ಆ್ಯಪ್ನಗರ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಅಪಹರಣ ಕೇಸ್: ಐವರ ಬಂಧನ

ಹೊಸಪೇಟೆ ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿ ಡಿಂಡಿ ಮಹರ್ಷಿ(47) ಅಪಹರಣಕ್ಕೆ ಒಳಗಾದವರು. 8 ವರ್ಷಗಳಿಂದ ಸೋಮಲಾಪುರ ಸಹಕಾರಿ ಸಂಘದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಎಂದಿನಂತೆ ದ್ವಿಚಕ್ರವಾಹನದಲ್ಲಿ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಹೊರಟಿದ್ದ ವೇಳೆ ಅಪಹರಣ ಮಾಡಲಾಗಿತ್ತು.

Vijaya Karnataka Web 10 Apr 2019, 10:59 pm
ಕುರುಗೋಡು: ಸಮೀಪದ ಸೋಮಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿಯನ್ನು ಹಣಕ್ಕಾಗಿ ಅಪಹರಿಸಿಕೊಂಡು ಹೋಗಲೆತ್ನಿಸಿದ 5 ಜನರನ್ನು ಸ್ಥಳೀಯ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Vijaya Karnataka Web accused arrested


ಹೊಸಪೇಟೆ ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿ ಡಿಂಡಿ ಮಹರ್ಷಿ(47) ಅಪಹರಣಕ್ಕೆ ಒಳಗಾದವರು. 8 ವರ್ಷಗಳಿಂದ ಸೋಮಲಾಪುರ ಸಹಕಾರಿ ಸಂಘದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಎಂದಿನಂತೆ ದ್ವಿಚಕ್ರವಾಹನದಲ್ಲಿ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಹೊರಟಿದ್ದಾರೆ.

ಈ ವೇಳೆ ರಮೇಶ್‌, ರೇಣುಕಾ, ಮಾರುತಿ, ಯುವರಾಜ, ವಿನೋದ, ಚನ್ನಬಸವ ಎನ್ನುವವರು ಓರ್ವಾಯಿ ಕ್ರಾಸ್‌ ಸಮೀಪದ ಹಳ್ಳದ ಬಳಿ ತಡೆದಿದ್ದಾರೆ. ಸ್ವಿಪ್ಟ್‌ ಕಾರಿನಿಂದ ಇಳಿದು ಬೈಕ್‌ ತಡೆದು ಬಲವಂತವಾಗಿ ಕೈ-ಕಾಲು ಕಟ್ಟಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ. 20 ಸಾವಿರ ರೂ.ಕಿತ್ತುಕೊಂಡು ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿದ್ದಾರೆ.

30 ಲಕ್ಷ ರೂ.ಕೊಟ್ಟರೆ, ಬಿಡುತ್ತೇವೆ. ಇಲ್ಲವಾದರೆ, ಮುಗಿಸುತ್ತೇವೆ ಎಂದಿದ್ದಾರೆ. ಜಿರಿಗನೂರು ಬಳಿ ಕಾರು ಹೋಗುತ್ತಿದ್ದ ಟಯರ್‌ ಬರ್ಸ್ಟ್‌ ಆಗಿದ್ದು, ಗಮನಿಸಿದ ಗ್ರಾಮಸ್ಥರು ಠಾಣೆಗೆ ಮಾಹಿತಿ ತಿಳಿಸಿದ್ದರು. ಕುರುಗೋಡು ಸಿಪಿಐ ಮಂಜುನಾಥ, ಪಿಎಸ್‌ಐ ಸಿದ್ದರಾಮೇಶ್ವರ, ಪೊಲೀಸ್‌ ಸಿಬ್ಬಂದಿ ಮಹೇಶ್‌, ಶಿವರಾಯಪ್ಪ, ಬಸವನಗೌಡ, ನಾಗಿರೆಡ್ಡಿ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ವಶಪಡಿಸಿಕೊಂಡು ಪಿಸ್ತೂಲ್‌ ಜಪ್ತಿ ಮಾಡಿದ್ದಾರೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ