ಆ್ಯಪ್ನಗರ

ಆಲ್ದಳ್ಳಿ ಸೇತುವೆಗೆ ಮೋಕ್ಷ ಇಲ್ಲವೇ ?

ತಾಲೂಕಿನ ನಾನಾ ಕಡೆಗಳಲ್ಲಿ ಉಪಕಾಲುವೆ ದುರಸ್ತಿ ಯೋಗ ಒದಗಿದೆ. ಆದರೆ, ಉಪಕಾಲುವೆ ವ್ಯಾಪ್ತಿಯ ನಾನಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳ ಅಭಿವೃದ್ಧಿಗೆ ಕಾಲ ಕೂಡಿಬರದ್ದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ.

Vijaya Karnataka 25 May 2018, 5:00 am
ಬಳ್ಳಾರಿ : ತಾಲೂಕಿನ ನಾನಾ ಕಡೆಗಳಲ್ಲಿ ಉಪಕಾಲುವೆ ದುರಸ್ತಿ ಯೋಗ ಒದಗಿದೆ. ಆದರೆ, ಉಪಕಾಲುವೆ ವ್ಯಾಪ್ತಿಯ ನಾನಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳ ಅಭಿವೃದ್ಧಿಗೆ ಕಾಲ ಕೂಡಿಬರದ್ದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ.
Vijaya Karnataka Web BLR-BLY24GK1


ಉಪಕಾಲುವೆ ಸೇತುವೆ ಮಾರ್ಗದಲ್ಲಿ ಸಾಗುವ ರೈತರು, ನಾನಾ ಹಳ್ಳಿಯ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ. ನಗರ ಹೊರವಲಯದ ಆಲ್ದಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಉಪಕಾಲುವೆ ಮಾರ್ಗ ಸೇತುವೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಸಾರುತ್ತಿದೆ. ಉಪಕಾಲುವೆಯ ಎಡ ಮತ್ತು ಬಲಬದಿಯ ತಡೆಗೋಡೆ ನಿರ್ಮಾಣವಾಗುತ್ತಿದೆ.

ಶಿಥಿಲಾವ್ಯವಸ್ಥೆಯಲ್ಲಿರುವ ಕಿರಿದಾದ ಉಪಕಾಲುವೆಯ ಸೇತುವೆಗೆ ದುರಸ್ತಿ ಭಾಗ್ಯ ಒಲಿದಿಲ್ಲ. ರಸ್ತೆಯ ಮೇಲೆ ಲಘು ಮೋಟರ್‌ ವಾಹನಗಳು ಚಲಿಸುತ್ತಿವೆ. ಈ ವೇಳೆ ಆತಂಕದಲ್ಲಿಯೇ ಮುಂದೆ ಸಾಗಬೇಕಿದೆ.

ತಗ್ಗುದಿನ್ನೆ: ಸೇತುವೆಯ ಮೇಲೆ ತಗ್ಗು, ದಿನ್ನೆಗಳು ಬಿದ್ದಿವೆ. ನಗರದ ಪ್ರದೇಶದಿಂದ ಬಂಡಿಹಟ್ಟಿ, ಆಲ್ದಳ್ಳಿ, ಬೈಪಾಸ್‌ ರಸ್ತೆ ಹಾಗೂ ತಾಲೂಕಿನ ಬೆಳಗಲ್‌ ತಾಂಡಾ, ಹೊನ್ನಳ್ಳಿ ತಾಂಡಾ, ಬೆಳಗಲ್‌, ಹೊನ್ನಳ್ಳಿ ಸೇರಿದಂತೆ ಇತರ ಗ್ರಾಮಸ್ಥರು ಇದೇ ಮಾರ್ಗದಲ್ಲಿ ಸಾಗಬೇಕು. ಸೇತುವೆಯನ್ನು ದಾಟಿಯೇ ಆಟೊ ರಿಕ್ಷಾ, ದ್ವಿಚಕ್ರವಾಹನಗಳು, ಪ್ರಯಾಣಿಕರ ಖಾಸಗಿ ವಾಹನಗಳು ತೆರಳಬೇಕಿದೆ. ತಗ್ಗುದಿನ್ನೆ, ದುರ್ಬಲ ಸೇತುವೆಯಿಂದಾಗಿ ಸಮಸ್ಯೆ ಉಂಟಾಗಿದೆ.

ಮರೆತರು: ರಸ್ತೆಯನ್ನು ಡಾಂಬರೀಕರಣ ಮಾಡಿದವರು, ಸೇತುವೆಯನ್ನು ಮರೆತಿದ್ದಾರೆ. ಯಾವುದೇ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವ ರಸ್ತೆ ಮಾರ್ಗದಲ್ಲಿ ಬರುವ ಸೇತುವೆ, ಬಂಡ್‌, ಕಾಲುವೆಗಳನ್ನು ಪರಿಗಣಿಸಿಯೇ ಇರುತ್ತಾರೆ. ಇಲ್ಲಿ ಮಾತ್ರ ಸೇತುವೆ ಕಡೆಗಣಿಸಲಾಗಿದೆ. ಅಂದಾಜು ಪಟ್ಟಿ ರೂಪಿಸುವಾಗ ಮಾರ್ಗದಲ್ಲಿ ಏನೇನು ಬರುತ್ತವೆ ಎನ್ನುವುದನ್ನೇ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಮಳೆಯಿಂದಾಗಿ ಸೇತುವೆ ಮೇಲೆಲ್ಲ ನೀರು ನಿಲುಗಡೆಯಾಗಿ ಗುಂಡಿ ಬಿದ್ದಿವೆ. ವಾಹನಗಳು ಹೊಯ್ದಾಡುತ್ತಲೇ ಸಾಗಬೇಕಿದೆ. ಸೇತುವೆ ಎಡ, ಬಲಬದಿಯಲ್ಲಿ ಅಳವಡಿಸಿದ್ದ ಸಿಮೆಂಟ್‌ ಕಾಂಕ್ರೀಟ್‌ ತಡೆಗೋಡೆಯು ಅಲ್ಲಲ್ಲಿ ದುರ್ಬಲವಾಗಿದೆ.

...

ರಾತ್ರಿ ವೇಳೆ ಭಯ ; ಉಪಕಾಲುವೆ ಮೇಲಿನ ಸೇತುವೆಯ ಕೂಗಳತೆ ದೂರದಲ್ಲಿ ಆಲ್ದಳ್ಳಿ ಗ್ರಾಮವಿದೆ. ರಾತ್ರಿ ಸಮಯದಲ್ಲಿ ಗ್ರಾಮಸ್ಥರು ಸೇತುವೆಯನ್ನು ದಾಟಬೇಕಾದರೆ, ಭಯ ಭೀತರಾಗುತ್ತಾರೆ. ಸೇತುವೆ ಮೇಲೆ ತಡೆದು ನಿಂತು ಮುಂದಕ್ಕೆ ಚಲಿಸಬೇಕು. ನಿರ್ಜನ ಪ್ರದೇಶವಾಗಿದ್ದರಿಂದ ಕಳ್ಳರ ಭಯವೂ ಕಾಡುತ್ತಿದೆ. ವಾಹನಗಳು ಎದುರು ಬದುರಾದರೆ, ಕೆಲ ಹೊತ್ತು ನಿಂತೇ ಹೋಗಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ