ಆ್ಯಪ್ನಗರ

ಬಾಲಕಿಯ ಉಪವಾಸಕ್ಕೆ ಮಣಿದು ಶೌಚಾಲಯ ನಿರ್ಮಿಸಿದ ಪಂಚಾಯತ್‌

ಏಳನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಸಿರಗುಪ್ಪ ತಾಲೂಕಿನ ತಲೂರ್‌ ಗ್ರಾಮದಲ್ಲಿ ಎರಡು ದಿನ ಊಟ, ನೀರು ಬಿಟ್ಟು ಪ್ರತಿಭಟನೆ ನಡೆಸಿ, ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.

Vijaya Karnataka Web 3 Mar 2018, 12:54 pm
ಬಳ್ಳಾರಿ: ಏಳನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಸಿರಗುಪ್ಪ ತಾಲೂಕಿನ ತಲೂರ್‌ ಗ್ರಾಮದಲ್ಲಿ ಎರಡು ದಿನ ಊಟ, ನೀರು ಬಿಟ್ಟು ಪ್ರತಿಭಟನೆ ನಡೆಸಿ, ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
Vijaya Karnataka Web karnataka girl goes on 2day fast gets toilet
ಬಾಲಕಿಯ ಉಪವಾಸಕ್ಕೆ ಮಣಿದು ಶೌಚಾಲಯ ನಿರ್ಮಿಸಿದ ಪಂಚಾಯತ್‌


ಗ್ರಾಮ ಪಂಚಾಯತ್‌ನಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಶೌಚಾಲಯದ ಅಗತ್ಯ, ಮಹತ್ವ ತಿಳಿದ ವಿದ್ಯಾರ್ಥಿನಿ ಎಚ್‌. ಮಹಾಂಕಾಳಿ ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿ ಊಟ, ನೀರು ತ್ಯಜಿಸಿದ್ದಳು. ಈಗ ಈಕೆ ಗ್ರಾಮದಲ್ಲಿ ಮಾದರಿ ಬಾಲಕಿ.

ಈಕೆಯ ಮನೆಗೆ 2015-16ರಲ್ಲಿ ಶೌಚಾಲಯ ಮಂಜೂರಾಗಿತ್ತು. ಆದರೆ ಅದು ಸಿಕ್ಕಿರಲಿಲ್ಲ. ಈ ಬಗ್ಗೆ ಪೋಷಕರು ಬಾಲಕಿಗೆ ತಿಳಿ ಹೇಳಿದರೂ ಆಕೆ ಒಪ್ಪದೆ ಉಪವಾಸ ಮುಂದುವರಿಸಿದ್ದಳು. ಪರೀಕ್ಷೆ ಹತ್ತಿರವಿರುವಾಗ ಉಪವಾಸ ಮಾಡಿದರೆ ಆರೋಗ್ಯ ಕೆಡುವುದಾಗಿ ಹೇಳಿದರೂ ಬಾಲಕಿ ಕೇಳಲಿಲ್ಲ. ವಿಷಯ ಗ್ರಾಮ ಪಂಚಾಯತ್‌ಗೆ ತಿಳಿದ ಬಳಿಕ ಪಂಚಾಯತ್‌ ಸದಸ್ಯರು ಆಕೆಯ ಮನವೊಲಿಸಲು ಮುಂದಾದರೂ ಪ್ರಯೋಜನವಾಲಿಲ್ಲ. ಕೊನೆಗೆ ಅಧಿಕಾರಿಗಳು ಆಕೆಯ ಮನೆಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಆರಂಭಿಸಿ ಮುಗಿಸಿಬಿಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ