ಆ್ಯಪ್ನಗರ

ಅಧಿಕಾರಿಗಳ ಸಂಧಾನ ಸಕ್ಸಸ್; ಮತದಾನಕ್ಕೆ ತೆರಳಿದ ಮುದ್ಲಾಪುರ ಗ್ರಾಮಸ್ಥರು

ಗ್ರಾಮದಲ್ಲಿ ಮೂಲಭೂತ ಸೌಕರ್ಯದ ಕೊರತೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಮುದ್ಲಾಪುರ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಹಾಕಿದ್ದು ಅಧಿಕಾರಿಗಳ ಮನವೋಲಿಕೆ ಸಕ್ಸಸ್ ಆಗಿದ್ದು ಇದೀಗ ಮತದಾನಕ್ಕೆ ತೆರಳಿದ್ದಾರೆ.

Vijaya Karnataka Web 5 Dec 2019, 12:56 pm
ಬಳ್ಳಾರಿ: ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಪಟ್ಟಾ , ರೈಲ್ವೆ ಸೇತುವೆ ನಿರ್ಮಾಣ ಸೇರಿದಂತೆ ಇನ್ನಿತರ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತದಾನ ಬಹಿಷ್ಕಾರ ನಡೆಸಿದ ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಮುದ್ಲಾಪುರ ಗ್ರಾಮಸ್ಥರು ಕೊನೆಗೂ ಮನದಾನ ಮಾಡಲು ಒಪ್ಪಿದ್ದಾರೆ.
Vijaya Karnataka Web karnataka by election voting boycott in bellary
ಅಧಿಕಾರಿಗಳ ಸಂಧಾನ ಸಕ್ಸಸ್; ಮತದಾನಕ್ಕೆ ತೆರಳಿದ ಮುದ್ಲಾಪುರ ಗ್ರಾಮಸ್ಥರು


ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು ಜನಪ್ರತಿನಿಧಿಗಳು ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಉಪಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧಾರ ಮಾಡಿದ್ದರು. ಮತದಾನದ ದಿನದಂದು ಮತಗಟ್ಟೆಗೆ ತೆರಳದೆ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮತದಾರ ಪ್ರಭುವಿನ ಕೈಯಲ್ಲಿದೆ 'ಬ್ರಹ್ಮಾಸ್ತ್ರ' : ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಗ್ರಾಮಸ್ಥರ ಆಕ್ರೋಶ ಹಾಗೂ ಮತದಾನ ಬಹಿಷ್ಕಾರದ ಹಿನ್ನೆಲೆಯಲ್ಲಿ ಸ್ಥಳಕ್ಕೆ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಮನವೋಲಿಕೆಗೆ ಬಂದರೂ ಗ್ರಾಮಸ್ಥರು ಇದಕ್ಕೆ ಜಗ್ಗಲಿಲ್ಲ. ಆನಂದ್ ಸಿಂಗ್ ಭೇಟಿಗೆ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಇದೇ ವೇಳೆ ವಿರೋಧ ವ್ಯಕ್ತಪಡಿಸಿದರು.

ಉಪ ಸಮರ: ಮತದಾನದ ವಿವಿಧ ಚಿತ್ರ ಸಂಪುಟ

ಬಳಿಕ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಹಾಶೀಂ ತನ್ವೀರ್ ಶೇಖ್ ಗ್ರಾಮಸ್ಥರಿಗೆ ಭರವಸೆ ನೀಡಿದ ಮೇರೆಗೆ ಬಹಿಷ್ಕಾರ ವಾಪಸ್ ಪಡೆದುಕೊಂಡರು. ಸುಮಾರು 1300 ಕ್ಕೂ ಹೆಚ್ಚು ಮತಗಳು ಈ ಗ್ರಾಮದಲ್ಲಿದ್ದು ಅಧಿಕಾರಿಗಳ ಸಂಧಾನದ ಬಳಿಕ ಮತದಾನ ಮಾಡಲು ತೆರಳಿದರು. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 11 ಗಂಟೆಯ ವರೆಗೆ 20.03% ಮತದಾನವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ