ಆ್ಯಪ್ನಗರ

ಬಳ್ಳಾರಿ ವಿಭಜನೆ: ಕ್ಯಾಬಿನೆಟ್ ತೀರ್ಮಾನಗಳನ್ನು ಘೋಷಿಸುವುದಷ್ಟೇ ನನ್ನ ಕೆಲಸ ಎಂದ ಮಾಧುಸ್ವಾಮಿ!

ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರವಾಗಿ ನಾನು ಕೇವಲ ಸಚಿವ ಸಂಪುಟದ ತೀರ್ಮಾನಗಳನ್ನು ಮಾತ್ರ ಘೋಷಿಸುತ್ತೇನೆ ಹೊರತು ನನ್ನ ಸ್ವಂತ ಅಭಿಪ್ರಾಯ ತಿಳಿಸುವುದಿಲ್ಲ ಎಂದು ಕಾನೂನು ಸಚಿವ ಜಿ. ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Vijaya Karnataka Web 23 Nov 2020, 4:53 pm
ಸಿರಗುಪ್ಪ: ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರವಾಗಿ ನಾನು ಕೇವಲ ಸಚಿವ ಸಂಪುಟದ ತೀರ್ಮಾನಗಳನ್ನು ಮಾತ್ರ ಘೋಷಿಸುತ್ತೇನೆ ಹೊರತು ನನ್ನ ಸ್ವಂತ ಅಭಿಪ್ರಾಯ ತಿಳಿಸುವುದಿಲ್ಲ ಎಂದು ಕಾನೂನು ಸಚಿವ ಜೆಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
Vijaya Karnataka Web madhu swamy
ಸಂಗ್ರಹ ಚಿತ್ರ


ಜಿಲ್ಲೆಯ ಸಿರಗುಪ್ಪದಲ್ಲಿ ಮಾತನಾಡಿದ ಮಾಧುಸ್ವಾಮಿ, ಜಿಲ್ಲೆ ವಿಭಜನೆ ವಿಚಾರವಾಗಿ ಶಾಸಕ ಸೋಮಶೇಖರ್ ರೆಡ್ಡಿ ನನ್ನ ವಿರುದ್ಧ ಕಿಡಿಕಾರುವುದು ಸರಿಯಲ್ಲ ಎಂದು ಹೇಳಿದರು.

ನಾನು ಕೇವಲ ಕ್ಯಾಬಿನೆಟ್ ತೀರ್ಮಾನಗಳನ್ನು ಘೋಷಿಸುತ್ತೇನೆ. ಹೀಗಾಗಿ ಸೋಮಶೇಖರ್ ರೆಡ್ಡಿ ನನ್ನ ವಿರುದ್ಧ ಅಪಾರ್ಥ ಕಲ್ಪಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಬಳ್ಳಾರಿ ಬಂದ್‌ನಲ್ಲಿ ನೇರವಾಗಿ ಭಾಗಿಯಾಗಲ್ಲ, ಆದರೆ ಯಶಸ್ವಿಯಾಗಲಿ ಎಂದ ಸೋಮಶೇಖರ್‌ ರೆಡ್ಡಿ

ಕೇವಲ ಬಳ್ಳಾರಿ ಜಿಲ್ಲೆ ವಿಭಜನೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಸಂಬಂಧಿಸಿದ ಸಚಿವ ಸಂಪುಟದ ನಿರ್ಧಾರಗಳನ್ನು ನಾನು ಮಾಧ್ಯಮದ ಘೋಷಿಸುತ್ತೇನೆ. ಅದು ನನ್ನ ಕರ್ತವ್ಯ ಎಂದು ಮಾಧುಸ್ವಾಮಿ ಮಾರ್ಮಿಕವಾಗಿ ನುಡಿದರು.

ವಿಜಯನಗರ ಜಿಲ್ಲೆ ಆಗಲಿ ಅಥವಾ ಬಿಡಲಿ ಅದು ವೈಯಕ್ತಿಕವಾಗಿ ನನಗೆ ಸಂಬಂಧಿಸಿದ್ದಲ್ಲ. ಹೀಗಾಗಿ ನಾನು ಘೋಷಣೆ ಮಾಡಿದ್ದೇನೆ ಎಂದ ಮಾತ್ರಕ್ಕೆ ಸೋಮಶೇಖರ್ ರೆಡ್ಡಿ ನನ್ನ ವಿರುದ್ಧ ಕಿಡಿಕಾರುವುದು ಸಮಂಜಸವಲ್ಲ ಎಂದು ಮಾಧುಸ್ವಾಮಿ ಹೇಳಿದರು.

ವಿಜಯನಗರ ಜಿಲ್ಲೆ ರಚನೆಯನ್ನು ವಿರೋಧಿಸುತ್ತಿರುವ ಶಾಸಕ ಸೋಮಶೇಖರ್ ರೆಡ್ಡಿ, ಬಳ್ಳಾರಿ ಜಿಲ್ಲೆಯನ್ನು ಒಡೆಯಲು ಬಿಡುವುದಿಲ್ಲ ಎಂದು ಗುಡುಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಲವಂತದ 'ಬಳ್ಳಾರಿ ಬಂದ್' ಮಾಡಿದ್ರೆ ಕಾನೂನು ಕ್ರಮ..! ಪ್ರತಿಭಟನಾಕಾರರಿಗೆ ಸಚಿವ ಆನಂದಸಿಂಗ್ ಎಚ್ಚರಿಕೆ..!

ಇದೇ ವೇಳೆ ವಿಜಯನಗರ ಜಿಲ್ಲೆ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸಚಿವ ಆನಂದ್ ಸಿಂಗ್, ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿರುವುದು ಇಲ್ಲಿ ಗಮನಾರ್ಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ