ತುಂಗಭದ್ರಾ ಜಲಾಶಯದಿಂದ ನೀರು ಹರಿವು: ಹಂಪಿ ಸ್ಮಾರಕ ಜಲಾವೃತ
ಮಳೆ ರುದ್ರ ನರ್ತನ ಇಡೀ ಕರ್ನಾಟಕದಲ್ಲಿ ಜೋರಾಗಿದೆ. ಹಲವಾರು ಜಿಲ್ಲೆಗಳು ನೂರಾರು ಗ್ರಾಮಗಳು ಮಳೆ ನೀರಲ್ಲಿ ತೊಪ್ಪೆಯಾಗಿದೆ. ಹಂಪಿಯಲ್ಲೂ ಕೂಡ ಮಳೆಯ ಅಬ್ಬರ ಹೆಚ್ಚಾಗಿದೆ.
Vijaya Karnataka Web 11 Aug 2019, 4:29 pm
ಬಳ್ಳಾರಿ: ಭಾರಿ ಮಳೆಯ ಕಾರಣ ಇಡೀ ಕರ್ನಾಟಕವೇ ಮುಳುಗಡೆಯಾಗಿವೆ. ಹಲವಾರು ಜಿಲ್ಲೆಗಳು ಮಳೆಯಿಂದ ತೊಪ್ಪೆಯಾಗಿದೆ. ಇದರಕ್ಕೆ ಪಾರಂಪರಿಕ ತಾಣ ಹಂಪಿ ಕೂಡ ಹೊರತಾಗಿಲ್ಲ.
ತುಂಗಭದ್ರಾ ಜಲಾಶಯದಿಂದ ನದಿಗೆ 3 ಲಕ್ಷ ಕ್ಯುಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ವಿಶ್ವಪರಂಪರೆ ಹಂಪಿಯ ಬಹುತೇಕ ಸ್ಮಾರಕಗಳು ಜಲಾವೃತವಾಗಿವೆ.
ಹಂಪಿಯ ಸಂಚಾರ ಪೊಲೀಸ್ ಠಾಣೆ ಮತ್ತು ವೃತ್ತ ನಿರೀಕ್ಷಕರ ಕಚೇರಿಗಳು ಜಲಾವೃತ್ತವಾಗಿದ್ದು, ಅವುಗಳನ್ನು ಜೈನಮಂಟಪಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ.
ಆ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಹಂಪಿಯ ಬರುವ ಪ್ರವಾಸಿಗರಿಗೆ ನದಿ ಹಾಗೂ ನೀರಿನತ್ತ ತೆರಳದಂತೆ ಮನವಿ ಮಾಡಲಾಗುತ್ತಿದೆ.
ತುಂಗಭದ್ರಾ ಜಲಾಶಯದಿಂದ ನದಿಗೆ 3 ಲಕ್ಷ ಕ್ಯುಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ವಿಶ್ವಪರಂಪರೆ ಹಂಪಿಯ ಬಹುತೇಕ ಸ್ಮಾರಕಗಳು ಜಲಾವೃತವಾಗಿವೆ.
ಹಂಪಿಯ ಸಂಚಾರ ಪೊಲೀಸ್ ಠಾಣೆ ಮತ್ತು ವೃತ್ತ ನಿರೀಕ್ಷಕರ ಕಚೇರಿಗಳು ಜಲಾವೃತ್ತವಾಗಿದ್ದು, ಅವುಗಳನ್ನು ಜೈನಮಂಟಪಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ.
ಆ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಹಂಪಿಯ ಬರುವ ಪ್ರವಾಸಿಗರಿಗೆ ನದಿ ಹಾಗೂ ನೀರಿನತ್ತ ತೆರಳದಂತೆ ಮನವಿ ಮಾಡಲಾಗುತ್ತಿದೆ.