ಆ್ಯಪ್ನಗರ

ಹೈ.ಕ.ಭಾಗಕ್ಕೆ ಸಾಂಸ್ಕೃತಿಕ ಮೀಸಲಾತಿ ಘೋಷಿಸಲು ಒತ್ತಾಯ

ಕನ್ನಡ ಭಾಷೆಯ ಬೆಳವಣಿಗೆಗೆ ಕನ್ನಡ ಪತ್ರಿಕೆ, ಪುಸ್ತಕಗಳನ್ನು ಓದಬೇಕು. ಪ್ರತಿಯೊಬ್ಬರು ಕನ್ನಡ ಬಗ್ಗೆ ನೈಜ ಅಭಿಮಾನ ಬೆಳೆಸಿಕೊಂಡು ಮಕ್ಕಳಿಗೆ ಭಾಷೆಯ ಬಗ್ಗೆ ತಿಳಿಸಿಕೊಡಬೇಕು. ಸರಕಾರವೂ ಹೈ.ಕ.ಭಾಗದ ಸಾಂಸ್ಕೃತಿಕ ಪರಂಪರೆಗೆ ಉತ್ತೇಜನ ನೀಡಲು ಸಾಂಸ್ಕೃತಿಕ ಮೀಸಲಾತಿ ಘೋಷಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದರಾಮ ಕಲ್ಮಠ ಸರಕಾರವನ್ನು ಒತ್ತಾಯಿಸಿದರು.

Vijaya Karnataka 3 Oct 2018, 5:00 am
ಕುರುಗೋಡು : ಕನ್ನಡ ಭಾಷೆಯ ಬೆಳವಣಿಗೆಗೆ ಕನ್ನಡ ಪತ್ರಿಕೆ, ಪುಸ್ತಕಗಳನ್ನು ಓದಬೇಕು. ಪ್ರತಿಯೊಬ್ಬರು ಕನ್ನಡ ಬಗ್ಗೆ ನೈಜ ಅಭಿಮಾನ ಬೆಳೆಸಿಕೊಂಡು ಮಕ್ಕಳಿಗೆ ಭಾಷೆಯ ಬಗ್ಗೆ ತಿಳಿಸಿಕೊಡಬೇಕು. ಸರಕಾರವೂ ಹೈ.ಕ.ಭಾಗದ ಸಾಂಸ್ಕೃತಿಕ ಪರಂಪರೆಗೆ ಉತ್ತೇಜನ ನೀಡಲು ಸಾಂಸ್ಕೃತಿಕ ಮೀಸಲಾತಿ ಘೋಷಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದರಾಮ ಕಲ್ಮಠ ಸರಕಾರವನ್ನು ಒತ್ತಾಯಿಸಿದರು.
Vijaya Karnataka Web insist on declaring cultural reservation for hk part
ಹೈ.ಕ.ಭಾಗಕ್ಕೆ ಸಾಂಸ್ಕೃತಿಕ ಮೀಸಲಾತಿ ಘೋಷಿಸಲು ಒತ್ತಾಯ


ಪಟ್ಟಣದ ರೈತ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಹಾಗೂ ಕನ್ನಡ ಭಾಷಾ ಬೋಧಕರ ವೇದಿಕೆ ತಾಲೂಕು ಘಟಕ, ಪ್ರೇಮಕಾವ್ಯ ಪ್ರಕಾಶನದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಕೆ.ಬಿ.ವೀರೇಶ ಅವರ 'ಅಜ್ಜಿ ಮತ್ತು ದಂಟು' ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಯುವ ಸಮುದಾಯ ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಸಾಹಿತ್ಯ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ಡಾ.ಬಿ.ಜಿ.ಕನಕೇಶ ಕೃತಿಯ ಕುರಿತು ಮಾತನಾಡಿದರು. ಲೇಖಕ ಕೆ.ಬಿ.ವೀರೇಶ ಅನಿಸಿಕೆ ವ್ಯಕ್ತಪಡಿಸಿದರು. ಕನ್ನಡ ಭಾಷಾ ಬೋಧಕರ ವೇದಿಕೆ ತಾಲೂಕಾಧ್ಯಕ್ಷ ಡಿ.ಎಂ.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಡಾ.ಜಾಜಿ ದೇವೇಂದ್ರಪ್ಪ, ಎ.ವಾಗೇಶ್‌, ಪಲ್ಲವ ಪ್ರಕಾಶನದ ಡಾ.ಕೆ.ವೆಂಕಟೇಶ್‌, ಕವಿ ನಾಗಣ್ಣ ಕಿಲಾರಿ, ಪಿ.ಆರ್‌.ವೆಂಕಟೇಶ್‌, ಬ.ವಿಜಯಕುಮಾರ್‌, ವಸಂತಕುಮಾರ, ಶಾರದಮ್ಮ, ಗೋವರ್ಧನ ರೆಡ್ಡಿ, ಕೊಟ್ರೇಶ್‌, ಮಲ್ಲಿಕಾರ್ಜುನ ಬಡಿಗೇರ, ಬಿ.ಮೌನೇಶ, ಕರಿಬಸಪ್ಪ ಹಾಗೂ ಅರುಣಕುಮಾರ, ಬಕಾಡೆ ಪಂಪಾಪತಿ, ಕೆ.ಬಸವರಾಜ ಇನ್ನಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ