ಆ್ಯಪ್ನಗರ

ಐಟಿಐ ವಿದ್ಯಾರ್ಥಿಗಳಿಗೆ ಕೌಶಲ ಕ್ಲಾಸ್‌: ಸಚಿವ

ಐಟಿಐ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಕೌಶಲ ತರಬೇತಿ ನೀಡಲು ರಾಜ್ಯ ಸರಕಾರ ಯೋಜನೆ ರೂಪಿಸಿದೆ ಎಂದು ರಾಜ್ಯ ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು.

ವಿಕ ಸುದ್ದಿಲೋಕ 18 Jan 2017, 9:00 am

ಹೊಸಪೇಟೆ: ಐಟಿಐ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಕೌಶಲ ತರಬೇತಿ ನೀಡಲು ರಾಜ್ಯ ಸರಕಾರ ಯೋಜನೆ ರೂಪಿಸಿದೆ ಎಂದು ರಾಜ್ಯ ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು.

ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಸಂಸ್ಥೆ, ಸ್ಥಳೀಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಐಎಂಸಿ ಆಫ್‌ ಐಟಿಐನಿಂದ ಮಂಗಳವಾರ ಹಮ್ಮಿಕೊಂಡಿದ್ದ ಐಟಿಐ ಕಾಲೇಜಿನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ 100 ಐಟಿಐ ಕಾಲೇಜ್‌ಗಳಿಗೆ ಹೊಸ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿತ್ತು. ಈಗಾಗಲೇ 60 ಕಟ್ಟಡಗಳನ್ನು ನಿರ್ಮಿಸಲಾಗಿದೆ ಯುವ ಸಮುದಾಯಕ್ಕೆ ತಾಂತ್ರಿಕ ಕೌಶಲ್ಯವನ್ನು ನೀಡಲು ಸರಕಾರ ಬದ್ಧವಾಗಿದೆ. ಇದಕ್ಕಾಗಿ ಉದ್ಯಮಿಗಳ ಜತೆಗೂಡಿ ಯೋಜನೆ ರೂಪಿಸಲಾಗಿದೆ ಎಂದರು.

ಕೊರತೆಗೆ ಪರಿಹಾರ: ಸರಕಾರಿ ಐಟಿಐ ಕಾಲೇಜ್‌ಗಳಲ್ಲಿ ಅಧ್ಯಾಪಕರ ಕೊರತೆಯನ್ನು ಸರಿದೂಗಿಸಲಾಗುತ್ತಿದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಆದೇಶಿಸಲಾಗಿದೆ. ಎಲ್ಲ ಸಮಸ್ಯೆಯನ್ನು ರಾತ್ರೋರಾತ್ರಿ ಪರಿಹರಿಸಲು ಆಗುವುದಿಲ್ಲ. ವ್ಯವಸ್ಥೆ ನಿಧಾನವಾಗಿ ಸುಧಾರಿಸಲಿದೆ ಎಂದರು. ಶಾಸಕ ಆನಂದ್‌ ಸಿಂಗ್‌ ಮಾತನಾಡಿ, ಹೈದರಾಬಾದ್‌-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಐಟಿಐ ಕಾಲೇಜು ಅಭಿವೃದ್ಧಿಗೂ ಅನುದಾನ ದೊರೆಯಲಿದೆ. ನಗರಕ್ಕೆ ಸರಕಾರ ಪಾಲಿಟೆಕ್ನಿಕ್‌ ಕಾಲೇಜ್‌ ಮಂಜೂರು ಮಾಡಬೇಕು ಎಂದರು. ಹೈ-ಕ ಮಂಡಳಿಯಿಂದ ನಗರದ ಒಳ ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ 134 ಕೋಟಿ ರೂ., ಕ್ಷೇತ್ರದ 10 ಗ್ರಾ.ಪಂ.ಗಳ ಅಭಿವೃದ್ಧಿಗೆ 40 ಕೋಟಿ ರೂ.ಅನುದಾನ ಕೇಳಲಾಗಿದೆ ಎಂದರು. ಶಾಸಕ ಈ.ತುಕಾರಾಂ, ನಗರಸಭೆ ಅಧ್ಯಕ್ಷ ಅಬ್ದುಲ್‌ ಖದೀರ್‌, ಹುಡಾ ಅಧ್ಯಕ್ಷ ವೆಂಕಟೇಶ್‌ರೆಡ್ಡಿ, ಜಿ.ಪಂ.ಸದಸ್ಯ ಪ್ರವೀಣ್‌ ಸಿಂಗ್‌, ಮುಖಂಡರಾದ ದೀಪಕ್‌ ಕುಮಾರ ಸಿಂಗ್‌, ಎಲ್‌. ಸಿದ್ದನಗೌಡ, ಅಯ್ಯಾಳಿ ತಿಮ್ಮಪ್ಪ, ಎಚ್‌ಎನ್‌ಎಫ್‌ ಮಹಮ್ಮದ್‌ ಇಮಾಮ್‌ ನಿಯಾಜಿ, ಗುಜ್ಜಲ ರಘು, ಐಎಂಸಿ ಅಧ್ಯಕ್ಷ ನಭಗಾಣಾ ಪಾಣಿ, ಎಂಎಸ್‌ಪಿಎಲ್‌ನ ಮೇದಾ ವೆಂಕಟಯ್ಯ, ಕಲಬುರಗಿ ವಿಭಾಗದ ಅಧಿಕಾರಿ ವೈಜಗೊಂಡ, ಐಎಂಸಿ ಸದಸ್ಯರಾದ ಸಿ.ಎಚ್‌. ರಮೇಶ್‌, ಜಾಕೀರ್‌ ಹುಸೇನ್‌, ಕಾಲೇಜ್‌ನ ಪ್ರಾಚಾರ್ಯ ಸುರೇಶ್‌ ಬಾಬು ಇದ್ದರು. ಶರಣಪ್ಪ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ