ಆ್ಯಪ್ನಗರ

ಮಂತ್ರಾಲಯ ಶ್ರೀಗೆ ಗ್ಲೋಪೇಂಟಿಂಗ್ ಅರ್ಪಣೆ

ಅಂತಾರಾಷ್ಟ್ರೀಯ ಗ್ಲೋಪೇಂಟ್ ಕಲಾವಿದ ಮಹೇಂದ್ರ ಆಚಾರ್ ಅವರು ಸ್ಥಳದಲ್ಲೇ ರಚಿಸಿದ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರ ತೀರ್ಥರ ಗ್ಲೋಪೇಂಟಿಂಗ್ ಅನ್ನು ಮಂಗಳವಾರ ಅರ್ಪಿಸಿದರು.

ವಿಕ ಸುದ್ದಿಲೋಕ 4 May 2017, 11:16 am
ಸಿರುಗುಪ್ಪ (ಬಳ್ಳಾರಿ): ಅಂತಾರಾಷ್ಟ್ರೀಯ ಗ್ಲೋಪೇಂಟ್ ಕಲಾವಿದ ಮಹೇಂದ್ರ ಆಚಾರ್ ಅವರು ಸ್ಥಳದಲ್ಲೇ ರಚಿಸಿದ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರ ತೀರ್ಥರ ಗ್ಲೋಪೇಂಟಿಂಗ್ ಅನ್ನು ಮಂಗಳವಾರ ಅರ್ಪಿಸಿದರು.
Vijaya Karnataka Web mantralaya sri glow painting offering
ಮಂತ್ರಾಲಯ ಶ್ರೀಗೆ ಗ್ಲೋಪೇಂಟಿಂಗ್ ಅರ್ಪಣೆ


ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಆರ್ಯವೈಶ್ಯ ಮಂಡಳಿ ವಾಸವಿ ಜಯಂತಿಯ ಸುವರ್ಣ ಮಹೋತ್ಸವದಲ್ಲಿ ಅವರು ಇಂತಹ ಕೈಚಳಕ ತೋರಿದರು. ವೇದಿಕೆಯಲ್ಲಿ ಕುಳಿತಿದ್ದ ಶ್ರೀಗಳ ಭಾವಚಿತ್ರವನ್ನು ಕೆಲವೇ ನಿಮಿಷಗಳಲ್ಲಿ ಬಿಡಿಸಿ ಗಮನಸೆಳೆದರು. ನಂತರ ಆ ಚಿತ್ರವನ್ನು ಅವರು ಶ್ರೀಗಳಿಗೆ ಅರ್ಪಿಸಿದರು. ಕಲಾವಿದ ಮಹೇಂದ್ರ ಆಚಾರ್ ಅವರು ಮೂಲತಃ ಮಂಗಳೂರು ಜಿಲ್ಲೆಯ ಕುಂದಾಪುರದವರಾಗಿದ್ದಾರೆ. ಗ್ಲೋಪೇಂಟ್ ವಿಶಿಷ್ಟವಾದ ಕಲಾಪ್ರಕಾರವಾಗಿದೆ. ಕಪ್ಪು ಕ್ಯಾನ್‌ವಾಸ್‌ನಲ್ಲಿ ಅಂಟಿನಂತಹ ದ್ರಾವಣ ಬಳಸಿ ಚಿತ್ರ ಬಿಡಿಸಲಾಗುತ್ತದೆ. ನಂತರ ಕ್ಯಾನ್‌ವಾಸ್ ಮೇಲೆ ಚಿತ್ರದ ಆಕೃತಿ ಆಧರಿಸಿ ಮಿಂಚು ಎರಚಲಾಗುತ್ತದೆ. ಅಂಟಿಕೊಳ್ಳುವ ಮಿಂಚಿನಿಂದ ಕಲಾಕತಿಗಳು ಸುಂದರವಾಗಿ ಒಡಮೂಡುತ್ತವೆ. ನೆರಳು ಬೆಳಕಿನಲ್ಲಿ ಹೊಳೆಯುವ ಮೂಲಕ ಇಂತಹ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ