ಬಳ್ಳಾರಿ: ಲಾರಿ-ಬೈಕ್ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು!
ಲಾರಿ ಬೈಕ್ ಅಪಘಾತದಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬೈಕ್ ನಲ್ಲಿ ಹಂಪಿ ರಸ್ತೆಯಿಂದ ಹೊಸಪೇಟೆ ಕಡೆ ಪ್ರಯಾಣಿಸುತ್ತಿರುವ ಸಮಯದಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Vijaya Karnataka Web 29 Sep 2020, 12:29 pm
ಬಳ್ಳಾರಿ: ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ಸೆ.29ರಂದು ನಡೆದಿದೆ.
ಲಾರಿ, ಬೈಕ್ ನಡುವೆ ಅಪಘಾತವು ಹೊಸಪೇಟೆಯ ಹೊರವಲಯದ ಅನಂತಶಯನ ಗುಡಿ ಬಳಿ ಮಂಗಳವಾರ ನಡೆದಿದೆ.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಬಳಿಯ ಜರ್ಮಲಿ ಗ್ರಾಮದ ನಿವಾಸಿ ರಾಜ(34) ಹಾಗೂ ನಗರದ ಕಾರಿಗನೂರಿನ ರಂಜಿತಾ(24) ಎಂದು ಗುರುತಿಸಲಾಗಿದೆ.
ಹಂಪಿ ರಸ್ತೆಯಿಂದ ಹೊಸಪೇಟೆ ಕಡೆ ಪ್ರಯಾಣಿಸುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಮೃತರು ನಗರದ ಹೋಟೇಲ್ ಶಾನಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಎಎಸ್ ಪಿ ಲಾವಣ್ಯ ಭೇಟಿ ನೀಡಿ ಪರಿಶೀಲಿಸಿದರು.
ಲಾರಿ, ಬೈಕ್ ನಡುವೆ ಅಪಘಾತವು ಹೊಸಪೇಟೆಯ ಹೊರವಲಯದ ಅನಂತಶಯನ ಗುಡಿ ಬಳಿ ಮಂಗಳವಾರ ನಡೆದಿದೆ.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಬಳಿಯ ಜರ್ಮಲಿ ಗ್ರಾಮದ ನಿವಾಸಿ ರಾಜ(34) ಹಾಗೂ ನಗರದ ಕಾರಿಗನೂರಿನ ರಂಜಿತಾ(24) ಎಂದು ಗುರುತಿಸಲಾಗಿದೆ.
ಹಂಪಿ ರಸ್ತೆಯಿಂದ ಹೊಸಪೇಟೆ ಕಡೆ ಪ್ರಯಾಣಿಸುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಮೃತರು ನಗರದ ಹೋಟೇಲ್ ಶಾನಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಎಎಸ್ ಪಿ ಲಾವಣ್ಯ ಭೇಟಿ ನೀಡಿ ಪರಿಶೀಲಿಸಿದರು.