ಆ್ಯಪ್ನಗರ

ಪಶುವೈದ್ಯರ ನೇಮಕಕ್ಕೆ ಚಾಲನೆ: ಸಚಿವ ನಾಡಗೌಡ

ನಾನಾ ಇಲಾಖೆಗಳಿಗೆ ನಿಯೋಜನೆಗೊಂಡ ಸಿಬ್ಬಂದಿಯನ್ನು ಪಶು ಸಂಗೋಪನೆ ಇಲಾಖೆಗೆ ಮರಳಿ ಕರೆಯಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Vijaya Karnataka 20 Jun 2018, 12:00 am
ಸಿರುಗುಪ್ಪ (ಬಳ್ಳಾರಿ): ನಾನಾ ಇಲಾಖೆಗಳಿಗೆ ನಿಯೋಜನೆಗೊಂಡ ಸಿಬ್ಬಂದಿಯನ್ನು ಪಶು ಸಂಗೋಪನೆ ಇಲಾಖೆಗೆ ಮರಳಿ ಕರೆಯಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೈ.ಕ. ಭಾಗದಲ್ಲಿ ಖಾಲಿಯಿರುವ 120 ಪಶುವೈದ್ಯಾಧಿಕಾರಿಗಳ ನೇಮಕಕ್ಕೆ ಚಾಲನೆ ನೀಡಲಾಗಿದೆ ಎಂದು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
Vijaya Karnataka Web minister for animal husbandry nadgowda
ಪಶುವೈದ್ಯರ ನೇಮಕಕ್ಕೆ ಚಾಲನೆ: ಸಚಿವ ನಾಡಗೌಡ


ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಮೀನು ಮರಿ ಹಾಗೂ ಮೀನು ಸಾಕಣೆಗೆ ಸಹಾಯಧನ ನೀಡಲಾಗುವುದು. ರಾಜ್ಯದಲ್ಲಿ 2 ಮೀನು ಮಾರುಕಟ್ಟೆಗಳನ್ನು ಆರಂಭಿಸಲು ಯೋಜಿಸಲಾಗಿದೆ. ರಾಜ್ಯದ ಕೆಲವೆಡೆ ಕುರಿ ಮಾರುಕಟ್ಟೆ ಆರಂಭಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಮೊದಲಿಗೆ ಎಪಿಎಂಸಿಗಳಲ್ಲಿ ಲಭ್ಯವಿರುವ ಸ್ಥಳ ಪರಿಶೀಲಿಸಲಾಗುವುದು. ಅಲ್ಲಿ ಜಾಗ ದೊರೆಯದಿದ್ದರೆ, ಸರಕಾರಿ ಜಮೀನು ಪಡೆದು ಕುರಿ ಮಾರುಕಟ್ಟೆ ಸ್ಥಾಪಿಸಲಾಗುವುದು’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ