ಆ್ಯಪ್ನಗರ

ಅಂತಾರಾಷ್ಟ್ರೀಯ ಸಾಕ್ಷ ರತಾ ದಿನಾಚರಣೆ

ಪಟ್ಟಣದ 7ನೇ ವಾರ್ಡ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ಮಟ್ಟದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು.

Vijaya Karnataka 15 Sep 2018, 5:00 am
ಕೂಡ್ಲಿಗಿ : ಪಟ್ಟಣದ 7ನೇ ವಾರ್ಡ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ಮಟ್ಟದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು.
Vijaya Karnataka Web BLR-BLY14KDL-1


ತಾಲೂಕು ಶಿಕ್ಷ ಕರ ಸಂಘದ ಅಧ್ಯಕ್ಷ ಬಿ.ಬಿ.ಶಿವಾನಂದ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಿಕ್ಷ ಣಕ್ಕೆ ಮಹತ್ವವಿದ್ದು, ಸಮಾಜದ ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಇದರ ಜತೆಗೆ ಅನಕ್ಷ ರಸ್ಥರನ್ನು ಸಾಕ್ಷ ರರನ್ನಾಗಿಸುವ ಜವಬ್ದಾರಿ ಎಲ್ಲ ವಿದ್ಯಾವಂತರ ಮೇಲಿದೆ. ಇದೊಂದು ಸಾಮಾಜಿಕ ಸೇವೆ ಎನ್ನುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಆಯಾ ಮನೆಗಳಲ್ಲಿ, ಊರುಗಳಲ್ಲಿ ಅಥವಾ ತಮ್ಮ ಪರಿಸರದಲ್ಲಿ ಕಂಡು ಬರುವ ಅನಕ್ಷ ರಸ್ಥರಿಗೆ ಅಕ್ಷ ರ ಕಲಿಸುವ ಹೊಣೆಗಾರಿಗೆಯನ್ನು ಹೋರಬೇಕು ಎಂದು ತಿಳಿಸಿದರು.

ಸಾಕ್ಷ ರತಾ ದ್ವಜಾರೋಹರಣ ಮಾಡಿದ ತಾಲೂಕು ಪಂಚಾಯಿತಿ ಅಧ್ಯಕ್ಷ ಬಿ.ವೆಂಕಟೇಶ್‌ ನಾಯ್ಕ್‌ ಮಾತನಾಡಿ, ಸಾಕ್ಷ ರತಾ ಕಾರ್ಯಕ್ರಮಕ್ಕೆ ಸರಕಾರ ಸಾಕಷ್ಟು ಖರ್ಚು ಮಾಡುತ್ತದೆ. ಆದರೆ, ಇದುವರೆಗೂ ಸಂಪೂರ್ಣ ಸಾಕ್ಷ ರತೆ ಸಾಧಿಸಿ ಗುರಿ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಈ ಯೋಜನೆಯಡಿ ಕೆಲಸ ಮಾಡುವ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.

ಸಾಕ್ಷ ರತಾ ತಾಲೂಕು ಸಂಯೋಜಕ ಗೌಡ್ರ ಕೊಟ್ರೇಶ್‌ ಪ್ರಾಸ್ತಾವಿಕ ಮಾತನಾಡಿದರು. ತಾ.ಪಂ.ಸದಸ್ಯ ಗುರುಮೂರ್ತಿ ಸಾಕ್ಷ ರತಾ ಪ್ರಮಾಣ ವಚನ ಬೋಧಿಸಿದರು. ಮುಖ್ಯಗುರು ಇಂದಿರಮ್ಮ ಅಧ್ಯಕ್ಷ ತೆ ವಹಿಸಿದ್ದರು. ಬಿಆರ್‌ಸಿ ಕಾನಾಮಡುಗು ಶರಣಪ್ಪ, ಎಪಿಎಂಸಿ ಉಪಾಧ್ಯಕ್ಷ ಕಾವಲಿ ಶಿವಪ್ಪನಾಯಕ, ಶಿಕ್ಷ ಕ ಬಿ. ಮಾರೇಶ್‌ ಹಾಗೂ ಶಾಲಾ ಶಿಕ್ಷ ಕರು, ವಿದ್ಯಾರ್ಥಿಗಳು ಇದ್ದರು. ಸಾಕ್ಷ ರತಾ ಸಂಯೋಜಕ ಬಿ.ಪಾಪಯ್ಯ, ಪ್ರೇರಕರಾದ ಬಿ.ಸೋಮಶೇಖರ, ಎಚ್‌.ಬಸಪ್ಪ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ