ಆ್ಯಪ್ನಗರ

ನೀರಾ ಮಾರಾಟ ಪ್ರಸ್ತಾವನೆ ಪರಿಶೀಲನೆ: ಸಚಿವ ಆರ್.ಬಿ.ತಿಮ್ಮಾಪುರ

ರಾಜ್ಯದಲ್ಲಿ ನೀರಾ ಮಾರಾಟದ ಪರವಾನಗಿ ಕುರಿತ ಪ್ರಸ್ತಾವನೆ ಪರಿಶೀಲನೆ ಹಂತದಲ್ಲಿದೆ ಎಂದು ಅಬಕಾರಿ ಇಲಾಖೆ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

Vijaya Karnataka 18 Oct 2017, 9:04 am
ಬಳ್ಳಾರಿ: ರಾಜ್ಯದಲ್ಲಿ ನೀರಾ ಮಾರಾಟದ ಪರವಾನಗಿ ಕುರಿತ ಪ್ರಸ್ತಾವನೆ ಪರಿಶೀಲನೆ ಹಂತದಲ್ಲಿದೆ ಎಂದು ಅಬಕಾರಿ ಇಲಾಖೆ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
Vijaya Karnataka Web niras sales proposal review minister rb timmampura
ನೀರಾ ಮಾರಾಟ ಪ್ರಸ್ತಾವನೆ ಪರಿಶೀಲನೆ: ಸಚಿವ ಆರ್.ಬಿ.ತಿಮ್ಮಾಪುರ


ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ನೀರಾ ಸೇವನೆಯಿಂದ ದೇಹಕ್ಕೆ ಒಳಿತಾಗಲಿದೆ ಎಂಬುದು ವೈಜ್ಞಾನಿಕ ಸಮೀಕ್ಷೆಯಿಂದ ಸಾಬೀತಾಗಿದೆ’’ ಎಂದರು. ‘‘ಕೇಂದ್ರ ಸರಕಾರವು ಪೋರ್ಟಬಲ್ ಆ್ಯಂಡ್ ನಾನ್ ಪೋರ್ಟಬಲ್ ಸ್ಪಿರಿಟ್ ಪೂರೈಕೆ ಪದ್ಧತಿಯನ್ನು ಕೈಗಾರಿಕೆ ವಲಯಗಳಲ್ಲಿ ಜಾರಿಗೆ ತಂದಿರುವುದರಿಂದ ಮದ್ಯದ ನಕಲು ಮಾರಾಟ ಸಾಧ್ಯತೆಯಿದೆ. ಇದರ ತಡೆಗೆ ಅಗತ್ಯ ಕ್ರಮದ ಕುರಿತು ಗಂಭೀರ ಚಿಂತನೆ ನಡೆಸಲಾಗುವುದು’’ ಎಂದು ತಿಳಿಸಿದರು.

ನಕಲಿ ಮದ್ಯ ತಡೆಗೆ ಕ್ರಮ: ‘‘ನಕಲಿ ಮದ್ಯ, ಅಕ್ರಮ ಮಾರಾಟಗಾರರ ವಿರುದ್ಧ ಈಗಾಗಲೇ ಕಾನೂನಾತ್ಮಕ ಕ್ರಮಕೈಗೊಳ್ಳಲಾಗಿದೆ. ಪ್ರಗತಿಪರ ಹೋರಾಟಗಾರರ ತೀವ್ರ ವಿರೋಧ ಹಿನ್ನೆಲೆಯಲ್ಲಿ ಹೊಸ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ’’ ಎಂದ ಅವರು, ‘‘ಗಾಂಜಾ, ಅಫೀಮು ಮಾರಾಟ ಜಾಲ ತಡೆಗೆ ರಾಷ್ಟ್ರೀಯ ಮಾದಕ ಮಾರಾಟ ನಿಷೇಧ ಕುರಿತು ವಿಶೇಷ ತನಿಖಾದಳ ರಚಿಸಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಈ ದಳದ ಅಧ್ಯಕ್ಷರಾಗಿರುತ್ತಾರೆ’’ ಎಂದು ವಿವರಿಸಿದರು.

‘‘ವಿಧಾನಸಭೆ ವಜ್ರ ಮಹೋತ್ಸವ ಅಂಗವಾಗಿ ಚಿನ್ನ, ಬೆಳ್ಳಿ ಬಿಸ್ಕೆಟ್ ವಿತರಿಸಿದರೂ ತಾವು ಸ್ವೀಕರಿಸುವುದಿಲ್ಲ’’ ಎಂದು ತಿಳಿಸಿದ ಸಚಿವ ಆರ್.ಬಿ.ತಿಮ್ಮಾಪುರ ಅವರು, ‘‘ಉನ್ನತ ಶಿಕ್ಷಣ ಇಲಾಖೆ ಸಚಿವ ಬಸವರಾಜ ರಾಯರೆಡ್ಡಿ ಅವರನ್ನು ಡಕಾಯಿತರು ಎಂದು ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಯ್ಯನವರ ಸಂಸ್ಕೃತಿ ಎಂಥದ್ದು ಎಂಬುದನ್ನು ಬಿಂಬಿಸುತ್ತದೆ’’ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಮಹಾಸಭಾದ ಅಧ್ಯಕ್ಷ ಕೆ.ಕುಮಾರಸ್ವಾಮಿ ಸೇರಿ ಇತರ ಪದಾಧಿಕಾರಿಗಳಿದ್ದರು.

.............

ಕಳೆದ ವರ್ಷ ನಿಗದಿಪಡಿಸಿದ ಮದ್ಯ ಮಾರಾಟದ 30ಸಾವಿರ ಕೋಟಿ ರೂ. ಗುರಿಯಲ್ಲಿ ಅಂದಾಜು 15,300 ಕೋಟಿ ರೂ. ಆದಾಯ ಹರಿದು ಬಂದಿದೆ. ಪ್ರಸಕ್ತ ವರ್ಷ ನಿಗದಿಪಡಿಸಿದ 18,500 ಕೋಟಿ ರೂ. ಗುರಿಗೆ ಈಗಾಗಲೇ 8ಸಾವಿರ ಕೋಟಿ ರೂ. ಆದಾಯ ಹರಿದುಬಂದಿದೆ.

-ಆರ್.ಬಿ.ತಿಮ್ಮಾಪುರ, ಸಚಿವರು, ಅಬಕಾರಿ ಇಲಾಖೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ