ಆ್ಯಪ್ನಗರ

ಮತ್ಸ ನಾರಾಯಣಸ್ವಾಮಿ ಬ್ರಹ್ಮೋತ್ಸವ

ತಾಲೂಕಿನ ಪಿಂಜಾರ್‌ಹೆಗ್ಡಾಳ್‌ ಗ್ರಾಮದಲ್ಲಿ ಮತ್ಸ ನಾರಾಯಣ ಸ್ವಾಮಿ ಬ್ರಹ್ಮೋತ್ಸವದ ನಿಮಿತ್ತ ದೇಗುಲದಲ್ಲಿ ಮತ್ಸನಾರಾಯಣ ಮತ್ತು ಲಕ್ಷ್ಮೀದೇವಿ ಕಲ್ಯಾಣೋತ್ಸವ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

Vijaya Karnataka 23 Feb 2019, 5:00 am
ಹಗರಿಬೊಮ್ಮನಹಳ್ಳಿ : ತಾಲೂಕಿನ ಪಿಂಜಾರ್‌ಹೆಗ್ಡಾಳ್‌ ಗ್ರಾಮದಲ್ಲಿ ಮತ್ಸ ನಾರಾಯಣ ಸ್ವಾಮಿ ಬ್ರಹ್ಮೋತ್ಸವದ ನಿಮಿತ್ತ ದೇಗುಲದಲ್ಲಿ ಮತ್ಸನಾರಾಯಣ ಮತ್ತು ಲಕ್ಷ್ಮೀದೇವಿ ಕಲ್ಯಾಣೋತ್ಸವ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web BLR-BLY22HBH2


ಆರಂಭದಲ್ಲಿ ಮತ್ಸನಾರಾಯಣ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿ, ಅಭಿಷೇಕ ಸಲ್ಲಿಸಲಾಯಿತು. ಹುತ್ತದ ಮಣ್ಣಿನಿಂದ ಸಿದ್ಧಪಡಿಸಲಾದ ಹೋಮದ ಕುಂಡದಲ್ಲಿ ವಿಶೇಷ ಪೂಜೆ ಮತ್ತು ಹೋಮ ನೆರವೇರಿಸಲಾಯಿತು. ಹೈದರಾಬಾದ್‌ನ ರಾಮಾನುಚಾರ್ಯ ತಂಡ ಬ್ರಹ್ಮೋತ್ಸವದ ನೇತೃತ್ವವಹಿಸಿದ್ದರು. ಸಂಜೆ ಲಕ್ಷ್ಮಿದೇವಿ ಮತ್ತು ಮತ್ಸನಾರಾಯಣ ಸ್ವಾಮಿ ಕಲ್ಯಾಣೋತ್ಸವ ವಿಜೃಂಭಣೆಯಿಂದ ಜರುಗಿತು. ದೇಗುಲದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹೆಗ್ಡಾಳ್‌ ಶ್ರೀನಿವಾಸ ಮತನಾಡಿ, ಫೆ.24ರಂದು ದೇಗುಲದಲ್ಲಿ ಲಕ್ಷ್ಮೀದೇವಿ ಮತ್ತು ಅಂಡಾಳಮ್ಮ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಈ ಹಿನ್ನೆಲೆಯಲ್ಲಿ ಫೆ.23ರಿಂದ ಉಭಯ ಮೂರ್ತಿಗಳ ಜಲಾಧಿವಾಸ, ಧಾನ್ಯದಿವಾಸ, ಶಯನಾದಿವಾಸ ನಡೆಯಲಿದೆ. ಬ್ರಹ್ಮೋತ್ಸವ ನಿಮಿತ್ತ ಫೆ.27ರವರೆಗೆ ವಿಶೇಷ ಪೂಜೆ ಮತ್ತು ಹೋಮ ಹಮ್ಮಿಕೊಳ್ಳಲಾಗಿದೆ ಎಂದರು. ದೇಗುಲ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್‌, ಡಾ.ಭರತ್‌ಕುಮಾರ್‌, ವಸಂತಕುಮಾರ್‌, ಗ್ರಾಮದ ಮುಖಂಡರಾದ ನಾಗಭೂಷಣ, ಮಹಾದೇವಪ್ಪ, ಹೆಗ್ಡಾಳ್‌ ಜಯಣ್ಣ, ಕೊಟ್ರೇಶ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ