ಆ್ಯಪ್ನಗರ

ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಿ: ನಾಡಗೌಡ

ಸಮಾಜದ ಹಲವು ರಂಗಗಳಲ್ಲಿ ಕುಸಿದಿರುವ ಮೌಲ್ಯಗಳಿಗೆ ಇಂದಿನ ಶಿಕ್ಷ ಣದಲ್ಲಿ ಸಂಸ್ಕಾರ ಕೊರತೆಯಿರುವುದೇ ಪ್ರಮುಖ ಕಾರಣವಾಗಿದೆ. ದೇಶ ಕಟ್ಟುವ ಮಕ್ಕಳು ವಿಚಾರ ಮತ್ತು ಆಚರಣೆಯಲ್ಲಿ ಶುದ್ಧ ಹಸ್ತದಿಂದಿರಬೇಕು ಮತ್ತು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

Vijaya Karnataka 24 Jul 2018, 5:00 am
ಎಮ್ಮಿಗನೂರು : ಸಮಾಜದ ಹಲವು ರಂಗಗಳಲ್ಲಿ ಕುಸಿದಿರುವ ಮೌಲ್ಯಗಳಿಗೆ ಇಂದಿನ ಶಿಕ್ಷ ಣದಲ್ಲಿ ಸಂಸ್ಕಾರ ಕೊರತೆಯಿರುವುದೇ ಪ್ರಮುಖ ಕಾರಣವಾಗಿದೆ. ದೇಶ ಕಟ್ಟುವ ಮಕ್ಕಳು ವಿಚಾರ ಮತ್ತು ಆಚರಣೆಯಲ್ಲಿ ಶುದ್ಧ ಹಸ್ತದಿಂದಿರಬೇಕು ಮತ್ತು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.
Vijaya Karnataka Web make human values nada gowda
ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಿ: ನಾಡಗೌಡ


ಗ್ರಾಮದ ಹಂಪಿ ಸಾವಿರ ದೇವರು ಮಹಾಂತರ ಮಠದಲ್ಲಿ ಭಾನುವಾರ ನಡೆದ, ಶ್ರೀಗುರು ಸಿದ್ಧಲಿಂಗ ದೇಶೀಕೇಂದ್ರ ಶಿವಾಚಾರ್ಯರ ಲಿಂಗಾಂಗ ಸಾಮರಸ್ಯ ಸಂಸ್ಮರಣೋತ್ಸವ ಮತ್ತು ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರಿಗೂ ಅಕ್ಷ ರ ಜ್ಞಾನದಷ್ಟೇ ಮುಖ್ಯವಾಗಿ ಪರಿಸರದ ಬಗ್ಗೆ ಕಾಳಜಿಯೂ ಇರಬೇಕು.ಶಿಕ್ಷ ಣಕ್ಕೆ ಕೊಡುವಷ್ಟೇ ಮಹತ್ವವನ್ನು ಗಿಡ ಮರಗಳನ್ನು ಬೆಳೆಸಲು ನೀಡಬೇಕು. ಇಲ್ಲದಿದ್ದರೆ ಬರಗಾಲ ಜನರನ್ನು ಕಾಡುವುದರಲ್ಲಿ ಅನುಮಾನವಿಲ್ಲ. ದೇಶ ಸುಭಿಕ್ಷೆಯಿಂದಿರಲೂ ಉತ್ತಮ ಸಂಸ್ಕಾರ ಮತ್ತು ಒಳ್ಳೆಯ ಪರಿಸರ ಇರಬೇಕು ಎಂದರು.

ಕಾರ್ಯಕ್ರಮದಲ್ಲಿ 2017- 18ನೆ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಶಂಷಾಬಿ, ಶಾಂತಮ್ಮ, ಅಂಜಿ ಹಾಗೂ ಎಸ್ಸೆಸ್ಸೆಲ್ಸಿ ವಿಭಾಗದ ಎಚ್‌.ಎಂ.ಗಣೇಶ 589, ಕೆ.ಗಣೇಶ 589, ಬಾಷಾ, ಪಾಂಡುರಂಗ, ಸಲೀಮಾ, ಹೇಮಾವತಿ ಎಂ.ಎ ಅವರನ್ನು ಸನ್ಮಾನಿಸಲಾಯಿತು. ಶ್ರೀ ವಾಮದೇವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮಳಖೇಡ ವೀರಗಂಗಾಧರ ಸ್ವಾಮೀಜಿ, ಹಂಪಸಾಗರ ಶಿವರುದ್ರಮುನಿ ಸ್ವಾಮೀಜಿ, ಕೊಟ್ಟೂರು ಸಿದ್ಧಲಿಂಗ ಸ್ವಾಮೀಜಿ, ನಂದಿಪುರ ಮಹೇಶ್ವರ ಸ್ವಾಮೀಜಿ, ಕಮ್ಮರುಚೇಡು ಕಲ್ಯಾಣ ಸ್ವಾಮೀಜಿ, ನಿವೃತ್ತ ವ್ಯದ್ಯಾಧಿಕಾರಿ ವೀರನಗೌಡ, ಎಚ್‌.ಗವಿಸಿದ್ದಪ್ಪ,ಬಿ.ಸದಾಶಿವಪ್ಪ ಇನ್ನಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ