ಆ್ಯಪ್ನಗರ

ಮದುವೆಗೆ ಅಡ್ಡಿ: ಪ್ರೇಮಿಗಳು ಆತ್ಮಹತ್ಯೆ

ತಮ್ಮ ನಿರೀಕ್ಷೆಯಂತೆ ಮದುವೆ ನಡೆಯದ್ದರಿಂದ ಮನನೊಂದ ಪ್ರೇಮಿಗಳಿಬ್ಬರು, ತಾಲೂಕಿನ ಚಿರತಗುಂಡು ಹೊರವಲಯದಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka 3 Oct 2018, 12:00 am
ಕೂಡ್ಲಿಗಿ (ಬಳ್ಳಾರಿ): ತಮ್ಮ ನಿರೀಕ್ಷೆಯಂತೆ ಮದುವೆ ನಡೆಯದ್ದರಿಂದ ಮನನೊಂದ ಪ್ರೇಮಿಗಳಿಬ್ಬರು, ತಾಲೂಕಿನ ಚಿರತಗುಂಡು ಹೊರವಲಯದಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web lovers commit suicide
ಮದುವೆಗೆ ಅಡ್ಡಿ: ಪ್ರೇಮಿಗಳು ಆತ್ಮಹತ್ಯೆ


ಚಿರತಗುಂಡು ಗ್ರಾಮದ ಶೋಭಾ (21) ಹಾಗೂ ತಿಪ್ಪೇಸ್ವಾಮಿ (23) ಮೃತರು. ಈ ಪ್ರೇಮಿಗಳು, ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಪ್ರೀತಿ ವಿಷಯ ಮನೆಯವರಿಗೆ ತಿಳಿದಿದ್ದರೂ ಮದುವೆ ಮಾಡಲು ಮುಂದಾಗಿದ್ದಿಲ್ಲ. ಒಂದೇ ಸಮುದಾಯದವರಾಗಿದ್ದರೂ ಮನೆಯವರು ಮದುವೆ ಮಾಡಲಿಲ್ಲ ಎಂಬ ಕೊರಗು ಉಭಯ ಪ್ರೇಮಿಗಳನ್ನು ಕಾಡುತ್ತಿತ್ತು ಎನ್ನಲಾಗಿದೆ.

ನಾಲ್ಕು ತಿಂಗಳ ಹಿಂದೆಯಷ್ಟೇ ಮಾರಮ್ಮನಹಳ್ಳಿಯ ಬೇರೊಬ್ಬ ಯುವಕನೊಂದಿಗೆ ಶೋಭಾ ಅವರ ಮದುವೆ ಮಾಡಿಕೊಡಲಾಗಿತ್ತು. ಕಳೆದ ವಾರವಷ್ಟೇ ಈ ಯುವತಿ, ತನ್ನ ತವರು ಮನೆ ಚಿರತಗುಂಡು ಗ್ರಾಮಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಬೇರೆ ಊರಿಗೆ ಹೋಗಿದ್ದ ಅವರ ಪ್ರೇಮಿ ತಿಪ್ಪೇಸ್ವಾಮಿ ಅವರೂ ಸ್ವಗ್ರಾಮಕ್ಕೆ ಮರಳಿದ್ದರು. ಇಬ್ಬರೂ ಸೆ.29ರಂದು ಮನೆಯಿಂದ ಕಾಣೆಯಾಗಿದ್ದರು.

ಉಭಯ ಕುಟುಂಬಗಳ ಸದಸ್ಯರು, ಕಾಣೆಯಾದವರಿಗಾಗಿ ಅಲ್ಲಲ್ಲಿ ಹುಡುಕಾಡಿದ್ದರು. ಮಂಗಳವಾರ ಬೆಳಗಿನ ಜಾವ, ಚಿರತಗುಂಡು ಹೊರವಲಯದ ಜಮೀನೊಂದರ ಮರಕ್ಕೆ ಶೋಭಾ ಧರಿಸಿದ್ದ ಸೀರೆಯಿಂದ ಅವರಿಬ್ಬರು ನೇಣಿಗೆ ಶರಣಾಗಿದ್ದಾರೆ. ಸಿಪಿಐ ನಹೀಂ ಅಹ್ಮದ್ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿದ್ದರು. ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ