ಬಳ್ಳಾರಿ: ಕಾಂಗ್ರೆಸ್ ಇಡೀ ದೇಶದಲ್ಲಿ ಧೂಳಿ ಪಟ ಆಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಹೋಗ್ತಾರೋ ಅಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಉಪಚುನಾವಣೆ ಯಲ್ಲಿ ಯಾವ ಜೋಡೆತ್ತು ಕೆಲಸ ಮಾಡಲ್ಲ. ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಸಚಿವ ಶ್ರೀರಾಮುಲು ಹೇಳಿದರು. ವಿಜಯೇಂದ್ರ ಬಂದ್ರೇ ಹಣ ಎಂಬ ಸಿದ್ದು ಹೇಳಿಕೆಗೆ ರಾಮುಲು ತಿರುಗೇಟು ನೀಡಿದ್ದು, ಸುಳ್ಳು ಅಂದ್ರೆ ಕಾಂಗ್ರೆಸ್, ಸತ್ಯ ಅಂದ್ರೆ ಬಿಜೆಪಿ ಜನ ಸತ್ಯವನ್ನ ಆಯ್ಕೆ ಮಾಡ್ತಾರೆ. ವಿಜಯೇಂದ್ರ ಅವರದು ತಪ್ಪೇನಿದೆ ರೀ? ಅವರ ತಂದೆ ರಾಜಕಾರಣದಲ್ಲಿರೋದ್ರಿಂದ ತಂದೆಗೆ ಮಗ ಸಹಾಯ ಮಾಡೊದು ತಪ್ಪಾ?. ಈ ಆರೋಪ ಯಾರಿಗೂ ಶೋಭೆ ತರಲ್ಲ. ಶಿರಾ, ರಾಜರಾಜೇಶ್ವರಿಯಲ್ಲಿ ವಿಜಯೇಂದ್ರ ಗೆದ್ದರು.
ಹೀಗಾಗಿ ದಿಕ್ಕು ತಪ್ಪಿಸಲು ಈ ರೀತಿ ಆರೋಪ ಮಾಡ್ತಾ ಇದ್ದಾರೆ. ಸಿಎಂ ಮಗ ಎನ್ನುವ ಕಾರಣಕ್ಕೆ ನಮಗಿಂತ ಜಾಸ್ತಿ ಮರ್ಯಾದೆ ಸಿಗಬಹುದು. ಅದ್ರಲ್ಲಿ ತಪ್ಪೇನು? ಸಿಎಂ ಮಗ ಅಂದ್ರೆ ಅಷ್ಟಾದ್ರು ಡಿಗ್ನಿಟಿ ಇರಬೇಕಲ್ವಾ ಎಂದು ರಾಮುಲು ತಿಳಿಸಿದರು. ಉಪ ಚುನಾವಣೆ ಕ್ಷೇತ್ರಗಳಲ್ಲಿ ಬಂಡಾಯ ಶಮನ ಮಾಡುವೆ. ಬಂಡಾಯ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುವಂತೆ ಮಾಡುತ್ತೇನೆ. ಈ ಕುರಿತು ಕಟೀಲ್ ಅವರ ಜೊತೆಗೆ ಮಾತನಾಡುವೆ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ, ವಾರ್ಡ್ಗಳ ಸಂಖ್ಯೆ 39ಕ್ಕೆ ಏರಿಕೆ
ರಮೇಶ್ ಜಾರಕಿಹೊಳಿ ಪ್ರಕರಣ
ಇನ್ನು ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಎಸ್.ಐಟಿ ತನ್ನ ಕೆಲಸ ಮಾಡುತ್ತಿದೆ. ಯಾರು ಇಲ್ಲಿ ಪ್ರಭಾವ ಭೀರಿಲ್ಲ. ತನಿಖೆ ಬಳಿಕ ಯಾರು ಸುಳ್ಳು ಯಾರು ಸತ್ಯ ಎಂದು ಗೊತ್ತಾಗಲಿದೆ. ಉಪಚುನಾವಣೆ ಮೇಲೆ ಸಿಡಿ ಪ್ರಕರಣ ಪರಿಣಾಮ ಬೀರಲ್ಲ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಹೀಗಾಗಿ ದಿಕ್ಕು ತಪ್ಪಿಸಲು ಈ ರೀತಿ ಆರೋಪ ಮಾಡ್ತಾ ಇದ್ದಾರೆ. ಸಿಎಂ ಮಗ ಎನ್ನುವ ಕಾರಣಕ್ಕೆ ನಮಗಿಂತ ಜಾಸ್ತಿ ಮರ್ಯಾದೆ ಸಿಗಬಹುದು. ಅದ್ರಲ್ಲಿ ತಪ್ಪೇನು? ಸಿಎಂ ಮಗ ಅಂದ್ರೆ ಅಷ್ಟಾದ್ರು ಡಿಗ್ನಿಟಿ ಇರಬೇಕಲ್ವಾ ಎಂದು ರಾಮುಲು ತಿಳಿಸಿದರು. ಉಪ ಚುನಾವಣೆ ಕ್ಷೇತ್ರಗಳಲ್ಲಿ ಬಂಡಾಯ ಶಮನ ಮಾಡುವೆ. ಬಂಡಾಯ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುವಂತೆ ಮಾಡುತ್ತೇನೆ. ಈ ಕುರಿತು ಕಟೀಲ್ ಅವರ ಜೊತೆಗೆ ಮಾತನಾಡುವೆ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ, ವಾರ್ಡ್ಗಳ ಸಂಖ್ಯೆ 39ಕ್ಕೆ ಏರಿಕೆ
ರಮೇಶ್ ಜಾರಕಿಹೊಳಿ ಪ್ರಕರಣ
ಇನ್ನು ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಎಸ್.ಐಟಿ ತನ್ನ ಕೆಲಸ ಮಾಡುತ್ತಿದೆ. ಯಾರು ಇಲ್ಲಿ ಪ್ರಭಾವ ಭೀರಿಲ್ಲ. ತನಿಖೆ ಬಳಿಕ ಯಾರು ಸುಳ್ಳು ಯಾರು ಸತ್ಯ ಎಂದು ಗೊತ್ತಾಗಲಿದೆ. ಉಪಚುನಾವಣೆ ಮೇಲೆ ಸಿಡಿ ಪ್ರಕರಣ ಪರಿಣಾಮ ಬೀರಲ್ಲ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಸಚಿವ ಶ್ರೀರಾಮುಲು ಹೇಳಿದರು.