ಆ್ಯಪ್ನಗರ

‘ನಾರಾಯಣ ಗುರು ಸಮಾನತೆಗೆ ಶ್ರಮಿಸಿದ ಸಂತ’

ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿನ ಮೇಲು, ಕೀಳು ಭಾವನೆಯನ್ನು ತೊಡೆದು ಹಾಕಲು ಶ್ರಮಿಸಿದ ಸಂತ ಎಂದು ರಾಮಸಾಗರದ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷ ಕಿ ಡಾ.ಅಕ್ಕಮಹಾದೇವಿ ಹೇಳಿದರು.

Vijaya Karnataka 28 Aug 2018, 5:00 am
ಹೊಸಪೇಟೆ : ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿನ ಮೇಲು, ಕೀಳು ಭಾವನೆಯನ್ನು ತೊಡೆದು ಹಾಕಲು ಶ್ರಮಿಸಿದ ಸಂತ ಎಂದು ರಾಮಸಾಗರದ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷ ಕಿ ಡಾ.ಅಕ್ಕಮಹಾದೇವಿ ಹೇಳಿದರು.
Vijaya Karnataka Web narayana guru is a saint who worked for equality
‘ನಾರಾಯಣ ಗುರು ಸಮಾನತೆಗೆ ಶ್ರಮಿಸಿದ ಸಂತ’


ನಗರದ ಪತ್ರಿಕಾಭವನದಲ್ಲಿ ಸೋಮವಾರ ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆರ್ಯ ಈಡಿಗರ ಸಮುದಾಯ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೆ ಮೇಲ್ಜಾತಿಯವರಿಗೆ ಮಾತ್ರ ದೇವಸ್ಥಾನದಲ್ಲಿ ಪ್ರವೇಶವಿತ್ತು. ಇದನ್ನು ಹೋಗಲಾಡಿಸಲು 60 ದೇವಾಲಯಗಳನ್ನು ಸ್ಥಾಪನೆ ಮಾಡಿ, ಕೆಳವರ್ಗದವರಿಗೂ ನಾರಾಯಣ ಗುರುಗಳು ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡುತ್ತಾರೆ. ಸಮಾಜಕ್ಕೆ ಅಂಟಿಕೊಂಡಿದ್ದ ಜಾತಿಯ ಪೆಡಂಭೂತವನ್ನು ಹೋಗಲಾಡಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದರು. ಇದೇ ವೇಳೆಯಲ್ಲಿ ಕೊಡಗು ಮತ್ತು ಕೇರಳ ಸಂತ್ರಸ್ತರಿಗೆ ಆರ್ಯ ಈಡಿಗರ ಸಮುದಾಯದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಅವರು 50 ಸಾವಿರ ರೂ. ಹಾಗೂ ಕಮಲಾಪುರದ ರೇಣುಕಾ ಗ್ರೂಪ್‌ನ ಈ.ಚಂದ್ರಶೇಖರ್‌ 50 ಸಾವಿರ ರೂ. ಪರಿಹಾರದ ಚೆಕ್‌ ತಹಸೀಲ್ದಾರ್‌ ಎಚ್‌.ವಿಶ್ವನಾಥ ಅವರಿಗೆ ಸಲ್ಲಿಸಿದರು. ತಾ.ಪಂ.ಅಧ್ಯಕ್ಷೆ ಜೋಗದ ನೀಲಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಆರ್ಯ ಈಡಿಗ ಸೇವಾ ಟ್ರಸ್ಟ್‌ ಗೌರವ ಅಧ್ಯಕ್ಷ ವೆಂಕಟರಮಣ, ಅಧ್ಯಕ್ಷ ಕೆ.ರಾಘವೇಂದ್ರ, ಕ್ಷೇತ್ರ ಶಿಕ್ಷ ಣಾಧಿಕಾರಿ ಎಲ್‌.ಡಿ.ಜೋಶಿ, ಬಿಸಿಎಂ ಅಧಿಕಾರಿ ಎರ್ರಿಸ್ವಾಮಿ, ಇನ್ನಿತರರಿದ್ದರು. ನಿವೃತ್ತ ಕನ್ನಡ ಅಧ್ಯಾಪಕ ಮ.ಬ.ಸೋಮಣ್ಣ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ