ಆ್ಯಪ್ನಗರ

ಜಿಂದಾಲ್‌ ಸೀಲ್‌ಡೌನ್‌ ಸದ್ಯಕ್ಕೆ ಕಷ್ಟ: ಸಚಿವ ಆನಂದ್‌ ಸಿಂಗ್‌

ಬಳ್ಳಾರಿಯ ಜಿಂದಾಲ್‌ ಕಾರ್ಖಾನೆಯಲ್ಲಿ ಉಂಟಾಗಿರುವ ಕೊರೊನಾ ಸ್ಪೋಟಕ್ಕೆ ಸಂಬಂಧಪಟ್ಟಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಸಂಪೂರ್ಣವಾಗಿ ಜಿಂದಾಲ್‌ ಬಂದ್‌ ಮಾಡುವುದು ಸದ್ಯಕ್ಕೆ ಕಷ್ಟ ಎಂದಿದ್ದಾರೆ.

Vijaya Karnataka Web 24 Jun 2020, 2:02 pm
ಬಳ್ಳಾರಿ: ಜಿಲ್ಲೆಯಲ್ಲಿ ಬಹಳಷ್ಟು ವೇಗವಾಗಿ ಕೊರೊನಾ ಹರಡುತ್ತಿದೆ‌. ಎರಡು ದಿನಗಳಿಂದ ವೇಗ ಕಡಿಮೆಯಾದರೂ ಪಾಸಿಟಿವ್ ಇದೆ ಎಂದು ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ಜಿಲ್ಲೆಯಲ್ಲಿ ಒಟ್ಟು 509 ಪಾಸಿಟಿವ್ ಕೇಸ್‌ಗಳಿವೆ ಇವೆ. ಕೊರೊನಾ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ‌ ಎಂದು ತಿಳಿಸಿದ್ದಾರೆ.
Vijaya Karnataka Web 70049641


ಅಲ್ಲದೇ ಇಂದು ಜಿಂದಾಲ್ ಸಂಸ್ಥೆಯವರು ಮತ್ತು ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜಾವೇದ್ ಅಖ್ತರ್‌ ಜೊತೆ ಅವರು ಸಭೆ ನಡೆಸಿದ್ದೇನೆ. ಅವರೂ ಕೂಡ ಕೆಲ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ತಾಂತ್ರಿಕ ಅಂಶಗಳನ್ನು ಚರ್ಚಿಸಲಾಗಿದೆ. ನಾಲ್ಕು ಸಾವಿರ ರ್ಯಾಪಿಡ್ ಕಿಟ್ ಗಳನ್ನು ಖರೀದಿಸಲು ಸಲಹೆ ನೀಡಲಾಗಿದೆ. ಜಿಂದಾಲ್ ಹೊರತು ಪಡಿಸಿ 213 ಪ್ರಕರಣಗಳಿವೆ. ಜಿಂದಾಲ್‌ನದ್ದು 296 ಕೇಸ್ ಇವೆ. 1285 ಪ್ರಾಥಮಿಕ ಸಂಪರ್ಕ ಇದೆ ಎಂದು ತಿಳಿದುಬಂದಿದೆ. ಜಿಂದಾಲ್ ನಲ್ಲಿ ಶೇ. 15 ಸೋಂಕು ಹರಡುತ್ತಿದೆ. ಅಲ್ಲಿ ವ್ಯವಸ್ಥೆ ಹದಗೆಟ್ಟಿದ್ದು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದ ಮಾಹಿತಿ ನೀಡಿದರು.
ಜಿಂದಾಲ್ ಲಾಕ್ ಡೌನ್ ಕಷ್ಟ!
ಭಾರತ ಸರಕಾರದ ಗೈಡ್ಲೈನ್ಸ್ ಪ್ರಕಾರ ಜಿಂದಾಲ್ ಲಾಕ್ ಡೌನ್ ಕಷ್ಟ. ಒಂದು ವೇಳೆ ಸರಕಾರ ಮತ್ತು ಆರೋಗ್ಯ ಇಲಾಖೆಯ ನಿಯಮಗಳು ಪಾಲನೆ ಮಾಡಿಲ್ಲ ಅಂದ್ರೆ ಖಂಡಿತ ಕ್ರಮಕೈಗೊಳ್ಳ ಬೇಕಾಗುತ್ತದೆ. ಜಿಂದಾಲ್‌ನಲ್ಲಿ ಸಫಂಕು ಹೆಚ್ಚಾಗದಂತೆ ನೋಡಿಕೊಳ್ಳಲು ಅವರಿಗೂ ಸೂಚನೆ ನೀಡಲಾಗಿದೆ‌. ಮಾನವನ ಪ್ರಾಣದ ಜತೆಗೆ ಚೆಲ್ಲಾಟ ಆಡಬಾರದೆಂದು ಎಚ್ಚರಿಕೆ ನೀಡಿದ್ದೇವೆ ಎಂದು ಆನಂದ್‌ ಸಿಂಗ್ ತಿಳಿಸಿದ್ದಾರೆ.

"ದೇಶದಲ್ಲಿ ಕೊರೊನಾ ಮಾತ್ರ ಹೆಚ್ಚಾಗ್ತಿಲ್ಲ": ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಕೇಂದ್ರದ ವಿರುದ್ಧ ರಾಹುಲ್‌ ಕಿಡಿ

ಇನ್ನು ಈ ವಿಚಾರಕ್ಕೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕ್ಕೆ ಸಹಕಾರ ಕೊಡುತ್ತೇವೆ ಎಂದು ಜಿಂದಾಲ್ ಸಂಸ್ಥೆಯ ಎಂಡಿ. ವಿನೋದ್ ನಾವೇಲ್ ಸಭೆಯಲ್ಲಿ ತಿಳಿಸಿದ್ದಾರೆ ಎಂದರು. ಜಿಂದಾಲ್ ನಲ್ಲಿ 1244 ಸ್ಯಾಂಪಲ್ಸ್ ಕಲೆಕ್ಟ್ ಮಾಡಿದ್ದಾರೆ. ಇದರಲ್ಲಿ 296 ಪಾಸಿಟಿವ್ ಪತ್ತೆಯಾಗಿದ್ದು, ಇದರಲ್ಲಿ 223 ಸಕ್ರಿಯವಾಗಿದೆ. 73 ಕೇಸ್ ಗಳು ಬಿಡುಗಡೆಯಾಗಿದ್ದಾರೆ. ಪ್ರೈಮರಿ 1285, ಸೆಕೆಂಡರಿ 482 ಕಾಂಟಾಕ್ಟ್ ಹೊಂದಿದ್ದಾರೆ. 99 ಕಂಟೋನ್ಮೆಂಟ್ ಝೋನ್ ಇವೆ. ಜಿಂದಾಲ್ ನ ಒಬ್ಬ ಉದ್ಯೋಗಿ ಬೆಂಗಳೂರಿನಲ್ಲಿ ಸಾವನಪ್ಪಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ 7 ಕೊರೊನಾದಿಂದ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ