ಆ್ಯಪ್ನಗರ

‘ಮದ್ಯವ್ಯಸನಿಗಳಿಂದ ಅಪರಾಧ ಹೆಚ್ಚಳ’

ಮದ್ಯವ್ಯಸನಿಗಳಿಂದ ಅಪರಾಧದ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಸಿವಿಲ್‌ ನ್ಯಾಯಾಧೀಶ ವಿಜಯಕುಮಾರ್‌ ಎಸ್‌.ಜಟ್ಲಾ ಹೇಳಿದರು.

Vijaya Karnataka 28 Jun 2018, 5:00 am
ಹಗರಿಬೊಮ್ಮನಹಳ್ಳಿ; ಮದ್ಯವ್ಯಸನಿಗಳಿಂದ ಅಪರಾಧದ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಸಿವಿಲ್‌ ನ್ಯಾಯಾಧೀಶ ವಿಜಯಕುಮಾರ್‌ ಎಸ್‌.ಜಟ್ಲಾ ಹೇಳಿದರು.
Vijaya Karnataka Web increase in crime from alcoholics
‘ಮದ್ಯವ್ಯಸನಿಗಳಿಂದ ಅಪರಾಧ ಹೆಚ್ಚಳ’


ಪಟ್ಟಣದ ಸರಕಾರಿ ಪದವೀ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತಾ ರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಪರವಾನಗಿ ರಹಿತ ಮದ್ಯ ಮಾರಾಟ ತಡೆಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಮದ್ಯದ ಅಮಲಿನಲ್ಲಿ ಶಾಂತಿಭಂಗವಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಂತಿಸಭೆ ನಡೆಸಿ, ದುಶ್ಚಟದ ಪರಿಣಾಮಗಳನ್ನು ಕುರಿತಂತೆ ಜಾಗೃತಿ ಮೂಡಿಸಬೇಕಿದೆ ಎಂದರು. ಡಾ.ಪೂರ್ಣಿಮಾ ಶಶಿಧರ, ಕುಡಿತದ ಅಡ್ಡಪರಿಣಾಮ ಕುರಿತು ಉಪನ್ಯಾಸ ನೀಡಿದರು. ಪಿಎಸ್‌ಐ ಪುಲ್ಲಯ್ಯ ರಾಥೋಡ್‌, ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಾಣ ಶಿವಾನಂದ, ಗೌರವ ಅಧ್ಯಕ್ಷ ಬಿ.ವಿ.ಶಿವಯೋಗಿ, ಕಾರ್ಯದರ್ಶಿ ಟಿ.ಜಿ.ಎಂ.ಕೊಟ್ರೇಶ್‌, ಉಪಾಧ್ಯಕ್ಷ ಲಿಂಗನಗೌಡ, ಸಂಘದ ಗಂಗಾಧರ, ಪ್ರಾಂಶುಪಾಲ ರಾಮಕೃಷ್ಣ ಇದ್ದರು. ಉಪನ್ಯಾಸಕರಾದ ಬಸವರಾಜ, ಖಾಸೀಂ ಸಾಹೇಬ್‌, ಟಿ.ಹಾಲಪ್ಪ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ