ಆ್ಯಪ್ನಗರ

ಗಣಿ ಗಡಿ ಗುರುತು: ಮುಂದುವರಿದ ಡಿಜಿಪಿಎಸ್‌ ಸರ್ವೆ

ಕರ್ನಾಟಕ-ಆಂಧ್ರಪ್ರದೇಶದ ಗಣಿ ಗಡಿ ಗುರುತು ಸರ್ವೆಗೆ ಸರ್ವೆ ಆಫ್‌ ಇಂಡಿಯಾ (ಎಸ್‌ಒಐ)ದ ಡೈರೆಕ್ಟರ್‌ ಜನರಲ್‌ ಪವನ್‌ ಕುಮಾರ್‌ ಪಾಂಡೆ ನೇತೃತ್ವದ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ, ಬುಧವಾರವೂ ಡಿಫರೆನ್ಸಿಯಲ್‌ ಗ್ಲೋಬಲ್‌ ಪೊಜಿಷನಿಂಗ್‌ ಸಿಸ್ಟ್ಸ್‌ಂ (ಡಿಜಿಪಿಎಸ್‌) ಸರ್ವೆ ಮುಂದುವರಿಸಿತು.

Vijaya Karnataka 31 May 2018, 5:00 am
ಬಳ್ಳಾರಿ : ಕರ್ನಾಟಕ-ಆಂಧ್ರಪ್ರದೇಶದ ಗಣಿ ಗಡಿ ಗುರುತು ಸರ್ವೆಗೆ ಸರ್ವೆ ಆಫ್‌ ಇಂಡಿಯಾ (ಎಸ್‌ಒಐ)ದ ಡೈರೆಕ್ಟರ್‌ ಜನರಲ್‌ ಪವನ್‌ ಕುಮಾರ್‌ ಪಾಂಡೆ ನೇತೃತ್ವದ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ, ಬುಧವಾರವೂ ಡಿಫರೆನ್ಸಿಯಲ್‌ ಗ್ಲೋಬಲ್‌ ಪೊಜಿಷನಿಂಗ್‌ ಸಿಸ್ಟ್ಸ್‌ಂ (ಡಿಜಿಪಿಎಸ್‌) ಸರ್ವೆ ಮುಂದುವರಿಸಿತು.
Vijaya Karnataka Web mine border identity continued dgps survey
ಗಣಿ ಗಡಿ ಗುರುತು: ಮುಂದುವರಿದ ಡಿಜಿಪಿಎಸ್‌ ಸರ್ವೆ


ಬೆಳಿಗ್ಗೆ 8ರಿಂದಲೇ ಅಂತಾರಾಜ್ಯ ಗಡಿಗೆ ತೆರಳಿದ ಈ ತಂಡಗಳು, ರಾಜ್ಯದ ಗಡಿಗೆ ಹೊಂದಿಕೊಂಡಿರುವ ಸಿದ್ದಾಪುರ, ತುಮಟಿ, ಹಲಕುಂದಿ, ಓಎಂಸಿ ಗಣಿ ಪ್ರದೇಶಗಳ ಸುಮಾರು 10ಕ್ಕೂ ಹೆಚ್ಚು ಪಾಯಿಂಟ್‌ಗಳಲ್ಲಿ ಡಿಜಿಪಿಎಸ್‌ ಸರ್ವೆ ನಡೆಸಿದವು. ಈ ಸಂದರ್ಭದಲ್ಲಿ ಸರ್ವೆ ಸೆಟ್ಲ್‌ಮೆಂಟ್‌ ಕಮಿಷನರ್‌ ಮನೀಷ್‌ ಮೌದ್ಗಿಲ್‌, ಅರಣ್ಯ ಇಲಾಖೆಯ ಸಿಸಿಎಫ್‌ ಬಿಸ್ವಜಿತ್‌ ಮಿಶ್ರಾ ಸೇರಿ 30ಕ್ಕೂ ಹೆಚ್ಚು ಅಧಿಕಾರಿಗಳು ಈ ಸರ್ವೆ ಕಾರ್ಯಾಚರಣೆಯಲ್ಲಿ ಇದ್ದಾರೆ. ಮುಂದಿನ 2-3 ದಿನಗಳವರೆಗೆ ಸರ್ವೆ ಮುಂದುವರಿಯಲಿದೆ.

ಮೊದಲ ಹಂತದಲ್ಲಿ ವಿವಾದಿತವಲ್ಲದ ಹಾಗೂ ನಿಖರ ಗುರುತು ಹೊಂದಿರುವ ಪ್ರದೇಶದಲ್ಲಿ ಈ ತಂಡಗಳು ಸರ್ವೆ ನಡೆಸಲಿದ್ದು, ನಂತರ ಗಡಿ ಧ್ವಂಸವಾಗಿರುವ ಪ್ರದೇಶಕ್ಕೆ ತೆರಳುವ ಸಾಧ್ಯತೆ ಇದೆ. ಬುಧವಾರ ಹಿಂದ್‌ ಟ್ರೇಡರ್ಸ್‌ ಸೇರಿ ಓಎಂಸಿ ಗಣಿ ಪ್ರದೇಶಕ್ಕೆ ಈ ತಂಡಗಳು ಭೇಟಿನೀಡಿದ್ದವು. ಕರ್ನಾಟಕ-ಆಂಧ್ರಪ್ರದೇಶ ರಾಜ್ಯಗಳ ಅರಣ್ಯ, ಕಂದಾಯ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಸರ್ವೆಗೆ ಕೈಜೋಡಿಸಿದ್ದಾರೆ. ಮಧ್ಯಾಹ್ನ 1.30ರವರೆಗೆ ಸರ್ವೆ ನಡೆಸಿದ ಅಧಿಕಾರಿಗಳು, ನಂತರ ಬಳ್ಳಾರಿಗೆ ಮರಳಿದರು. ನಗರದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆನಡೆಸಿದರು. ಬಳ್ಳಾರಿ ಡಿಎಫ್‌ಒ ರಮೇಶ್‌, ಅನಂತಪುರ ಡಿಎಫ್‌ಒ ಚಂದ್ರಶೇಖರ್‌ ಸೇರಿ ಎರಡು ರಾಜ್ಯಗಳ ನಾನಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ