ಆ್ಯಪ್ನಗರ

ವಸತಿ ಶಾಲೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ಏಕಲವ್ಯ ವಸತಿ ಶಾಲೆ ನಿರ್ಮಾಣಕ್ಕೆ ಹಳೇಕೋಟೆ ಗ್ರಾಮದ ಬಳಿ ಸರಕಾರಿ ಜಾಗ ಗುರುತಿಸಲು ಇತ್ತೀಚೆಗೆ ಸಂಸದ ಸಂಗಣ್ಣ ಕರಡಿ ಸ್ಥಳಕ್ಕೆ ಭೇಟಿ ನೀಡಿದರು.

Vijaya Karnataka 14 Jul 2018, 5:00 am
ಸಿರುಗುಪ್ಪ : ಏಕಲವ್ಯ ವಸತಿ ಶಾಲೆ ನಿರ್ಮಾಣಕ್ಕೆ ಹಳೇಕೋಟೆ ಗ್ರಾಮದ ಬಳಿ ಸರಕಾರಿ ಜಾಗ ಗುರುತಿಸಲು ಇತ್ತೀಚೆಗೆ ಸಂಸದ ಸಂಗಣ್ಣ ಕರಡಿ ಸ್ಥಳಕ್ಕೆ ಭೇಟಿ ನೀಡಿದರು.
Vijaya Karnataka Web BLR-BLY12SGP2


ನಂತರ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿ, ನಗರದ ಹೊರವಲಯದ ಆದರ್ಶ ಶಾಲೆಯ ಬಳಿಯ ಸರಕಾರಿ ಭೂಮಿಯನ್ನು ಕೇಂದ್ರದ ಮಹತ್ವಕಾಂಕ್ಷೆಯ ಏಕಲವ್ಯ ವಸತಿ ಶಾಲೆ ಸ್ಥಾಪನೆ ಯೋಜನೆಗೆ ಬಳಸಲಾಗುವುದು. 20 ಎಕರೆ ಸ್ಥಳ ಬೇಕಾಗಿದ್ದು, ಪರಿಶೀಲನೆ ಮಾಡಲಾಗಿದೆ. 6ನೇ ತರಗತಿಯಿಂದ 10ನೇ ತರಗತಿವರೆಗಿನ ಬಡ ವಿದ್ಯಾರ್ಥಿಗಳಿಗೆ ಏಕಲವ್ಯ ಶಾಲೆಯಲ್ಲಿ ವಸತಿಯೊಂದಿಗೆ ಶಿಕ್ಷಣ ದೊರೆಯಲಿದೆ. ಕೊಪ್ಪಳ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 3 ಶಾಲೆಗಳ ಆರಂಭಕ್ಕೆ ಯೋಜನೆ ರೂಪಿಸಲಾಗಿದೆ. ಮಸ್ಕಿ ತಾಲೂಕಿನ ವಟಗಲ್‌ಗ್ರಾಮದಲ್ಲಿ, ಕನಕಗಿರಿ ವಿಧಾನಸಭೆ ಕ್ಷೇತ್ರದ ನೀರಲೂಟಿ ಗ್ರಾಮಗಳಲ್ಲಿ ಸರಕಾರಿ ಭೂಮಿ ಗುರುತಿಸಲಾಗಿದೆ. ಸಿರುಗುಪ್ಪ ಕ್ಷೇತ್ರ ವ್ಯಾಪ್ತಿಯ ಹಳೇಕೋಟೆ ಗ್ರಾಮದಲ್ಲಿ ಜಾಗ ಪಡೆಯಲು ತಹಸೀಲ್ದಾರ್‌ ಜತೆ ಚರ್ಚಿಸಲಾಗುವುದು ಎಂದರು.

ನಿಟ್ಟೂರು ಮತ್ತು ಸಿಂಗಾಪುರ ನಡುವೆ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ಹಣ ಬಿಡುಗಡೆಯಾಗಿದ್ದು, ಟೆಂಡರ್‌ ಕರೆಯಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ 150.ಎ ನಲ್ಲಿ ಬರುವ ತಾಲೂಕಿನ ಹಳೇಕೋಟೆಯ ಮಾರೆಮ್ಮ ದೇವಸ್ಥಾನದಿಂದ ಸಿಂದಿಗೇರಿವರೆಗೆ ರಸ್ತೆ ಸುಧಾರಣೆಗೆ 92 ಕೋಟಿ ರೂ.ಬಿಡುಗಡೆಯಾಗಿದ್ದು, ಜು.18ರೊಳಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ತಹಸೀಲ್ದಾರ್‌ ಎಂ.ಸುನಿತಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಂತಮೂರ್ತಿಸ್ವಾಮಿ, ಮುಖಂಡರಾದ ಆರ್‌.ಸಿ.ಪಂಪನಗೌಡ, ಎಂ.ಎಸ್‌.ವೆಂಕಟಪ್ಪ, ಮಹಾದೇವ, ಅಶೋಕ್‌ಜೈನ್‌ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ