ಆ್ಯಪ್ನಗರ

Ujjain Adda Pallakki: ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ

ಸಮೀಪದ ನಡುಮಾವಿನಹಳ್ಳಿ ಗ್ರಾಮದಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಚಾರ್ಯರ ಅಡ್ಡ ಪಲ್ಲಕಿ ಮಹೋತ್ಸವ ಮಂಗಳವಾರ ಜರುಗಿತು.

ವಿಕ ಸುದ್ದಿಲೋಕ 14 Dec 2022, 11:37 am
ಕೊಟ್ಟೂರು; ಸಮೀಪದ ನಡುಮಾವಿನಹಳ್ಳಿ ಗ್ರಾಮದಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಚಾರ್ಯರ ಅಡ್ಡ ಪಲ್ಲಕಿ ಮಹೋತ್ಸವ ಮಂಗಳವಾರ ಜರುಗಿತು.
Vijaya Karnataka Web KPL-KPL25KRT03
ಕೊಟ್ಟೂರು ಸಮೀಪದ ನಡುಮಾವಿನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಸಿದ್ಧಲಿಂಗ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ನಂತರ ಧಾರ್ಮಿಕ ಸಭೆ ನಡೆಯಿತು.


ಪಲ್ಲಕಿ ಉತ್ಸವದ ನಂತರ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿದ್ದ ಜಗದ್ಗುರುಗಳು ಮಾತನಾಡಿ, ಸಂಪತ್ತನ್ನು ಯಾವುದೇ ವ್ಯಕ್ತಿಯಾಗಲೀ ನ್ಯಾಯಯುತವಾಗಿ ಗಳಿಸಬೇಕು. ಅಂತಹ ಸಂಪತ್ತು ಶಾಶ್ವತವಾಗಿರುತ್ತದೆಯೇ ಹೊರತು ಅನ್ಯಾಯದಿಂದ ಗಳಿಸಿದ ಸಂಪತ್ತು ಇರುವುದಿಲ್ಲ. 84 ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮವೇ ದೊಡ್ಡದು. ಇಂತಹ ಮಹಾಜನ್ಮ ಪಡೆದ ಮಾನವರು ಸದಾ ಧರ್ಮ, ಸಮಾನತೆಗೆ ಹೆಚ್ಚು ಆದ್ಯತೆ ನೀಡಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರತಿಯೊಬ್ಬರು ದಶಧರ್ಮದ ಸೂತ್ರಗಳಂತೆ ಧರ್ಮಚಾರದಲ್ಲಿ ನಡೆದು ಜೀವನ ಪಾವನ ಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಜಿ.ಪಂ.ಸದಸ್ಯ ಹರ್ಷವರ್ದನ, ತಾ.ಪಂ.ಸದಸ್ಯ ಮಮತ ನಾಗರಾಜ್‌, ಕೊಟ್ಟೂರು ಸಿಪಿಐ ಎಸ್‌.ಲಾಲ್ಯನಾಯ್ಕ್‌, ಮುಖಂಡರಾದ ಸಾಂತನಹಳ್ಳಿ ಕೊಡದಪ್ಪ, ಲೋಕೇಶ, ಸಣ್ಣ ಮಲ್ಲಪ್ಪ, ನಿಂಗಪ್ಪ, ಬೀಮಪ್ಪ, ಬಸವರಾಜಪ್ಪ, ಕೊಟ್ರೇಶ, ರಾಜಪ್ಪ, ರಾಮಚಂದ್ರಪ್ಪ, ಗಿರಿಯಪ್ಪ ಸೇರಿ ಅನೇಕರು ಇದ್ದರು.

ಮೆರವಣಿಗೆ : ಇದಕ್ಕೂ ಮೊದಲು ಗ್ರಾಮದ ಬೀದಿಗಳಲ್ಲಿ ಹೂವುಗಳಿಂದ ಅಲಂಕೃತಗೊಂಡ ಬೆಳ್ಳಿ ಪಲ್ಲಕಿಯಲ್ಲಿ ಜಗದ್ಗುರುಗಳ ಅಡ್ಡ ಪಲ್ಲಕಿ ಉತ್ಸವ ಸಕಲ ಮಂಗಳ ವಾದ್ಯಗಳೊಂದಿಗೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ