ಆ್ಯಪ್ನಗರ

ಆ.14ರಿಂದ ಖಾದಿ ಗ್ರಾಮೋದ್ಯೋಗ ಮಾರಾಟ ಮೇಳ

ಖಾದಿ ಬಟ್ಟೆ ಮತ್ತು ಗ್ರಾಮೋದ್ಯೋಗ ವಸ್ತುಗಳ ಮಾರಾಟಕ್ಕೆ ವೇದಿಕೆ ಒದಗಿಸಲು ಜಿಲ್ಲೆಯಲ್ಲಿ ಮೊದಲ ಬಾರಿಗೆ ಆ.14ರಿಂದ ಆ.28ರವರೆಗೆ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ, ಮಾರಾಟದ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಹೇಳಿದರು.

Vijaya Karnataka Web 13 Aug 2018, 5:00 am
ಬಳ್ಳಾರಿ: ಖಾದಿ ಬಟ್ಟೆ ಮತ್ತು ಗ್ರಾಮೋದ್ಯೋಗ ವಸ್ತುಗಳ ಮಾರಾಟಕ್ಕೆ ವೇದಿಕೆ ಒದಗಿಸಲು ಜಿಲ್ಲೆಯಲ್ಲಿ ಮೊದಲ ಬಾರಿಗೆ ಆ.14ರಿಂದ ಆ.28ರವರೆಗೆ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ, ಮಾರಾಟದ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಹೇಳಿದರು.
Vijaya Karnataka Web khadi village industries fair from october 14th
ಆ.14ರಿಂದ ಖಾದಿ ಗ್ರಾಮೋದ್ಯೋಗ ಮಾರಾಟ ಮೇಳ


ಭಾನುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ಸವಕ್ಕಾಗಿ 25 ಲಕ್ಷ ರೂ.ಬಿಡುಗಡೆಯಾಗಿದ್ದು, ಬಳ್ಳಾರಿ ನಗರದ ನಲ್ಲ ಚೆರವಿನ ವಾಲ್ಮೀಕಿ ಭವನದ ಎದುರುಗಡೆ ಉತ್ಸವ ಆಯೋಜಿಸಲಾಗುತ್ತಿದೆ. ಸುಮಾರು 75 ಮಳಿಗೆಗಳನ್ನು ತೆಗೆಯಲಾಗುತ್ತಿದ್ದು, ಖಾದಿಗೆ ಸಂಬಂಧಿಸಿದಂತೆ 40 ಮಳಿಗೆ, ಇನ್ನುಳಿದ 35 ಮಳಿಗೆ ಗ್ರಾಮೋದ್ಯೋಗ ವಸ್ತುಪ್ರದರ್ಶನ ಮತ್ತು ಮಾರಾಟಕ್ಕೆ ಮೀಸಲಿಡಲಾಗಿದೆ. ತಮಿಳುನಾಡು, ಜಮ್ಮು ಕಾಶ್ಮೀರ, ಆಂಧ್ರ ಸೇರಿ ಇತರ ಭಾಗದಿಂದಲೂ ಖಾದಿ ಉದ್ದಿಮೆದಾರರು ಆಗಮಿಸಿ, ಖಾದಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

2ಕೋಟಿ ರೂ. ಅನುದಾನ: ಸರಕಾರದಿಂದ ಖಾದಿ ಬಟ್ಟೆಗಳ ಪ್ರಚಾರ ಮತ್ತು ಖಾದಿ ಉತ್ಸವಕ್ಕೆ ಪ್ರತಿ ವರ್ಷ 2 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ಇದರಲ್ಲಿ ರಾಜ್ಯ ಮಟ್ಟದ ಖಾದಿ ಉತ್ಸವಕ್ಕೆ 25 ಲಕ್ಷ ರೂ. ಬಳಸಿಕೊಳ್ಳಲಾಗುತ್ತಿದ್ದು, 15 ದಿನಗಳ ಅವಧಿಯಲ್ಲಿ 1 ಕೋಟಿ ರೂ. ವ್ಯವಹಾರದ ನಿರೀಕ್ಷೆ ಇದೆ. ಪ್ರತಿ ಖಾದಿ ಮಳಿಗೆಗೆ 12 ಸಾವಿರ ರೂ. ಮತ್ತು ಗ್ರಾಮೋದ್ಯೋಗ ಮಳಿಗೆಗೆ 10 ಸಾವಿರ ರೂ. ನಿಗದಿ ಪಡಿಸಲಾಗಿದೆ. ಖಾದಿ ವಸ್ತುಗಳ ಮಾರಾಟಕ್ಕೆ ರಾಜ್ಯದ ಶೇ.15 ಮತ್ತು ಕೇಂದ್ರದಿಂದ ಶೇ.20ರಷ್ಟು ಸೇರಿ ಒಟ್ಟು ಶೇ.35ರಷ್ಟು ರಿಯಾಯಿತಿ ದರದಲ್ಲಿ ಯಾವುದೇ ವಸ್ತುಗಳು ಮಾರಾಟಕ್ಕೆ ಲಭ್ಯ ಇವೆ. 'ಉಷ್ಣ ಕಾಲೇ ಶೀತಂ, ಶೀತ ಕಾಲೇ ಉಷ್ಣಂ, ಅದುವೇ ಖಾದಿ ವಸ್ತ್ರಂ' ಎಂಬಂತೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತ ಜಂಟಿಯಾಗಿ ಖಾದಿ ಉತ್ಸವ ನಡೆಸುತ್ತಿವೆ.

ಮೊದಲ ದಿನ ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಅವರು ಖಾದಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಮಳಿಗೆ ಉದ್ಘಾಟನೆ ಮಾಡಲಿದ್ದಾರೆ. ಗಾಂಧೀಜಿ ಪ್ರತಿಮೆಗೆ ಜಿ.ಪಂ. ಅಧ್ಯಕ್ಷೆ ಭಾರತೀ ತಿಮ್ಮಾರೆಡ್ಡಿ ಅವರು ಮಾಲಾರ್ಪಣೆ ಮಾಡಲಿದ್ದಾರೆ. ಬಳ್ಳಾರಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಉಪಮುಖ್ಯ ಕಾರ್ಯದರ್ಶಿ ಸೋಮನಾಥ್‌, ಜಿಲ್ಲಾ ಖಾದಿ ಗ್ರಾಮೋದ್ಯೋಗಾಧಿಕಾರಿ ಕೆ.ಗೋವಿಂದಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎ.ರಾಮಲಿಂಗಪ್ಪ ಸೇರಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ