ಆ್ಯಪ್ನಗರ

ಇವಿಎಂ ಯಂತ್ರ ವಿರೋಧಿಸಿ ಪತ್ರ ಚಳವಳಿ

ಚುನಾವಣೆ ವೇಳೆಯಲ್ಲಿ ಇವಿಎಂ ಯಂತ್ರ ಬೇಡ, ಹಳೆಯ ಪದ್ಧತಿಯ ಬ್ಯಾಲೆಟ್‌ ಪೇಪರ್‌ ಇರಲಿ ಎಂದು ಆಗ್ರಹಿಸಿ ನಗರದ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ರಾಷ್ಟ್ರಪತಿಯವರಿಗೆ ಬುಧವಾರ ಮನವಿ ರವಾನಿಸಿ, ಪತ್ರ ಚಳವಳಿ ನಡೆಸಿ

Vijaya Karnataka 27 Jun 2019, 5:00 am
ಬಳ್ಳಾರಿ: ಚುನಾವಣೆ ವೇಳೆಯಲ್ಲಿ ಇವಿಎಂ ಯಂತ್ರ ಬೇಡ, ಹಳೆಯ ಪದ್ಧತಿಯ ಬ್ಯಾಲೆಟ್‌ ಪೇಪರ್‌ ಇರಲಿ ಎಂದು ಆಗ್ರಹಿಸಿ ನಗರದ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ರಾಷ್ಟ್ರಪತಿಯವರಿಗೆ ಬುಧವಾರ ಮನವಿ ರವಾನಿಸಿ, ಪತ್ರ ಚಳವಳಿ ನಡೆಸಿದರು.
Vijaya Karnataka Web letter movement against evm machine
ಇವಿಎಂ ಯಂತ್ರ ವಿರೋಧಿಸಿ ಪತ್ರ ಚಳವಳಿ


ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈಗಲೂ ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸುತ್ತಾರೆ. ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಇವಿಎಂ ಮಾರಕವಾಗಿ ಪರಿಣಮಿಸಿದೆ. ದೇಶದ ಬಹುತೇಕ ಪಕ್ಷಗಳು ಇವಿಎಂ ಬೇಡ ಎಂದು ವಿರೋಧಿಸಿದರು. ಬಿಜೆಪಿ ಮಾತ್ರ ಬೇಕು ಎಂದು ಹಠಹಿಡಿದಿದೆ. ಕಳೆದ ಚುನಾವಣೆಯಿಲ್ಲಿ ಅಕ್ರಮವಾಗಿ ಮತಗಳನ್ನು ಪಡೆಯಲಾಗಿದೆ. ಆದ್ದರಿಂದ ಇವಿಎಂಗಳನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.ಪದ್ಮಾ, ಆಶಾಲತಾ, ಕುಮಾರಮ್ಮ, ಶಾಂತಾ, ಲಕ್ಷ್ಮಿ, ಮಲ್ಲೇಶ್ವರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ