ಆ್ಯಪ್ನಗರ

ಬಳ್ಳಾರಿ: ಹೆದ್ದಾರಿಯಲ್ಲಿ ಧಗ ಧಗನೇ ಹೊತ್ತಿ ಉರಿದು ಕರಕಲಾದ ಲಾರಿ!

ಲಾರಿ ಪುಣೆಯಿಂದ ತಮಿಳುನಾಡಿನ ಕಡೆ ಕಬ್ಬಿಣದ ವಸ್ತುಗಳನ್ನು ಹೊತ್ತು ತೆರಳುತ್ತಿತ್ತು. ಲಾರಿಯ ಇಂಜಿನ್‍ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ, ಲಾರಿಯು ಧಗ ಧಗನೆ ಉರಿದು ಭಾರೀ ಜ್ವಾಲೆ ಹಬ್ಬಿದೆ. ಬೆಂಕಿಯ ಜ್ವಾಲೆಗೆ ಲಾರಿ ಸುಟ್ಟು ಕರಕಲಾಗಿದೆ.

Vijaya Karnataka Web 7 Dec 2020, 8:32 am
ಕಾನಾಹೊಸಹಳ್ಳಿ: ಸಮೀಪದ ಹುಲಿಕೆರೆ-ಆಲೂರು ಮಧ್ಯೆ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಭಾನುವಾರ ಲಾರಿಗೆ ಬೆಂಕಿ ಆಕಸ್ಮಿಕ ತಗುಲಿ, ಇಂಜಿನ್‌ ಸುಟ್ಟು ಭಸ್ಮವಾಗಿದೆ. ಲಾರಿ ಪುಣೆಯಿಂದ ತಮಿಳುನಾಡಿನ ಕಡೆ ಕಬ್ಬಿಣದ ವಸ್ತುಗಳನ್ನು ಹೊತ್ತು ತೆರಳುತ್ತಿತ್ತು. ಲಾರಿಯ ಇಂಜಿನ್‍ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ, ಲಾರಿಯು ಧಗ ಧಗನೆ ಉರಿದು ಭಾರೀ ಜ್ವಾಲೆ ಹಬ್ಬಿದೆ.
Vijaya Karnataka Web lorry


ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯಿಂದ ಕೆಳಗೆ ಧುಮುಕಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ವೇಳೆ ಹೆದ್ದಾರಿ ಸಹಾಯ ಯುವಪಡೆಯ ಯುವಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ಹಾಗೂ ಕೂಡ್ಲಿಗಿ ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಿವೆ. ಆದರೂ ಲಾರಿ ಬೆಂಕಿಗಾಹುತಿಯಾಗಿದೆ. ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ