳಾರಿಯ ಗಂಗಾ ಕಲಾ ಟ್ರಸ್ಟ್ನ ರಮೇಶ ಮತ್ತು ತಂಡದ ಸದಸ್ಯರು ಇದ್ದರು.