ಆ್ಯಪ್ನಗರ

ಬಳ್ಳಾರಿ-ವಿಜಯನಗರ ಅಣ್ಣ ತಮ್ಮಂದಿರಂತೆ, ಸೋಮಶೇಖರ ರೆಡ್ಡಿಯವರ ಆಶೀರ್ವಾದವಿದೆ: ಆನಂದ್‌ ಸಿಂಗ್‌

​​ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆನಂದ್‌ ಸಿಂಗ್‌, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ತೆರಳುತ್ತಿರುವುದು ಸಚಿವ ಸಂಪುಟ ವಿಸ್ತರಣೆಗಾಗಿ ಅಲ್ಲ. ಬದಲಾಗಿ ರಾಜ್ಯದ ಅನುದಾನ, ಮಳೆ ಹಾನಿ ಬಗ್ಗೆ ಚರ್ಚೆ ನಡೆಸಲು ಹೋಗುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

Vijaya Karnataka Web 17 Sep 2020, 12:00 pm
ಬಳ್ಳಾರಿ: ವಿಜಯನಗರ ಪ್ರತ್ಯೇಕ ಜಿಲ್ಲೆ ವಿಚಾರವಾಗಿ, ಸೋಮಶೇಖರ್ ರೆಡ್ಡಿ ಅಣ್ಣನವರು ನಮಗೆ ಆಶಿರ್ವಾದ ನೀಡಿದ್ದಾರೆ. ನಾವು ಅಣ್ಣ ತಮ್ಮಂದಿರಂತೆ ಇದೀವಿ. ಅಣ್ಣನ ಎದುರಿಗೆ ಹೋಗಲ್ಲ. ಮುಂದೆ ಒಂದಲ್ಲ ಒಂದು ದಿನ ಅವರ ಆಶೀರ್ವಾದದಿಂದ ಆಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
Vijaya Karnataka Web minister anand singh statement over bellary and vijayanagar
ಬಳ್ಳಾರಿ-ವಿಜಯನಗರ ಅಣ್ಣ ತಮ್ಮಂದಿರಂತೆ, ಸೋಮಶೇಖರ ರೆಡ್ಡಿಯವರ ಆಶೀರ್ವಾದವಿದೆ: ಆನಂದ್‌ ಸಿಂಗ್‌


ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆನಂದ್‌ ಸಿಂಗ್‌, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ತೆರಳುತ್ತಿರುವುದು ಸಚಿವ ಸಂಪುಟ ವಿಸ್ತರಣೆಗಾಗಿ ಅಲ್ಲ. ಬದಲಾಗಿ ರಾಜ್ಯದ ಅನುದಾನ, ಮಳೆ ಹಾನಿ ಬಗ್ಗೆ ಚರ್ಚೆ ನಡೆಸಲು ಹೋಗುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನನಗೆ ಕೊಟ್ಟಿರುವ ಅರಣ್ಯ ಖಾತೆ ಉತ್ತಮವಾದುದೆ ಆಗಿದೆ. ರಾಜ್ಯದ 13 ಸರ್ಕಲ್‌ ನ ಎಲ್ಲಾ ಅಧಿಕಾರಿಗಳಿಗೆ ಗಾಂಜಾ ಬೆಳೆದದ್ದು ಕಂಡು ಬಂದರೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಆದರೆ ಇದುವರೆಗೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದರು. ಕೃಷಿ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ಮೂರು ತಿಂಗಳಿಗೆ ಚರ್ಚೆ ನಡೆಸಲಾಗುವುದು ಎಂದು ಆನಂದ್‌ ಸಿಂಗ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ