ಆ್ಯಪ್ನಗರ

ಬಿ.ಶ್ರೀರಾಮುಲು ತವರಿನಲ್ಲಿ ಬಳ್ಳಾರಿ ಜಿಲ್ಲೆ ವಿಭಜನೆಗೆ ಆಕ್ರೋಶ: ಅಂತಾರಾಜ್ಯ ರಸ್ತೆ ಬಂದ್!

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚನೆ ನಿರ್ಣಯ ವಿರೋಧಿಸಿ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತವರಿನಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ರ್ನಾಟಕ ಮತ್ತು ಆಂಧ್ರ ಸಂಪರ್ಕಿಸುವ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗಿದೆ.

Vijaya Karnataka Web 29 Nov 2020, 11:37 am
ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚನೆ ನಿರ್ಣಯ ವಿರೋಧಿಸಿ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತವರಿನಲ್ಲಿ ಭಾರೀ ಪ್ರತಿಭಟನೆ ನಡೆದಿದೆ.
Vijaya Karnataka Web KHM
ಸಂಗ್ರಹ ಚಿತ್ರ


ಕನ್ನಡ ಹಾಗೂ ತೆಲುಗಿನ ಖ್ಯಾತ ಸಾಹಿತಿ ಗುತ್ತಿ ಚಂದ್ರಶೇಖರ್‌ ರೆಡ್ಡಿ ನೇತೃತ್ವದಲ್ಲಿ ತಾಲೂಕಿನ ಜೋಳದರಾಶಿ ಗ್ರಾಮದ ಬಳಿ ಕರ್ನಾಟಕ ಮತ್ತು ಆಂಧ್ರ ಸಂಪರ್ಕಿಸುವ ರಸ್ತೆ ಬಂದ್‌ ಮಾಡಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಸಾಹಿತಿ ರಘುನಾಥ್‌ ಮಾತನಾಡಿ, ನಮ್ಮ ಎರಡು ಜಿಲ್ಲೆಗಳನ್ನು ಒಡೆದ ನೋವು ಇಂದಿಗೂ ಕಾಡುತ್ತಿದೆ. ಅದೇ ರೀತಿ ಬಳ್ಳಾರಿಯನ್ನು ಇಲ್ಲಿನ ರಾಜಕಾರಣಿ ತಮ್ಮ ಸ್ವಾರ್ಥಕ್ಕಾಗಿ ಒಡೆದು ನಮ್ಮೆಲ್ಲರ ಜೀವನದ ಜತೆ ಆಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯನಗರದಿಂದ ಕಂಪ್ಲಿ ಕೈಬಿಟ್ಟಿದ್ದಕ್ಕೆ ಜನರ ಬೇಸರ..! ನೂತನ ಜಿಲ್ಲೆಗೆ ಸೇರಿಸುವಂತೆ ಸರಕಾರಕ್ಕೆ ಆಗ್ರಹ

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕರೂರು ಆರ್‌.ಮಾಧವ ರೆಡ್ಡಿ ಮಾತನಾಡಿ, ಒಬ್ಬ ಶಾಸಕರ ಓಲೈಕೆಗಾಗಿ ಸರಕಾರ ಜಿಲ್ಲೆ ವಿಭಜನೆ ಮಾಡಿದೆ. ಜಿಲ್ಲೆ ವಿಭಜನೆ ಖಂಡಿಸಿ ಜಿಲ್ಲೆಯ ಒಬ್ಬ ಶಾಸಕರೂ ರಾಜೀನಾಮೆ ನೀಡಲು ಮುಂದಾಗಲಿಲ್ಲ, ಇದು ಬಹುದೊಡ್ಡ ದುರಂತ ಎಂದು ಕಿಡಿಕಾರಿದರು.

ಶ್ರೀರಾಮುಲು ಜಿಲ್ಲೆ ವಿಭಜನೆ ಖಂಡಿಸಲಿಲ್ಲ. ನಗರ ಶಾಸಕ ಸೋಮಶೇಖರ ರೆಡ್ಡಿ ಕೇವಲ ಹೇಳಿಕೆಗಷ್ಟೆ ಸೀಮಿತರಾದರು ಎಂದು ಮಾಧವ ರೆಡ್ಡಿ ಹರಿಯಾಯ್ದರು.

6 ತಾಲೂಕು ಸೇರ್ಪಡೆಗೊಳ್ಳುವ ಮೂಲಕ 31ನೇ ಜಿಲ್ಲೆಯಾಗಿ ಉದಯವಾದ ವಿಜಯನಗರ, ಹಲವು ವರ್ಷಗಳ ಹೋರಾಟಕ್ಕೆ ಜಯ!

ಚಾಗನೂರು-ಸಿರಿವಾರ ನೀರಾವರಿ ಭೂ ರಕ್ಷಣಾ ಹೋರಾಟ ಸಮಿತಿ, ಜೋಳದರಾಶಿ ಗ್ರಾಮದಲ್ಲಿನ ರೈತ ಸಂಘ ಸೇರಿ ವಿವಿಧ ಸಂಘಟನೆ ಪದಾಧಿಕಾರಿಗಳು ಬೆಂಬಲ ನೀಡಿ ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ