ಆ್ಯಪ್ನಗರ

ನಾಗರ ಪಂಚಮಿ ಆಚರಣೆ : ನಾಗಪ್ಪ ಮೂರ್ತಿಗೆ ಹಾಲೆರೆದ ಭಕ್ತರು

ತಾಲೂಕಿನಲ್ಲಿ ನಾಗರ ಪಂಚಮಿಯನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆಯಿಂದ ಇಲ್ಲಿನ ಮಾರ್ಕಂಡೇಶ್ವರ ದೇವಸ್ಥಾನ ಹಾಗೂ ನಗರದಲ್ಲಿನ ಅರಳಿಕಟ್ಟೆಯಲ್ಲಿರುವ ನಾಗ ವಿಗ್ರಹಕ್ಕೆ ಜನರು ಕುಟುಂಬ ಸಮೇತವಾಗಿ ಬಂದು ಹಾಲೆರೆದರು.

Vijaya Karnataka 15 Aug 2018, 5:00 am
ಹೊಸಪೇಟೆ ; ತಾಲೂಕಿನಲ್ಲಿ ನಾಗರ ಪಂಚಮಿಯನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆಯಿಂದ ಇಲ್ಲಿನ ಮಾರ್ಕಂಡೇಶ್ವರ ದೇವಸ್ಥಾನ ಹಾಗೂ ನಗರದಲ್ಲಿನ ಅರಳಿಕಟ್ಟೆಯಲ್ಲಿರುವ ನಾಗ ವಿಗ್ರಹಕ್ಕೆ ಜನರು ಕುಟುಂಬ ಸಮೇತವಾಗಿ ಬಂದು ಹಾಲೆರೆದರು. ಬಳಿಕ ದೇವರಿಗೆ ಸಿಹಿ ಉಂಡೆಗಳನ್ನು ಸಮರ್ಪಿಸಿದರು. ಯುವಕರು ರಸ್ತೆಯಲ್ಲಿ ನಿಂಬೆ ಹಣ್ಣು ಎಸೆಯುವ ಆಟ ಆಡಿದರು. ಇನ್ನು ಕೆಲವರು ಮರದಲ್ಲಿ ಹಗ್ಗ ಕಟ್ಟಿ ಜೋಕಾಲಿ ಆಡಿದರು.
Vijaya Karnataka Web BLR-BLR14HPT-01


ನಾನಾ ಕಡೆ ಆಚರಣೆ: ಗಾದಿಗನೂರು, ಧರ್ಮಸಾಗರ, ಬೈಲುವದ್ದಿಗೇರಿ, ಕಾಕುಬಾಳು, ಸೀತಾರಾಮ ತಾಂಡಾ, ನಲ್ಲಾಪುರ, ಕೊಂಡನಾಯಕನ ಹಳ್ಳಿ, ಮಲಪನಗುಡಿ, ಕಡ್ಡಿರಾಂಪುರ ಮರಿಸ್ವಾಮಿಗಳ ಮಠ, ಆಂಜನೇಯ ದೇವಸ್ಥಾನ ಹಾಗೂ ಕಮಲಾಪುರದ ಸತ್ಯಮ್ಮ ದೇವಸ್ಥಾನ ಬಳಿಯ ನಾಗಪ್ಪ ವಿಗ್ರಹಕ್ಕೆ ಮಹಿಳೆಯರು ಹಾಲೆರೆದಿದ್ದು ಕಂಡುಬಂತು.

ವಿಶೇಷ ಪೂಜೆ: ತಾಲೂಕಿನ ಬುಕ್ಕಸಾಗರ ಏಳು ಹೆಡೆ ನಾಗಪ್ಪ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೇ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ನಾಗಪ್ಪ ವಿಗ್ರಹಕ್ಕೆ ಹಾಲೆರೆಯುವ ಅವಕಾಶ ಕಲ್ಪಿಸಲಾಗಿತ್ತು. ದೇವಸ್ಥಾನಕ್ಕೆ ಬಹಳಷ್ಟು ಭಕ್ತರು ಭೇಟಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ