ಆ್ಯಪ್ನಗರ

ನಾಗರಪಂಚಮಿ : ನಾಗಮೂರ್ತಿಗೆ ಹಾಲೆರೆದ ಮಹಿಳೆಯರು

ನಗರದ ನಾನಾ ದೇವಸ್ಥಾನದ ಆವರಣದಲ್ಲಿ ನಾಗಮೂರ್ತಿಗಳಿಗೆ ಮಂಗಳವಾರ ಬೆಳಗಿನ ಜಾವದಿಂದಲೇ ಮಹಿಳೆಯರು ಹಾಲೆರೆಯುವ ಮೂಲಕ ನಾಗರಪಂಚಮಿ ಆಚರಿಸಿದರು.

Vijaya Karnataka 15 Aug 2018, 5:00 am
ಸಿರುಗುಪ್ಪ : ನಗರದ ನಾನಾ ದೇವಸ್ಥಾನದ ಆವರಣದಲ್ಲಿ ನಾಗಮೂರ್ತಿಗಳಿಗೆ ಮಂಗಳವಾರ ಬೆಳಗಿನ ಜಾವದಿಂದಲೇ ಮಹಿಳೆಯರು ಹಾಲೆರೆಯುವ ಮೂಲಕ ನಾಗರಪಂಚಮಿ ಆಚರಿಸಿದರು. ಅಮೃತೇಶ್ವರ ದೇವಸ್ಥಾನದ ಆವರಣ, ಸಕಲ ದೇವತಾ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಜೆಸ್ಕಾಂ ಕಚೇರಿ ಆವರಣದ ಗಣೇಶ ದೇವಸ್ಥಾನ, ಶಂಭುಲಿಂಗೇಶ್ವರ ದೇವಸ್ಥಾನ, ಅಭಯಾಂಜನೆಯ ದೇವಸ್ಥಾನ, ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿರುವ ಹುತ್ತ ಹಾಗೂ ನಾಗರ ಕಲ್ಲುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಲಾಯಿತು.ಚಿಕ್ಕಮಕ್ಕಳು ಸಿಹಿ ಉಂಡೆಗಳನ್ನು ತಿಂದು ಹಾಲು ಹಾಕಿದ ಕೊಬ್ಬರಿ ಬಟ್ಟಲಿಗೆ ದಾರ ಕಟ್ಟಿ ಗಿರಗಿಟ್ಟಲೇ ಆಡಿದರೆ, ಗ್ರಾಮೀಣ ಭಾಗದಲ್ಲಿ ಮರಗಿಡಗಳಿಗೆ ಜೋಕಾಲಿ ಕಟ್ಟಿ ಮಕ್ಕಳು ಜೀಕಿದರು.
Vijaya Karnataka Web BLR-BLY14SGP3


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ