ಆ್ಯಪ್ನಗರ

‘ಆಮಿಷ ತಿರಸ್ಕರಿಸಿ ಮತದಾನ ಮಾಡಿ’

ಆಮಿಷಗಳಿಗೆ ಒಳಗಾಗದೆ ಮತದಾನ ಮಾಡುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಗೊಳಿಸಬೇಕು ಎಂದು ಹಂಪಸಾಗರ ನವಲಿ ಹಿರೇಮಠದ ಶಿವಲಿಂಗರುದ್ರಮುನಿ ಶಿವಾಚಾರ್ಯ ಹೇಳಿದರು.

Vijaya Karnataka Web 19 Dec 2022, 2:34 pm
ಹಗರಿಬೊಮ್ಮನಹಳ್ಳಿ : ಆಮಿಷಗಳಿಗೆ ಒಳಗಾಗದೆ ಮತದಾನ ಮಾಡುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಗೊಳಿಸಬೇಕು ಎಂದು ಹಂಪಸಾಗರ ನವಲಿ ಹಿರೇಮಠದ ಶಿವಲಿಂಗರುದ್ರಮುನಿ ಶಿವಾಚಾರ್ಯ ಹೇಳಿದರು.
Vijaya Karnataka Web BLR-BLY19HBH3


ಪಟ್ಟಣದಲ್ಲಿ ಚಿತ್ರಕಲಾವಿದ ಆನಂದ್‌ ಕಡ್ಲಿ ರಚಿಸಿದ ಮತದಾನ ಜಾಗೃತಿ ಕುರಿತಾದ ಬಿತ್ತಿಚಿತ್ರಗಳನ್ನು ಅನಾವರಣಗೊಳಿಸಿ ಗುರುವಾರ ಮಾತನಾಡಿದರು. ಪ್ರಜಾಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕು ಮತದಾನದಿಂದ ಒದಗುತ್ತದೆ. ಸಂಘಸಂಸ್ಥೆಗಳು ಸುಗಮ ಮತದಾನ ವ್ಯವಸ್ಥೆಗೆ ಪೂರಕವಾಗಿ ಜನಜಾಗೃತಿ ಮೂಡಿಸಬೇಕಿದೆ ಎಂದರು. ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಿ.ಎಂ.ಮಂಜುನಾಥ, ತಾಲೂಕು ಕೋಶಾಧ್ಯಕ್ಷ ಎಚ್‌.ನಾಗರಾಜ, ಸಂಚಾಲಕ ಎಸ್‌.ಕೊಟ್ರೇಶ್‌, ಕಾರ್ಯದರ್ಶಿ ಅಜ್ಜೇಶ್‌, ಜೆಸ್ಕಾಂ ಶಾಖಾಧಿಕಾರಿ ಆರ್‌.ಹೇಮರೆಡ್ಡಿ, ಜೈಭಜರಂಗಿ ಫಿಟ್‌ನೆಸ್‌ ಸೆಂಟರ್‌ನ ಮೇಘರಾಜ, ರಘು, ದೇಹದಾಢ್ರ್ಯಪಟು ಯಮನೂರು ಇತರರಿದ್ದರು. ಬಳಿಕ ಪ್ರತಿ ಅಂಗಡಿಗಳಿಗೆ ಮತದಾನ ಜಾಗೃತಿ ಕುರಿತ ಬಿತ್ತಿ ಚಿತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ