ಆ್ಯಪ್ನಗರ

ಬೆಳೆಹಾನಿ ಪ್ರದೇಶಕ್ಕೆ ಕೃಷಿ ಸಚಿವ ಭೇಟಿ

ತಾಲೂಕಿನ ಡಣಾನಯಕನಕೆರೆಗೆ ಮತ್ತು ದೇವಲಾಪುರ ಬೆಳೆ ಹಾನಿಯಾದ ಪ್ರದೇಶಗಳಿಗೆ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ್‌ ರೆಡ್ಡಿ ಗುರುವಾರ ಸಂಜೆ ಭೇಟಿ ಪರಿಶೀಲನೆ ನಡೆಸಿದರು.

Vijaya Karnataka 18 Aug 2018, 5:00 am
ಹೊಸೆಪೇಟೆ : ತಾಲೂಕಿನ ಡಣಾನಯಕನಕೆರೆಗೆ ಮತ್ತು ದೇವಲಾಪುರ ಬೆಳೆ ಹಾನಿಯಾದ ಪ್ರದೇಶಗಳಿಗೆ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ್‌ ರೆಡ್ಡಿ ಗುರುವಾರ ಸಂಜೆ ಭೇಟಿ ಪರಿಶೀಲನೆ ನಡೆಸಿದರು.
Vijaya Karnataka Web BLR-BLR16HPT-09


ದೇವಲಾಪುರ ಗ್ರಾಮದ ತಿರುಕಮ್ಮ ಹೊಲಕ್ಕೆ ಭೇಟಿ ಕೊಟ್ಟು, ಈಗಾಗಲೇ ಮಕ್ಕೆಜೋಳ ಬೆಳೆ ಒಣಗಿ ಹೋಗಿದೆ. ಹಾಗಾಗಿ ಬರ ನಿರೋಧಕ ಬೆಳೆಯಿರಿ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಿರುಕಮ್ಮ, ಹಾಕಿದ ಬಂಡವಾಳ ಬರುತ್ತಿಲ್ಲ. ತುಂಬಾ ಕಷ್ಟ ಪರಿಸ್ಥಿತಿ ಎದುರಾಗಿದೆ ಅಳಲು ತೋಡಿಕೊಂಡರು. ಬಳಿಕ ಸಚಿವರು ದೇವಲಾಪುರ, ನಂದಿಬಂಡೆ ಪ್ರದೇಶದ ಚೆಕ್‌ ಡ್ಯಾಂ, ಕೃಷಿಹೊಂಡಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಹುಚ್ಚವ್ವನಹಳ್ಳಿ) ಬಣದ ರೈತರು ಕೃಷಿ ಸಚಿವರಿಗೆ, ನಾಶವಾದ ಬೆಳೆಗೆ ಪರಿಹಾರ ನೀಡುವುದು ಹಾಗೂ ಜಲಾಶಯದ ಹಿನ್ನೀರಿನಿಂದ ಜಂಬಯ್ಯಕೆರೆಯನ್ನು ತುಂಬಿಸಬೇಕು ಎಂದು ಮನವಿ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ ಭೇಟಿ ಕೊಟ್ಟ ಪ್ರದೇಶದಲ್ಲಿ 100 ರಷ್ಟು ಭಾಗದಲ್ಲಿ 10% ಬೆಳೆ ಬರುವುದು ಕಷ್ಟಕರವಾಗಿದೆ. ಅಂತಹ ಕಡೆ ಪುನಃ ಬಿತ್ತನೆಗಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ, ರೈತರಿಗೆ ಮರು ಬಿತ್ತನೆಗಾಗಿ ಬೀಜಗಳನ್ನು ಉಚಿತವಾಗಿ ನೀಡುವ ಕುರಿತು ಸರಕಾರದೊಂದಿಗೆ ಚರ್ಚಿಸಲಾಗುವುದು' ಎಂದು ತಿಳಿಸಿದರು.

400 ಕೋಟಿ ರೂ.ಯೋಜನೆ: ಈ ಬಾರಿ ಜಲಾಶಯದಿಂದ ಸಾಕಷ್ಟು ಪ್ರಮಾಣದ ನೀರು ಹರಿದು ಹೋಗಿದೆ. ನೀರು ವ್ಯರ್ಥ ಪೋಲಾಗುವುದನ್ನು ತಡೆಯಲು, ಕೂಡ್ಲಿಗಿ ಮತ್ತು ಹೊಸಪೇಟೆ ತಾಲೂಕಿನ ಕೆರೆಗಳನ್ನು ತುಂಬಿಸುವುದಕ್ಕೆ ಈಗಾಗಲೇ 400 ಕೋಟಿ ರೂ.ವೆಚ್ಚ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಮೊಳಕಾಲ್ಮೂರು, ಹೊಸಪೇಟೆ, ಕೂಡ್ಲಿಗಿ ಭಾಗಗಳಿಗೆ ಜಲಾಶಯದಿಂದ ಎರಡು ಟಿಎಂಸಿ ಒದಗಿಸಿದರೆ, ರೈತರ ಬಾಳು ಹಸನವಾಗಲಿದೆ. ಅಲ್ಲದೇ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಹೆಚ್ಚಲಿದೆ ಎಂದು ಹೇಳಿದರು. ಸಚಿವರು ಅವಸರವಸರವಾಗಿ ನಾನಾ ಪ್ರದೇಶಗಳಿಗೆ ಭೇಟಿ ನೀಡಿದರು. ಸಚಿವರ ವೇಗಕ್ಕೆ ಅಧಿಕಾರಿಗಳು ಓಡುವಂತಾಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದೀನಾ ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ಎಂ.ಎಸ್‌.ದಿವಾಕರ್‌, ಕೃಷಿ ಉಪ ನಿರ್ದೇಶಕರಾದ ಸಿದ್ದೇಶ, ಎಸ್‌.ಎಸ್‌.ಪಾಟೀಲ್‌, ಸಹಾಯಕ ಕೃಷಿ ನಿರ್ದೇಶಕ ಕೆ.ವಾಮದೇವ, ಸಹಾಯಕ ಕೃಷಿ ಅಧಿಕಾರಿಗಳಾದ ಸಿ.ಸತೀಶ್‌, ಕರಿಯಪ್ಪ, ಮಂಜುಳಾ, ಬಸುರೆಡ್ಡಿ, ಮುಖಂಡರಾದ ಕುರಿ ಶಿವಮೂರ್ತಿ, ಬಸವರಾಜ ಇನ್ನಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ