ಆ್ಯಪ್ನಗರ

‘ಸರ್ವೆಯರ್‌ ನಿತ್ಯದ ಕೆಲಸ ತಿಳಿಯಲು ಹೊಸ ಆ್ಯಪ್‌’

ಸರ್ವೆಯರ್‌ಗಳು ಪ್ರತಿನಿತ್ಯ ತಾವು ನಿರ್ವಹಿಸಿದ ಕೆಲಸದ ಸಂಪೂರ್ಣ ವಿವರ ದಾಖಲಿಸುವ ಮತ್ತು ಅದನ್ನು ಮೇಲಧಿಕಾರಿಗಳು ಮೇಲ್ವಿಚಾರಣೆ ನಡೆಸಿ ಸೂಕ್ತ ಸೂಚನೆ ನೀಡುವ ಹಾಗೂ ಇನ್ನಿತರ ಅಗತ್ಯ ಮಾಹಿತಿ ಒಳಗೊಂಡ ಹೊಸ ಆ್ಯಪ್‌ನ್ನು ಭೂದಾಖಲೆಗಳ ಉಪನಿರ್ದೇಶಕ ಮಹಾಂತೇಶ ಸಿದ್ಧಪಡಿಸಿದ್ದು, ಅ.1ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.

Vijaya Karnataka 27 Sep 2018, 5:00 am
ಬಳ್ಳಾರಿ : ಸರ್ವೆಯರ್‌ಗಳು ಪ್ರತಿನಿತ್ಯ ತಾವು ನಿರ್ವಹಿಸಿದ ಕೆಲಸದ ಸಂಪೂರ್ಣ ವಿವರ ದಾಖಲಿಸುವ ಮತ್ತು ಅದನ್ನು ಮೇಲಧಿಕಾರಿಗಳು ಮೇಲ್ವಿಚಾರಣೆ ನಡೆಸಿ ಸೂಕ್ತ ಸೂಚನೆ ನೀಡುವ ಹಾಗೂ ಇನ್ನಿತರ ಅಗತ್ಯ ಮಾಹಿತಿ ಒಳಗೊಂಡ ಹೊಸ ಆ್ಯಪ್‌ನ್ನು ಭೂದಾಖಲೆಗಳ ಉಪನಿರ್ದೇಶಕ ಮಹಾಂತೇಶ ಸಿದ್ಧಪಡಿಸಿದ್ದು, ಅ.1ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.
Vijaya Karnataka Web BLR-25BLY07


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಭೂದಾಖಲೆಗಳ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಸರ್ವೆಯರ್‌ಗಳು ಪ್ರತಿದಿನ ಏನೇನೋ ಕೆಲಸ ಮಾಡಲಾಗುತ್ತಿದೆಯೋ ಅದನ್ನು ಸಂಜೆ ಮನೆಗೆ ತೆರಳುವ ಮುಂಚೆ ಈ ಆ್ಯಪ್‌ನಲ್ಲಿ ಅಪ್‌ಡೇಟ್‌ ಮಾಡಿ ತೆರಳಬೇಕು. ಪ್ರತಿಯೊಬ್ಬ ಸರ್ವೆಯರ್‌ಗಳಿಗೂ ಪ್ರತ್ಯೇಕ ಲಾಗಿನ್‌ ಐಡಿ ನೀಡಲಾಗುತ್ತದೆ. ಅದಕ್ಕೆ ಎರಡ್ಮೂರು ದಿನಗಳಲ್ಲಿ ಸೂಕ್ತ ಹೆಸರಿಟ್ಟು, ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ವಿವರಿಸಿದ ಅವರು, ಸರ್ವೆಯರ್‌ಗಳ ಕೆಲಸವನ್ನು ಮೇಲಧಿಕಾರಿಗಳು ಪ್ರತಿದಿನ ಮೇಲ್ವಿಚಾರಣೆ ಮಾಡಲಿದ್ದು, ನಿಗದಿಪಡಿಸಿದ ಗುರಿಗಿಂತ ಕಡಿಮೆ ಕೆಲಸ ಮಾಡಿದವರ ಬಗ್ಗೆ ಇದರಿಂದ ಗೊತ್ತಾಗಲಿದೆ. ಕ್ಷಿಪ್ರಗತಿ ಕೆಲಸ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಲು ಇದು ಅನುಕೂಲವಾಗಲಿದೆ ಎಂದು ವಿವರಿಸಿದರು.

9 ಸರ್ವೆಗಳ ವಿರುದ್ಧ ತನಿಖೆ ನೋಟಿಸ್‌: ಕಡ್ಡಾಯವಾಗಿ ಇದನ್ನು ಸರ್ವೆಯರ್‌ಗಳು ಅಳವಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ನಿರ್ಲಕ್ಷ ್ಯ ತೋರಬಾರದು ಎಂದು ಹೇಳಿದ ಅವರು, ಭೂ ದಾಖಲೆ ಇಲಾಖೆಯಲ್ಲಿ 9 ಸರ್ವೆಯರ್‌ಗಳ ಮೇಲೆ ಇಲಾಖಾವಾರು ತನಿಖೆಗೆ ಆದೇಶಿಸಿ ನೋಟಿಸ್‌ ನೀಡಲಾಗಿದ್ದು, ಅವರು ತಮಗೆ ನಿಗದಿಪಡಿಸಿದ ಗುರಿ ಸಾಧಿಸಿದರೆ ತನಿಖೆಯಿಂದ ಕೈಬಿಡಲಾಗುವುದು ಎಂದರು.

ಡೆಹರಾಡೂನ್‌ನಲ್ಲಿ ವಿಶೇಷ ತರಬೇತಿ: ಸರ್ವೆಯರ್‌ ಪ್ರಕರಣಗಳು, ವಿಲೇವಾರಿ ಪ್ರಕರಣಗಳು ಸೇರಿದಂತೆ ನಾನಾ ರೀತಿಯ ಭೂಮಾಪನ ಪ್ರಕರಣಗಳಲ್ಲಿ ನಿಗದಿಪಡಿಸಿದ ಗುರಿ ಸಾಧಿಸಿದ 10 ಸರ್ವೆಯರ್‌ಗಳಿಗೆ ಡೆಹರಾಡೂನ್‌ನಲ್ಲಿರುವ ಸರ್ವೆ ಜನರಲ್‌ ಆಫ್‌ ಇಂಡಿಯಾ ಕಚೇರಿಯಲ್ಲಿ ತರಬೇತಿ ಕೊಡಿಸಲಾಗುವುದು. 10 ಸರ್ವೆಯರ್‌ಗಳಿಗೆ ಲ್ಯಾಪ್‌ಟಾಪ್‌ ಬಹುಮಾನವಾಗಿ ನೀಡಲಾಗುವುದು ಎಂದರು.

ನಿಗದಿಪಡಿಸಿದ ಗುರಿ ಸಾಧಿಸಿ: ಸರ್ವೆಯರ್‌ಗಳು ತಮಗೆ ನಿಗದಿಪಡಿಸಿದ ಗುರಿ ಮುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಿರ್ಲಕ್ಷ ್ಯ ತೋರಿದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಭೂ ದಾಖಲೆಗಳಿಗೆ ಸಂಬಂಧಿಸಿದಂತೆ ನಾನಾ ವಿಷಯಗಳ ಕುರಿತು ದೀರ್ಘ ಚರ್ಚೆ ನಡೆಯಿತು. ಭೂದಾಖಲೆಗಳ ಉಪನಿರ್ದೇಶಕ ಮಹಾಂತೇಶ ಸೇರಿದಂತೆ ಸಹಾಯಕ ನಿರ್ದೇಶಕರು ಮತ್ತು 61ಸರ್ವೆಯರ್‌ಗಳು ಪಾಲ್ಗೊಂಡಿದ್ದರು. ನಿಗದಿತ ಗುರಿ ಸಾಧಿಸಿದ ಸರ್ವೆಯರ್‌ಗಳಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಲಾಯಿತು.

ಏನಿದು ಹೊಸ ಆ್ಯಪ್‌ ? ; ನೂತನವಾಗಿ ಸಿದ್ಧಪಡಿಸಿದ ಆ್ಯಪ್‌ನಲ್ಲಿ, ಸರ್ವೆಯರ್‌ಗಳು ದಿನ ಯಾವ್ಯಾವ ಕೆಲಸ ಮಾಡಿದ್ದೇವೆ ಎನ್ನುವ ವಿವರವನ್ನು ಕೆಲಸದ ಅವಧಿ ಮುಗಿಯುವ ವೇಳೆಗೆ ಅಪಡೇಟ್‌ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ಸರ್ವೆಯರ್‌ಗಳಿಂದ ಆ್ಯಪ್‌ನಲ್ಲಿ ಆಯಾ ದಿನದ ವಿವರ ಅಪ್‌ಡೇಟ್‌ ಆಗುವುದರಿಂದ ಮೇಲಧಿಕಾರಿಗಳಿಗೆ ಶೀಘ್ರ ಮಾಹಿತಿ ತಲುಪಲಿದೆ. ಸಕಾಲಕ್ಕೆ ಮೇಲ್ವಿಚಾರಣೆ ನಡೆಸಬಹುದಾಗಿದೆ. ಪ್ರತಿಯೊಬ್ಬ ಸರ್ವೆಯರ್‌ಗಳಿಗೂ ಪ್ರತ್ಯೇಕ ಲಾಗಿನ್‌ ಐಡಿ ನೀಡುವುದರಿಂದ ಮಾಹಿತಿ ಅಪ್‌ಡೇಟ್‌ ಸುಲಭವಾಗಲಿದೆ. ನಿಗದಿಪಡಿಸಿದ ಗುರಿಯನ್ನು ತಲುಪದ ಸಿಬ್ಬಂದಿ ಬಗ್ಗೆ ಮೇಲಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಯಲಿದ್ದು, ಪ್ರಕ್ರಿಯೆಗೆ ಚುರುಕು ಮೂಡಿಸಲು, ಶಿಸ್ತುಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.ಹೊಸ್‌ ಆ್ಯಪ್‌ಗೆ ಇನ್ನೂ ಹೆಸರಿಟ್ಟಿಲ್ಲ. ಭೂದಾಖಲೆಗಳ ಉಪನಿರ್ದೇಶಕ ಮಹಾಂತೇಶ ಇದನ್ನು ಸಿದ್ಧಪಡಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ