ಆ್ಯಪ್ನಗರ

ಕೈಕೊಟ್ಟ ಮೈಕ್ ಕೆಳಗೆ ಎಸೆದು ಬಿಎಸ್‌ವೈ ಆಕ್ರೋಶ

ಇಲ್ಲಿನ ಕಮ್ಮವಾರಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವಾಗ ಮೈಕ್ ಕೈಕೊಟ್ಟಿದ್ದರಿಂದ ಸಿಟ್ಟಿಗೆದ್ದ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಮೈಕ್ ಅನ್ನು ಸಮೀಪದಲ್ಲಿದ್ದ ಟೇಬಲ್ ಮೇಲೆ ಎಸೆದು, ಆಯೋಜಕರ ವಿರುದ್ಧ ಸಿಟ್ಟು ಹೊರಹಾಕಿದರು.

Vijaya Karnataka 8 May 2018, 5:00 am
ಸಿರುಗುಪ್ಪ (ಬಳ್ಳಾರಿ): ಇಲ್ಲಿನ ಕಮ್ಮವಾರಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವಾಗ ಮೈಕ್ ಕೈಕೊಟ್ಟಿದ್ದರಿಂದ ಸಿಟ್ಟಿಗೆದ್ದ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಮೈಕ್ ಅನ್ನು ಸಮೀಪದಲ್ಲಿದ್ದ ಟೇಬಲ್ ಮೇಲೆ ಎಸೆದು, ಆಯೋಜಕರ ವಿರುದ್ಧ ಸಿಟ್ಟು ಹೊರಹಾಕಿದರು.
Vijaya Karnataka Web BLR-BLY7SGP11


ಮೈಕ್ ಕಿರಿಕಿರಿಯಿಂದ ಭಾಷಣ ಸರಿಯಾಗಿ ಕೇಳಿಸಿಕೊಳ್ಳಲಾಗದ ಜನರು, ಭಾರಿ ಗದ್ದಲ ಎಬ್ಬಿಸಿದರು. ಈ ವೇಳೇ ಮತ್ತಷ್ಟು ಸಿಟ್ಟಾದ ಯಡಿಯೂರಪ್ಪ ಅವರು, ‘‘ನೀವು ಸುಮ್ಮನೆ ಇದ್ದರೆ ಮಾತ್ರ ಮಾತಾಡ್ತೀನಿ. ಇಲ್ಲ ಅಂದ್ರೆ ವಾಪಸ್ ಹೋಗಿಬಿಡ್ತೀನಿ’’ ಎಂದು ಎಚ್ಚರಿಸಿದರು.

ಈ ವೇಳೆ ಮಾತನಾಡಿದ ಅವರು, ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿರುವ ರೈತರ 1ಲಕ್ಷ ರೂ.ವರೆಗಿನ ಸಾಲವನ್ನು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ತೀರಿಸಲಾಗುವುದು. ತುಂಗಭದ್ರಾ ಹಾಗೂ ಕೃಷ್ಣಾ ನದಿಗಳನ್ನು ಜೋಡಿಸಲಾಗುವುದು. ಮೇ 17ರಂದು ತಾವು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವೆ’’ ಎಂದು ಪುನರುಚ್ಛರಿಸಿದರು.

ಈ ಸಂದರ್ಭದಲ್ಲಿ ಸಂಸದರಾದ ಬಿ.ಶ್ರೀರಾಮುಲು, ಕರಡಿ ಸಂಗಣ್ಣ, ಬಿಜೆಪಿ ಅಭ್ಯರ್ಥಿ ಎಂ.ಎಸ್.ಸೋಮಲಿಂಗಪ್ಪ ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ